[1]ಕುಂದಾಪುರ : ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಸರಕು ತುಂಬಿದ ಟಿಪ್ಪರ್ ಹಾಗೂ ಟಾಟಾ ಏಸ್ ಪರಸ್ಪರ ಢಿಕ್ಕಿಯಾದ ಪರಿಣಾಮ ಟಾಟಾ ಏಸ್ ನ ವಾಹನ ಚಾಲಕ ಯಶವಂತಪುರ ಪೀಣ್ಯದ ಬಶೀರ್ ಹಾಗೂ ಟಿ. ನರಸೀಪುರ ಮೂಲದ ಸಿದ್ಧ ಎಂಬುವರು ಗಂಭೀರ ಗಾಯಗೊಂಡ ಘಟನೆ ಶುಕ್ರವಾರ ನಡೆದಿದೆ.
ಬೆಂಗಳೂರಿನ ವೊಡಾಫೋನ್ ಕಂಪೆನಿಯ ಶ್ರೀ ವಿಘ್ನೇಶ್ವರ ಲಾಜಿಸ್ಟಿಕ್ಗೆ ಸೇರಿದ ಟಾಟಾ ಏಸ್ ವಾಹನವು ಬೆಂಗಳೂರಿನಿಂದ ವೊಢಾಫೋನ್ ಟವರ್ಗೆ ಸಂಬಂಧಿಸಿದ ಸಲಕರಣೆಗಳನ್ನು ಗೋಕರ್ಣದಲ್ಲಿ ಇಳಿಸಿ ವಾಪಾಸ್ಸಾಗುತ್ತಿದ್ದ ವೇಳೆ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಜಾಲಾಡಿ ಸಮೀಪ ಕುಂದಾಪುರ ಕಡೆಯಿಂದ ಬೈಂದೂರು ಕಡೆಗೆ ಪ್ರಯಾಣಿಸುತ್ತಿದ್ದ ಟಿಪ್ಪರ್ ಟಾಟಾ ಏಸ್ ಗೆ ಡಿಕ್ಕಿ ಹೊಡೆದಿದೆ ಪರಿಣಾಮ ಏಸ್ ನ ವಾಹನ ಚಾಲಕ ಹಾಗು ಜೊತೆಗಿದ್ದ ವ್ಯಕ್ತಿ ಗಂಭೀರ ಗಾಯಗೊಂಡಿದ್ದಾರೆ. ಅವರನ್ನು ಕುಂದಾಪುರ ಸರ್ಕಾರೀ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕುಂದಾಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.