- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಸಯ್ಯಿದ್ ಮದನಿ ದರ್ಗಾದ ಕಚೇರಿಯ ಬೀಗ ಹೊಡೆದು ಪರಿಶೀಲನೆ ನಡೆಸಿದ ಅಧಿಕಾರಿಗಳು

[1]

ಉಳ್ಳಾಲ : ಸಯ್ಯಿದ್ ಮದನಿ ದರ್ಗಾ ಇದರ ನೂತನ ಆಡಳಿತ ಸಮಿತಿ ಗೆ, ಹಿಂದಿನ ಆಡಳಿತ ಸಮಿತಿಯು, ಏಳು ತಿಂಗಳಾದರೂ ಮುಖ್ಯ ಕಛೇರಿಯ ಕೀ ಹಸ್ತಾಂತರ ಮಾಡದೇ ಇದ್ದುದರಿಂದ ಸದ್ರಿ ಕಚೇರಿಯನ್ನು ಮಂಗಳವಾರ ಉಳ್ಳಾಲ ತಹಶೀಲ್ದಾರ್ ಹಾಗೂ ವಕ್ಫ್ ಅಧಿಕಾರಿಗಳ ಸಮಕ್ಷಮದಲ್ಲಿ ತೆರೆದು ಪರಿಶೀಲನೆ ನಡೆಸಲಾಯಿತು.

ಹೊಸ ಸಮಿತಿ 2023ರ ಮಾ. 8 ರಂದು ಅಧಿಕಾರಕ್ಕೆ ಬಂದಿದೆ. ಹಿಂದೆ ಆಡಳಿತ ದಲ್ಲಿದ್ದ ಸಮಿತಿ ಹೊಸ ಸಮಿತಿಗೆ ಕೊಠಡಿ ಕೀ ನೀಡಿರಲಿಲ್ಲ. ಈ ಕಾರಣದಿಂದ ಎಲ್ಲರ ಸಮಕ್ಷಮದಲ್ಲಿ ಕೊಠಡಿ ತೆರೆದು ಮಹಜರು ನಡೆಸಿದಾಗ 38,058 ನಗದು ಹಾಗೂ ದಾಖಲೆ ಪುಸ್ತಕ ಗಳು ಲಭಿಸಿದ್ದು, ಅದನ್ನು ಸಂಬಂಧ ಪಟ್ಟ ವರಿಗೆ ಹಸ್ತಾಂತರಿಸಲಾಗಿದೆ.

ಹಿಂದಿನ ಆಡಳಿತ ಸಮಿತಿ ಸದಸ್ಯರು ಕಚೇರಿ ಕೀ ಹಸ್ತಾಂತರ ಮಾಡದ ಕಾರಣ ಮುಚ್ಚಿದ್ದ ಕೊಠಡಿಯನ್ನು ಎಲ್ಲರ ಸಮಕ್ಷಮದಲ್ಲಿ ತೆರೆದು ಪಂಚನಾಮೆ ನಡೆಸಿ ದಾಖಲೆಗಳನ್ನು ಹೊಸ ಆಡಳಿತ ಸಮಿತಿ ಸದಸ್ಯರಿಗೆ ಹಸ್ತಾಂತರ ಮಾಡಿದ್ದೇವೆ ಎಂದು ವಕ್ಫ್ ಅಧಿಕಾರಿ ಅಬೂಬಕ್ಕರ್ ಹೇಳಿದ್ದಾರೆ.

ದರ್ಗಾ ಅಧ್ಯಕ್ಷ ಹನೀಫ್ ಹಾಜಿ ಮಾತನಾಡಿ, ಐದು ವರ್ಷಗಳಿಗೊಮ್ಮೆ ಉರೂಸ್ ನಡೆಸಿ ಆರು ತಿಂಗಳಲ್ಲಿ ಚುನಾವಣೆ ನಡೆಸಿ ಅಧಿಕಾರ ಹಸ್ತಾಂತರ ಮಾಡುವ ಸಂಪ್ರದಾಯ ಕೇಂದ್ರ ಜುಮಾ ಮಸೀದಿ ಯಲ್ಲಿ ಇತ್ತು. 2016 ರ ಲ್ಲಿ ಅಧಿಕಾರ ಪಡೆದ ರಶೀದ್ ಹಾಜಿ ಅವರ ಸಮಿತಿ ಅಧಿಕಾರ ಹಸ್ತಾಂತರ ಮಾಡದೇ ಕಚೇರಿ ಕೀ ನೀಡದೇ ಅನ್ಯಾಯ ಮಾಡಿದೆ ಎಂದರು.
ಈ ಬಗ್ಗೆ ಸಂಬಂಧಪಟ್ಟ ಇಲಾಖೆಯ ಗಮನಹರಿಸಿದ ಬಳಿಕ ಅಧಿಕಾರ ಹಿಡಿದು ಏಳು ತಿಂಗಳ ಬಳಿಕ ಅಧಿಕಾರಿಗಳು ಕಚೇರಿ ತೆರೆದು ಪಂಚನಾಮೆ ನಡೆಸಿ ನಗದು ಹಾಗೂ ದಾಖಲೆ ಪುಸ್ತಕ ಗಳನ್ನು ನೀಡಿದ್ದಾರೆ ಎಂದು ಹೇಳಿದರು.

ಅಧ್ಯಕ್ಷರಾದ ಬಿ.ಜಿ ಹನೀಫ್ ಹಾಜಿ, ಉಪಾಧ್ಯಕ್ಷ ಅಶ್ರಫ್ ರೈಟ್ವೇ, ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಶಿಹಾಬುದ್ದೀನ್ ಸಖಾಫಿ, ಕೋಶಾಧಿಕಾರಿ ನಾಝಿಮ್ ಮುಕ್ಕಚೇರಿ, ಜತೆ ಕಾರ್ಯದರ್ಶಿಗಳಾದ, ಇಸಾಕ್ ಮೇಲಂಗಡಿ, ಮುಸ್ತಫ ಮದನಿನಗರ, ಅಡಿಟರ್ ಫಾರೂಕ್, ವಕ್ಫ್ ಅಧಿಕಾರಿ ಅಬೂಬಕ್ಕರ್,ಕಂದಾಯ ನಿರೀಕ್ಷಕರು ಮಂಜುನಾಥ ಎರಡನೇ ದರ್ಜೆಯ ಸಿಬ್ಬಂದಿ,ಕೆ.ಎಚ್, ರಫೀಕ್ ಉಪಸ್ಥಿತರಿದ್ದರು.

ಪರಿಶೀಲನೆ ಸಂದರ್ಭದಲ್ಲಿ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಸಹಾಯಕ ಪೊಲೀಸ್‌ ಆಯುಕ್ತೆ ಧನ್ಯ ಹಾಗೂ ಉಳ್ಳಾಲ ಠಾಣಾಧಿಕಾರಿ ಬಾಲಕೃಷ್ಣ ಹೆಚ್‌. ಎನ್‌ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.