ಕುಂದಾಪುರ : ಹೋಟೆಲ್ ಉದ್ಯಮಿ ಯೊಬ್ಬರ ಮೃತದೇಹ ಗೋಡಂಬಿ ಮರದ ಕೊಂಬೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಆತ್ಮಹತ್ಯೆಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದೆ.
ಮೃತರನ್ನು ಕಲ್ತೋಡು ಗ್ರಾಮದ ಕಬ್ಸೆ ಬಾಳೆಹಿತ್ಲು ನಿವಾಸಿ ರಾಘವೇಂದ್ರ ಶೆಟ್ಟಿ (37) ಎಂದು ಗುರುತಿಸಲಾಗಿದೆ.
ರಾಘವೇಂದ್ರ ಶೆಟ್ಟಿ ಅವರು ಬೈಂದೂರಿನಲ್ಲಿ ಹೋಟೆಲ್ ಹೊಂದಿದ್ದು, ಸೆ.18ರಂದು ಮನೆಯಿಂದ ಹೊರ ಹೋಗುವಾಗ ರಾತ್ರಿ ಹೊಟೇಲ್ನಲ್ಲಿಯೇ ಉಳಿದುಕೊಳ್ಳುವುದಾಗಿ ಹೇಳಿ ಮನೆಗೆ ಹೋಗಿರಲಿಲ್ಲ.
ಸೆಪ್ಟಂಬರ್ 19ರಂದು ಕಬ್ಸೆ ಕೋಳಿ ಫಾರಂ ಬಳಿಯ ಗೋಡಂಬಿ ಮರದ ಕೊಂಬೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶೆಟ್ಟಿ ಅವರ ಮೃತದೇಹ ಪತ್ತೆಯಾಗಿದ್ದು, ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ.
ಈ ಸಂಬಂಧ ಬೈಂದೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Click this button or press Ctrl+G to toggle between Kannada and English