- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಪ್ರತಿಷ್ಠಾ ದಶಮಾನೋತ್ಸವ ಪ್ರಯುಕ್ತ ವಿಶೇಷ “ದೀಪಾಲಂಕಾರ ಸೇವೆ”

Venkataramana Deepotsava [1] ಮಂಗಳೂರು : ಶ್ರೀ ವೆಂಕಟರಮಣ ದೇವಸ್ಥಾನ ರಥಬೀದಿ ಇದರ ಪ್ರತಿಷ್ಠಾ ದಶಮಾನೋತ್ಸವ ಪ್ರಯುಕ್ತ ಇಂದು ಶ್ರೀದೇವಳ ದಲ್ಲಿ ವಿಶೇಷ ” ದೀಪಾಲಂಕಾರ ಸೇವೆ ” ನಡೆಯಿತು .

ಶ್ರೀ ಕಾಶೀ ಮಠ ಸಂಸ್ಥಾನದ ಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರ ಅಮೃತ ಹಸ್ತಗಳಿಂದ ದೀಪಪ್ರಜ್ವಲನೆ ನಡೆದು ಬಳಿಕ ಶ್ರೀ ದೇವರ ಪ್ರತಿಷ್ಠಾ ದಶಮಾನೋತ್ಸವ ಪ್ರಯುಕ್ತ ಮಹಾ ಪ್ರಾರ್ಥನೆ ನೆರವೇರಿತು.

ಶ್ರೀ ಗಳವರಿಂದ ಮಹಾ ಮಂಗಳಾರತಿ ನಡೆದು ತದನಂತರ ಪ್ರಸಾದ ವಿತರಿಸಲಾಯಿತು . ದೇವಳದ ಮೊಕ್ತೇಸರರಾದ ಸಿ ಎಲ್ ಶೆಣೈ , ಪ್ರಶಾಂತ್ ರಾವ್ , ರಾಮಚಂದ್ರ ಕಾಮತ್ ಉಪಸ್ಥಿತರಿದ್ದರು.

Venkataramana Deepotsava [2]

ಚಿತ್ರ : ಮಂಜು ನೀರೇಶ್ವಾಲ್ಯ