ಉಡುಪಿ : ಮಣಿಪಾಲದಿಂದ ಎಕ್ಷ್ ಪ್ರೆಸ್ ಬಸ್ ವೊಂದರಲ್ಲಿ ಮಂಗಳೂರಿಗೆ ವಾಪಾಸಾಗುತ್ತಿದ್ದ ಮಂಗಳೂರು – ಕಾಟಿಪಳ್ಳದ ಯುವಕರ ಮೇಲೆ ಯುವಕರ ತಂಡವೊಂದು ಹಲ್ಲೆ ನಡೆಸಿದ ಘಟನೆ ಬುಧವಾರ ಸಂಜೆ ಕಾಪುವಿನಲ್ಲಿ ನಡೆದಿದೆ.
ಮಣಿಪಾಲದಿಂದ ಮಂಗಳೂರಿಗೆ ತೆರಳುತ್ತಿದ್ದ ಮಂಗಳೂರು – ಕಾಟಿಪಳ್ಳದ ಯುವಕರಾದ ಶ್ರೀನಾಥ್ (23), ರಾಜೇಶ್ (24) ಹಲ್ಲೆಗೊಳಗಾದವರಾಗಿದ್ದಾರೆ.
ಯುವಕರು ಅನ್ಯಕೋಮಿನ ವಿದ್ಯಾರ್ಥಿನಿಯರೊಂದಿಗೆ ಮಾತನಾಡುತ್ತಿರುವುದನ್ನು ಗಮನಿಸಿ ಬಸ್ ನಲ್ಲಿದ್ದ ಅನ್ಯ ಮತೀಯ ಯುವಕನೋರ್ವ ಸ್ಥಳೀಯ ಮುಸ್ಲಿಂ ಸಂಘಟನೆಯ ಕಾರ್ಯಕರ್ತರಿಗೆ ತಿಳಿಸಿದ್ದು, ಈ ಮಾಹಿತಿಯಾನ್ನಾಧರಿಸಿ ಅನ್ಯ ಮತೀಯ ಸಂಘಟನೆಗೆ ಸೇರಿರುವವರೆನ್ನಲಾದ ಯುವಕರು ಕಾಪು ಬಸ್ ನಿಲ್ದಾಣದಲ್ಲಿ ಬಸ್ ಹತ್ತಿ ಬಸ್ಸಿನಲ್ಲಿದ್ದ ಹಿಂದೂ ಯುವಕರನ್ನು ಬಸ್ಸ್ ನಿಂದ ಕೆಳಗೆಳೆದು ಥಲಿಸಿದ್ದಲ್ಲದೆ ಅದರಲ್ಲಿ ಒಬ್ಬನನ್ನು ಬೈಕ್ ನಲ್ಲಿ ಬಲಾತ್ಕಾರದಿಂದ ಹೊತ್ತೊಯ್ದು ಮುಳೂರು ಸಮೀಪ ಬೆತ್ತದಿಂದ ಥಳಿಸಿದ್ದಾರೆ.
ಸುದ್ದಿ ತಿಳಿಯುತ್ತಿದ್ದಂತೆ ಕಾಪು ಥಾಣೆ ಸಮೀಪ ಸೇರಿದ ಹಿಂದೂ ಸಂಘಟನೆಯ ನೂರಾರು ಕಾರ್ಯಕರ್ತರು ಆರೋಪಿಗಳ ವಿರುದ್ದ ದಿಕ್ಕಾರ ಕೂಗುತ್ತ ಆರೋಪಿಗಳನ್ನು ಕೂಡಲೇ ಬಂದಿಸಬೇಕೆಂದು ಒತ್ತಾಯಿಸಿದೆ.
ಕಾಪು ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರಿಸಿದ್ದಾರೆ.
Click this button or press Ctrl+G to toggle between Kannada and English