ದೋಹಾ ಕತಾರ್: 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕತಾರ್ ಕರ್ನಾಟಕ ಸಂಘದ ಅಧ್ಯಕ್ಷ ಶ್ರೀ ಮಹೇಶ್ ಗೌಡ ಅವರನ್ನು ಭವ್ಯ ವೇದಿಕೆಯಲ್ಲಿ ಸನ್ಮಾನಿಸಲಾಯಿತು.
2023 ರ ಜನವರಿ 6-8 ರ 3 ದಿನಗಳ ಹಾವೇರಿಯಲ್ಲಿ ನಡೆದ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಕೊಡುಗೆ ನೀಡಿದ 86 ಸಾಧಕರಿಗೆ ಸನ್ಮಾನಿಸಲಾಯಿತು. ಜನವರಿ 6 ರಂದು ನಡೆದ ಈ ಸನ್ಮಾನ ಸಮಾರಂಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಡಾ. ಮಹೇಶ್ ಜೋಶಿ, ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧಿಪತಿಗಳದ ಜಗದ್ಗುರು ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ, ಸುಪ್ರೀಂ ಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಹಾಗೂ ಮಾಜಿ ಲೋಕಾಯುಕ್ತ ಸಂತೋಷ್ ಹೆಗ್ಡೆ ಮತ್ತು ಕನ್ನಡದ ಖ್ಯಾತ ನಟ ಶ್ರೀ. ರಮೇಶ್ ಅರವಿಂದ್ ಅವರು ಉಪಸ್ಥಿತರಿದ್ದರು.
ಹೊರನಾಡಿನಲ್ಲಿ ಕನ್ನಡ ನಾಡು, ನುಡಿ, ಸಂಸ್ಕೃತಿಗೆ ಸಕ್ರಿಯ ಸೇವೆಗಾಗಿ ಶ್ರೀ ಮಹೇಶ್ ಗೌಡ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು, ಕಳೆದ 14 ವರ್ಷಗಳಿಂದ ವಿದೇಶಿ ನೆಲದಲ್ಲಿ ಕನ್ನಡ ಸಂಸ್ಕ್ರತಿ, ಭಾಷೆಯನ್ನು ಉಳಿಸುವ, ಬೆಳೆಸುವ ಕಾರ್ಯದಲ್ಲಿ ಮತ್ತು ವಾರಾಂತ್ಯದ ಕನ್ನಡ ಕಲಿ ತರಗತಿಗಳು, ಕತಾರ್ನಲ್ಲಿರುವ ಭಾರತೀಯ ಶಾಲೆಗಳಿಗೆ ಕನ್ನಡ ತರಗತಿಗಳನ್ನು ಪ್ರಾರಂಭಿಸಲು ನಿರಂತರ ಮನವಿಯೊಂದಿಗೆ ಎರಡು ಶಾಲೆಗಳಲ್ಲಿ ಕನ್ನಡ ಭಾಷೆಯನ್ನು ಪ್ರಾರಂಭಿಸಲು ಸಾಧ್ಯವಾಯಿತು, ಹಾಗೂ ಕರ್ನಾಟಕ ಸರ್ಕಾರದ ಹೊರದೇಶಗಳ ಕಾರ್ಯಕ್ರಮಗಳಲ್ಲಿ ಬೆನ್ನೆಲುಬಾಗಿದ್ದಾರೆ.
ಬೆಂಗಳೂರು ಪೂರ್ವ ತಾಲೂಕಿನ ತಿರುಮೇನಹಳ್ಳಿ ಗ್ರಾಮದ ಪ್ರಸಿದ್ಧ ಕೃಷಿ ಕುಟುಂಬಕ್ಕೆ ಸೇರಿದವರಾದ ಖ್ಯಾತ ಕೃಷಿಕ ದಿವಂಗತ ಎನ್ ರಾಮಯ್ಯ ಮತ್ತು ಕಮಲಮ್ಮ ದಂಪತಿಗಳಿಗೆ ಜನಿಸಿದರು. ಅವರು ತಮ್ಮ ಪತ್ನಿ ಸುಮಾ ಮಹೇಶ್ ಮತ್ತು ಮಗಳು ದಿಯಾ ಮಹೇಶ್ ಮತ್ತು ಅರ್ಜುನ್ ಗೌಡ ಅವರೊಂದಿಗೆ ಕತಾರ್ನಲ್ಲಿ ನೆಲೆಸಿದ್ದಾರೆ, ಶ್ರೀಮತಿ ಸುಮಾ ಅವರು ಇಂಟೀರಿಯರ್ ಡಿಸೈನರ್ ಆಗಿ ಕೆಲಸ ಮಾಡುತ್ತಿದ್ದಾರೆ ಮತ್ತು ಸಕ್ರಿಯ ಸಾಮಾಜಿಕ-ಸಾಂಸ್ಕೃತಿಕ ಕಾರ್ಯಕರ್ತೆಯೂ ಆಗಿದ್ದಾರೆ
ಕತಾರ್ನಲ್ಲಿ ಸಹಾಯದ ಅಗತ್ಯವಿರುವ ನಮ್ಮ ಭಾರತೀಯರು ಮತ್ತು ಕನ್ನಡಿಗರನ್ನು ಬೆಂಬಲಿಸಲು ಸಾಮಾಜಿಕ ಸೇವೆಗಳಲ್ಲಿ ತೊಡಗಿರುವ ಸಹಾನುಭೂತಿಯ ಸಮಾಜ ಸೇವಕ. ಮಹಾಮಾರಿ ಕರೋನಾ ಸಂದರ್ಭದಲ್ಲಿ ಪರಿಹಾರ ಕಾರ್ಯಗಳಲ್ಲಿ ಭಾಗವಹಿಸಿದರು, ಈ ಕಾರ್ಯಕ್ಕೆ ಕತಾರ್ನ ಭಾರತದ ರಾಯಭಾರಿಯಿಂದ “ಕರೋನಾ ವಾರಿಯರ್” ಎಂದು ಬಿರುದು ಪಡೆದ ಹೆಗ್ಗಳಿಕೆ. ಅದೇ ಭವ್ಯ ವೇದಿಕೆಯಲ್ಲಿ ಕನ್ನಡದ ಖ್ಯಾತ ನಟ ಶ್ರೀ. ರಮೇಶ್ ಅರವಿಂದ್ ಹಾಗೂ ಇತರ ಸಾಧಕರನ್ನು ಸನ್ಮಾನಿಸಲಾಯಿತು.
Click this button or press Ctrl+G to toggle between Kannada and English