- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಕೊಲೆ ಆರೋಪಿಯನ್ನು ತಲೆಗೆ ಕಲ್ಲು ಎತ್ತಿ ಹಾಕಿ ಕೊಲೆಗೈದು ಪೊದೆಗೆ ಎಸೆದರು

[1]

ಕಾಸರಗೋಡು : ತಲೆಗೆ ಕಲ್ಲು ಎತ್ತಿ ಹಾಕಿ ಕೊಲೆ ಪ್ರಕರಣದ ಆರೋಪಿಯೋರ್ವನ ಕೊಲೆಗೈದು ಮೃತ ದೇಹವನ್ನು ಪೊದೆಗೆ ಎಸೆದ ಘಟನೆ ಕುಂಬಳೆಯಲ್ಲಿ ನಡೆದಿದೆ.

ಕುಂಬಳೆ ಶಾಂತಿ ಪಳ್ಳದ ಅಬ್ದುಲ್ ರಶೀದ್ (38) ಮೃತಪಟ್ಟ ವ್ಯಕ್ತಿ ಎನ್ನಲಾಗಿದೆ.

ಕುಂಬಳೆ ಸಮೀಪದ ಪೊದೆಯೊಂದರಲ್ಲಿ ಇಂದು ಬೆಳಿಗ್ಗೆ ಅಬ್ದುಲ್ ರಶೀದ್ ಮೃತ ದೇಹ ಪತ್ತೆಯಾಗಿದೆ. ಈತ ಮಧೂರು ಪಟ್ಲದ ಶಾನ್ ವಾಜ್ ( 24) ಕೊಲೆ ಪ್ರಕರಣದ ಆರೋಪಿ.

ಸೋಮವಾರ ಬೆಳಿಗ್ಗೆ ಮೈದಾನಕ್ಕೆ ಆಟವಾಡಲು ಬಂದಿದ್ದ ಮಕ್ಕಳು ಮೈದಾನದಲ್ಲಿ ರಕ್ತದ ಕಲೆಗಳನ್ನು ಕಂಡು ಪರಿಸರ ವಾಸಿಗಳಿಗೆ ಮಾಹಿತಿ ನೀಡಿದ್ದು, ಬಳಿಕ ನಡೆದ ಶೋಧ ದಿಂದ ಮೈದಾನ ದಿಂದ 50 ಮೀಟರ್ ದೂರದ ಪೊದೆಯೊಂದರಲ್ಲಿ ಮೃತದೇಹ ಪತ್ತೆಯಾಗಿದೆ.

ಕುಂಬಳೆ ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ಆರಂಭಿಸಿದ್ದಾರೆ. ಶ್ವಾನದಳ, ಬೆರಳಚ್ಚು ತಜ್ಞರು ಸ್ಥಳಕ್ಕಾಗಮಿಸಿ ಮಾಹಿತಿ ಕಲೆ ಹಾಕಿದ್ದಾರೆ.

ಇನ್ನು 2019ರ ಅಕ್ಟೋಬರ್ 18 ರಂದು ನಡೆದ ಶಾನು ಎಂಬವರ ಕೊಲೆಯಲ್ಲಿ ಭಾಗಿಯಾಗಿದ್ದನು. ನಗರದ ನಾಯಕ್ಸ್ ರಸ್ತೆಯ ಸಮೀಪ ಜನವಾಸ ಇಲ್ಲದ ಮನೆಯ ಬಾವಿಗೆ ಶಾನು ರನ್ನು ಕೊಲೆ ಗೈದು ಎಸೆಯಲಾಗಿತ್ತು.

ಮಾದಕ ವಸ್ತು ವ್ಯವಹಾರಕ್ಕೆ ಸಂಬಂಧ ಪಟ್ಟಂತೆ ಶಾನುರನ್ನು ಕತ್ತು ಹಿಸುಕಿ ಕೊಲೆ ಗೈದು ಬಾವಿಗೆ ಎಸೆಯ ಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ರಶೀದ್ ಸೇರಿದಂತೆ ನಾಲ್ವರನ್ನು ಕಾಸರಗೋಡು ಪೊಲೀಸರು ಬಂಧಿಸಿದ್ದರು. ರಶೀದ್ ವಿರುದ್ಧ ಕುಂಬಳೆ, ಕಾಸರಗೋಡು ನಗರ ಠಾಣೆ ಗಳಲ್ಲಿ ಹಲವು ಪ್ರಕರಣಗಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ.