- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಬಿಎಂಎಸ್ ಕಾರ್ಯಕರ್ತ ಜ್ಯೋತಿಷ್ ಕೊಲೆಯತ್ನ, ಪ್ರಮುಖ ಆರೋಪಿ ಸೈನುಲ್‌ ಅಬೀದ್‌ ನ ಬಂಧನ

KS Sainul Abid [1]ಕಾಸರಗೋಡು : ಬಿಎಂಎಸ್ ಕಾರ್ಯಕರ್ತ ಅಣಂಗೂರು ಜೆಪಿ ಕಾಲನಿಯ ಜ್ಯೋತಿಷ್(26) ರ ಕೊಲೆಗೆ ಯತ್ನಿಸಿದ ಪ್ರಕರಣದ ಪ್ರಮುಖ ಆರೋಪಿ ತಾಯಲಂಗಾಡಿಯ ಸಿ.ಎ.ಪಿ.ಹೌಸ್‌ನ ಅಬಿ ಯಾನೆ ಕೆ.ಎಸ್‌.ಸೈನುಲ್‌ ಅಬೀದ್‌(22) ನನ್ನು ಬಜ್ಪೆ ವಿಮಾನ ನಿಲ್ದಾಣದಲ್ಲಿ ಕಾಸರಗೋಡು ಡಿವೈಎಸ್ಪಿ ಮೋಹನ್ ಕುಮಾರ್ ನೇತೃತ್ವದ ಪೊಲೀಸ್ ತಂಡವು ಶನಿವಾರ ಬಂಧಿಸಿದ್ದಾರೆ.

೨೦೧೩  ಫೆಬ್ರವರಿ 5,  ರ ರಾತ್ರಿ ತನ್ನ ವಿವಾಹ ಆಮಂತ್ರಣ ಪತ್ರಿಕೆಯನ್ನು ಹಂಚಿ ವಾಪಸ್ಸಾಗುತ್ತಿದ್ದ ಜ್ಯೋತಿಷ್ ಅವರನ್ನು ಆರು ಮಂದಿಯ ತಂಡ  ಅಡ್ಡಗಟ್ಟಿ ವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿತ್ತು. ಈ ಪ್ರಕರಣದ ಇತರ ಆರೋಪಿಗಳನ್ನು ಪೊಲೀಸರು ಈಗಾಗಲೇ ಬಂದಿಸಿದ್ದು ಅಬಿದ್ ಮಾತ್ರ ಪೊಲೀಸರ ಕೈಗೆ ಸಿಕ್ಕಿರಲಿಲ್ಲ. ಈಗಾಗಲೇ ಕಾಸರಗೋಡು ಪೊಲೀಸ್ ಠಾಣೆ ಯಲ್ಲಿ ಈತನ ವಿರುದ್ದ ೫ ಕೇಸುಗಳು ಹಾಗು ವಿದ್ಯಾನಗರ ಪೊಲೀಸ ಠಾಣೆ ಯಲ್ಲಿ ಒಂದು ಕೇಸು ದಾಖಲಾಗಿದೆ.

ಜ್ಯೋತಿಷ್ ರವರನ್ನು ಕಡಿದು ಕೊಲೆಗೈಯಲು ದುಬೈ ಯಲ್ಲಿ ಸ್ಕೆಚ್ ಹಾಕಲಾಗಿದ್ದು ಘಟನೆಯ ಬಳಿಕ ದುಬೈಗೆ ಪರಾರಿಯಾಗಲು ಸಿದ್ದತೆ ನಡೆಸಲಾಗಿತ್ತು ಅದರಂತೆ ಅಬಿದ್ ಮಂಗಳೂರು ವಿಮಾನ ನಿಲ್ದಾಣದಿಂದ ಶನಿವಾರ ಕೊಲ್ಲಿ ರಾಷ್ಟ್ರಕ್ಕೆ ತೆರಳುತ್ತಾನೆ ಎಂಬ ಖಚಿತ ಮಾಹಿತಿಯನ್ನು ಪಡಕೊಂಡ ಪೊಲೀಸರು ಆತನನ್ನು ಬಂಧಿಸಿದ್ದಾರೆ.