- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ದಕ್ಷಿಣ ಕನ್ನಡ ಡಿಸಿ ಭೇಟಿ ಮಾಡಿದ ಮಂಗಳೂರು ಲಾರಿ ಮಾಲೀಕರ ಯೂನಿಯನ್ : ಬೇಡಿಕೆ ಈಡೇರದಿದ್ದಲ್ಲಿ ಲಾರಿ ಮುಷ್ಕರ

[1]

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಲಾರಿ ಮಾಲೀಕರ ಸಂಘ (ರಿ.) ಇದರ ಪದಾಧಿಕಾರಿಗಳು ಇಂದು ಲಾರಿ ಮಾಲೀಕರ ಸಮಸ್ಯೆಗಳ ಕುರಿತಾಗಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲೈ ಮುಹಿಲನ್ ಅವರಿಗೆ ಸೆ. 16 ರಂದು ಮನವಿ ಸಲ್ಲಿಸಿದರು.

ಸರಕಾರ ನಿಗದಿ ಪಡಿಸಿದ ಬಾಡಿಗೆ ದರ ನೀಡುವಂತೆ ಹಾಗೂ ಇತರ ಬೇಡಿಕೆಗಳನ್ನು ಈಡೇರಿಸುವ ಬಗ್ಗೆ ಸಾರಿಗೆ ಅಧಿಕಾರಿಗಳ ಸಭೆ ನಡೆಸುವಂತೆ ಕೋರಲಾಯಿತು.

ವಾರದೊಳಗೆ ಬಾಡಿಗೆ ದರ ನಿಗದಿಪಡಿಸದೇ ಇದ್ದಲ್ಲಿ ಕಲ್ಲಿದ್ದಲು ಸೇರಿದಂತೆ ಇತರ ಎಲ್ಲ ಸರಕು ಸಾಗಾಣಿಕೆಯನ್ನು ಸ್ವಯಂಪ್ರೇರಿತ ಮುಷ್ಕರ ಮಾಡಲಿದ್ದೇವೆ ಎಂದು ಲಾರಿ ಮಾಲಕರು ತೀರ್ಮಾನಿಸಿದ್ದಾರೆ.

ಈ ಬಗ್ಗೆ ಜಿಲ್ಲಾಧಿಕಾರಿ ಮಲೈ ಮುಹಿಲನ್ ಅವರು ಕೂಡಲೇ ಸಭೆ ಕರೆದು ಯೂನಿಯನ್ ಪದಾಧಿಕಾರಿಗಳನ್ನು ಆಹ್ವಾನಿಸಿ ಚರ್ಚಿಸುವ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಗೌರವಾಧ್ಯಕ್ಷರಾದ ಸುಜಿತ್ ಆಳ್ವ, ಅಧ್ಯಕ್ಷರಾದ ಸುಶಾಂತ್ ಶೆಟ್ಟಿ, ಉಪಾಧ್ಯಕ್ಷ ನಿಸಾರ್ ಅಹಮದ್ ನೆಲ್ಯಾಡಿ, ಜೊತೆ ಕಾರ್ಯದರ್ಶಿ ಹಾರಿಸ್ ಹೊಸ್ಮಾರ್, ಇಲ್ಯಾಸ್ ಮಿಸ್ಬಾ, ಖಾಸಿಮ್ ಜಾಸ್ಮೀನ್, ಸಾದಿಕ್ ಐಡಿಯಲ್, ಶಾಹಿದ್ ಮಿಯಾರ್ ಉಪಸ್ಥಿತರಿದ್ದರು.