- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಅಮಲು ಪದಾರ್ಥ ಸೇವಿಸಿ ಮನೆಗೆ ಬಂದ ಮಗನನ್ನು ಕೊಡಲಿಯ ಮರದ ಹಿಡಿಯಿಂದ ಹೊಡೆದು ಕೊಲೆ ಮಾಡಿದ ತಂದೆ

dinesh [1]ವಿಟ್ಲ : ತಂದೆ ತನ್ನ ಮಗನನ್ನೇ ಹೊಡೆದು ಕೊಲೆಗೈದ ಘಟನೆ ವಿಟ್ಲಮುಡ್ನೂರು ಗ್ರಾಮದ ಕಾಂತಮೂಲೆ ಎಂಬಲ್ಲಿ ಫೆ.23ರಂದು ರಾತ್ರಿ ನಡೆದಿದೆ.

ವಿಟ್ಲ ಮುಡ್ನೂರು ಗ್ರಾಮದ ಕಾಂತಮೂಲೆ ನಿವಾಸಿ ದಿನೇಶ್(40)ರವರು ಕೊಲೆಯಾದವರು.

ಕಾಂತಮೂಲೆಯ ಮನೆಯಲ್ಲಿ ತಂದೆ ವಸಂತ ಗೌಡ ಮತ್ತು ಮಗ ಮಾತ್ರವೇ ವಾಸವಾಗಿದ್ದು, ಮೃತ ದಿನೇಶನು ಪ್ರತಿ ದಿನ ಅಮಲು ಪದಾರ್ಥ ಸೇವಿಸಿ ಮನೆಗೆ ಬಂದು ತಂದೆಯಲ್ಲಿ ಗಲಾಟೆ ಮಾಡುತ್ತಿದ್ದು ಇದರಿಂದ ತಂದೆ ವಸಂತ ಗೌಡ ಅದೇ ಕೋಪದಿಂದ ಫೆ.23ರಂದು ರಾತ್ರಿ ಕೊಡಲಿಯ ಮರದ ಹಿಡಿಯಿಂದ ದಿನೇಶನ ತಲೆ ಹಾಗೂ ಮುಖದ ಭಾಗಕ್ಕೆ ಹೊಡೆದಿದ್ದಾರೆ .

ತೀವ್ರ ತರಹದ ಗಾಯವುಂಟಾಗಿ ವಿಪರೀತ ರಕ್ತಸ್ರಾವವಾಗಿ ಮೃತಪಟ್ಟಿದ್ದಾರೆ ಎಂದು ಮೃತ ದಿನೇಶ ಸಹೋದರ ಎಮ್. ವಿ ಮುರಳಿ ಎಂಬವರು ಪೊಲೀಸರಿಗೆ ದೂರು ನೀಡಿದ್ದಾರೆ.

ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.