[1]ಮಂಗಳೂರು : ಸ್ನೇಹಿತರ ಜೊತೆ ಗುರುಪುರ ಹೊಳೆಯ ಬಳಿಯ ಅದ್ಯಪಾಡಿ ಡ್ಯಾಂಗೆ ಈಜಲು ತೆರಳಿದ್ದ ವಿದ್ಯಾರ್ಥಿಯೊಬ್ಬ ನೀರಿನ ಸೆಳೆತಕ್ಕೆ ಸಿಲುಕಿ ಮೃತ ಪಟ್ಟ ಘಟನೆ ಶನಿವಾರ ನಡೆದಿದೆ. ಮೃತಪಟ್ಟ ವಿದ್ಯಾರ್ಥಿ ನಗರದ ಎಸ್.ಡಿ.ಎಂ ಉದ್ಯಮಾಡಳಿತ ಕಾಲೇಜಿನ ಪ್ರಥಮ ವರ್ಷದ ಬಿಬಿಎಂ ವಿದ್ಯಾರ್ಥಿ ನಿಹಾಲ್ ಬಂಗೇರ(18) ಎನ್ನಲಾಗಿದೆ.
ಈತ ಬೊಕ್ಕಪಟ್ಣದ ಕರ್ನಲ್ ಗಾರ್ಡನ್ ಕೇಶವ ಬಂಗೇರ ಮತ್ತು ರತ್ನ ಬಂಗೇರ ರ ಇಬ್ಬರು ಮಕ್ಕಳಲ್ಲಿ ಈತ ಹಿರಿಯವನಾಗಿದ್ದಾನೆ.
ಶನಿವಾರ ಬೆಳಗ್ಗೆ ಆಂತರಿಕ ಮೌಲ್ಯಮಾಪನ ಪರೀಕ್ಷೆ ಮುಗಿದ ಬಳಿಕ ಮಧ್ಯಾಹ 1.30 ರ ವೇಳೆಗೆ ನಿಹಾಲ್ ಸಹಿತ 10 ಮಂದಿ ಸ್ನೇಹಿತರು ಪಿಲಿಕುಳ ನಿಸರ್ಗಧಾಮಕ್ಕೆಂದು ತೆರಳಿದ್ದರು. ಆದರೆ ಮೂಡುಶೆಡ್ಡೆ ತಲುಪಿದಾಗ ಅವರ ಯೋಜನೆ ಬದಲಾಗಿ ಪಿಲಿಕುಳಕ್ಕೆ ಹೋಗುವ ಬದಲು ಸಮೀಪದ ಅದ್ಯಪಾಡಿ ಡ್ಯಾಂ ಗೆ ತೆರಳಿ, ಡ್ಯಾಂನ ಕೆಳಗಡೆ ಇರುವ ನದಿಯ ನೀರಿನಲ್ಲಿ ಈಜಾಡಲು ನಿರ್ಧರಿಸಿದ್ದಾರೆ. ಆದರೆ ನಿಹಾಲ್ ಮೊದಲು ನೀರಿಗೆ ಇಳಿದು ನೀರಿನಿಂದ ಮೇಲಕ್ಕೆ ಬಾರದೆ ಇದ್ದುದನ್ನು ಕಂಡು ಗಾಬರಿಗೊಂಡ ಇತರ ಸ್ನೇಹಿತರು ನಿಹಾಲ್ ಅವರ ಸಂಬಂಧಿಕರಿಗೆ ದೂರವಾಣಿ ಕರೆ ಮಾಡಿ ವಿಷಯ ತಿಳಿಸಿದ್ದಾರೆ.
ಕಾವೂರು ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.