- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಓಮ್ನಿ ಕಾರು-ಬಸ್ ಮುಖಾ ಮುಖಿ ಡಿಕ್ಕಿ ಓರ್ವ ಸಾವು, ನಾಲ್ವರು ಗಂಭೀರ

Irodi accsident [1]ಕುಂದಾಪುರ : ಐರೋಡಿ ಸಮೀಪದ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ರವಿವಾರ ಸಂಜೆ ಓಮ್ನಿ ಕಾರು ಹಾಗೂ ಬಸ್ ಮುಖಾ ಮುಖಿ ಡಿಕ್ಕಿಯಾದ ಪರಿಣಾಮ ಓರ್ವ ಮೃತಪಟ್ಟು, ನಾಲ್ವರು ತೀವ್ರವಾಗಿ ಗಾಯಗೊಂಡಿದ್ದಾರೆ. ರವಿವಾರ ಮಧ್ಯಾಹ್ನ ಉಡುಪಿಯ ಬೀಚ್ ಉತ್ಸವಕ್ಕೆಂದು ಕುಂದಾಪುರದ ನವೀನ್‌ಚಂದ್ರ, ವಿಮಲೇಶ್‌ ಶೇಟ್‌, ವರದರಾಜ್‌ ಖಾರ್ವಿ, ಮನೋಹರ ಜೋಗಿ, ಸಂತೋಷ್‌ ಖಾರ್ವಿ ಯವರು ಓಮ್ನಿಕಾರಿನಲ್ಲಿ ತೆರಳುತ್ತಿದ್ದ ವೇಳೆ ಸಾಸ್ತಾನದ ಐರೋಡಿ ಬಳಿ ರಾಷ್ಟ್ರೀಯ ಹೆದ್ದಾರಿ ೬೬ರಲ್ಲಿ ಬ್ರಹ್ಮಾವರದಿಂದ ಕುಂದಾ ಪುರದೆಡೆಗೆ ಸಾಗುತ್ತಿದ್ದ ಖಾಸಗಿ ಬಸ್ ಓಮ್ನಿಗೆ ಡಿಕ್ಕಿಯೊಡೆಯಿತು ಪರಿಣಾಮ ಕಾರಿನಲ್ಲಿದ್ದ ಉದ್ಯಮಿ ನವೀನ್‌ಚಂದ್ರ(38) ಸ್ಥಳದಲ್ಲೇ ಮೃತ ಪಟ್ಟಿದ್ದು, ಓಮ್ನಿ ಯಲ್ಲಿದ್ದ ನಾಲ್ವರು ಗಂಭೀರ ಗಾಯಗೊಂಡಿದ್ದು ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕೋಟ ಪೊಲೀಸ್‌ ಠಾಣಾಧಿಕಾರಿ ಅಶೋಕ್‌ ಪಿ. ಘಟನಾ ಸ್ಥಳಕ್ಕೆ ಆಗಮಿಸಿ ತನಿಖೆ ಕೈಗೆತ್ತಿಕೊಂಡಿದ್ದಾರೆ. ಸ್ಥಳೀಯರು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುವಲ್ಲಿ ಸಹಕರಿಸಿದರು.