Blog Archive

ಕಾಪುವಿನಲ್ಲಿ ಮೀನುಗಾರರ ಬಲೆಗೆ ಬಿದ್ದ ಟನ್‌ಗಟ್ಟಲೆ ಮೀನು, ಮತ್ಸ್ಯಪ್ರಿಯರಿಗೆ ಫುಲ್ ಖುಷಿ

Saturday, August 29th, 2020
fish

ಕಾಪು : ಬಲೆಗೆ ಬಿದ್ದ ಟನ್‌ಗಟ್ಟಲೆ ಮೀನುಗಳನ್ನು ದಡಕ್ಕೆ ಎಳೆಯಲು ಮೀನುಗಾರರು ಬಹಳಷ್ಟು ಶ್ರಮಪಡುತ್ತಿದ್ದರು . ಭಾರೀ ಪ್ರಮಾಣದ ಮೀನಿನಿಂದಾಗಿ ಕೈರಂಪಣಿಯ ಬಲೆ ಹರಿದು, ಮೀನು ಚೆಲ್ಲಾಪಿಲ್ಲಿಯಾಗಿ ಬಿದ್ದಿತ್ತು. ತೀರದಲ್ಲಿ ಮೀನುಗಳು ಮೇಲಕ್ಕೆ ಚಿಮ್ಮುತ್ತಿ ರುವ ದೃಶ್ಯಗಳು ಕಂಡುಬರುತ್ತಿದ್ದವು ಇದು ನಡೆದದ್ದು ಶುಕ್ರವಾರ ಕಟಪಾಡಿ ಮಟ್ಟು ಕಡಲ ತೀರದಲ್ಲಿ. ಕಳೆದ ಎರಡು ದಿನಗಳಿಂದ ಮಟ್ಟು ಕಡಲತೀರದಲ್ಲಿ ರಾಶಿರಾಶಿಯಾಗಿ ಮೀನುಗಳು ಕಂಡುಬರುತ್ತಿದ್ದು. ಕೈರಂಪಣಿ ಬಲೆಗೆ  ಸಿಕ್ಕಿಬಿದ್ದ ಭಾರೀ ಪ್ರಮಾಣದ ಮೀನುಗಳನ್ನು ತೀರಕ್ಕೆ ಎಳೆದು ತರಲು ಮೀನುಗಾರರು ಹರ ಸಾಹಸಪಟ್ಟರು. ಇಲ್ಲಿ ಹೆಜಮಾಡಿಯ ಮೀನುಗಾರರ ತಂಡ […]

ಮಂಗಳೂರು ಮೀನುಗಾರಿಕೆ ಸಂಪೂರ್ಣ ಸ್ಥಗಿತ, ಹಿಡಿದ ಮೀನನ್ನು ಸಮುದ್ರಕ್ಕೆ ಚೆಲ್ಲಿದ ಮೀನುಗಾರ

Friday, March 27th, 2020
Fish

ಮಂಗಳೂರು:  ನಗರದ ಪ್ರಮುಖ ದಕ್ಕೆಯ ಮೀನುಗಾರಿಕಾ ಪ್ರದೇಶ ಕೋವಿಡ್‌ 19 ಆತಂಕದ ಹಿನ್ನೆಲೆಯಲ್ಲಿ ಬಿಕೋ ಎನ್ನುತ್ತಿದೆ.   ಮೀನುಗಾರಿಕೆ ಗುರುವಾರ ದಿಂದ ಸಂಪೂರ್ಣ ಸ್ಥಗಿತಗೊಂಡಿದೆ. ದಕ್ಕೆಯಲ್ಲಿ ಜನ ಸೇರದಂತೆ ಪೊಲೀಸ್‌ ಇಲಾಖೆ ಎಚ್ಚರಿಕೆ ನೀಡಿದ್ದು, ದಕ್ಕೆಯಲ್ಲಿ ಬಂದ್‌ ವಾತಾವರಣವಿದೆ. ಬುಧವಾರ ತಂದ ಮೀನನ್ನು ಮಾರಾಟ ಮಾಡಲಾಗದೆ ಬಹುತೇಕರು ಕಡಲಿಗೆ ಚೆಲ್ಲಿದ ಘಟನೆ ನಡೆದಿದೆ. ಹಿಡಿದ ಬೆಲೆಬಾಳುವ ಮೀನ‌ನ್ನು ಕಡಲಿಗೆ ಚೆಲ್ಲುವ ಸನ್ನಿವೇಶ ಇದೇ ಮೊದಲು ಎಂದು ಮೀನುಗಾರರು ತಿಳಿಸಿದ್ದಾರೆ. ಈ ಮಧ್ಯೆ ಜಿಲ್ಲಾಧಿಕಾರಿಯವರ ವಿಶೇಷ ಅನುಮತಿ ಪಡೆದ ಕೆಲವು ಮೀನುಗಾರರು ಮೀನನ್ನು […]

ಉಳ್ಳಾಲ ಅಳಿವೆಯಲ್ಲಿ ಮೀನುಗಾರಿಕ ಬೋಟ್ ಮುಳುಗಿ ಮೀನುಗಾರ ನಾಪತ್ತೆ

Wednesday, September 21st, 2016
fish-boat

ಮಂಗಳೂರು: ಉಳ್ಳಾಲ ಅಳಿವೆಯಲ್ಲಿ ಮೀನುಗಾರಿಕ ಬೋಟ್ ಮುಳುಗಿ ಮೀನುಗಾರ ನಾಪತ್ತೆಯಾದ ಘಟನೆ ನಡೆದಿದೆ. ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಬಗರ್ ಗ್ರಾಮದ ನಿವಾಸಿ ಹಮೀದ್ ನಾಪತ್ತೆಯಾಗಿರುವ ಮೀನುಗಾರ. ದೋಣಿಯಲ್ಲಿದ್ದ ಕುಮಟಾದ ಕಾಗಲ್‌ನ ನಿವಾಸಿಗಳಾದ ಸಮೀರ್ ಇಸ್ಮಾಯಿಲ್ (30), ರಹೀಂ ಇಸಾಕ್ ವಡೇಕರ್ (30), ಬಗರ್‌ ಗ್ರಾಮದ ಅಬ್ದುಲ್ಲ ಇಸ್ಮಾಲ್ (42), ಪರದ್ ಬಾಹರ್ ಗ್ರಾಮದ ಭುವನ ಕುಮಾರ್ (26) ಮತ್ತು ರಿಶಿಕುಮಾರ್ (30) ಈಜಿ ದಡ ಸೇರಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಸಬಾ ಬೆಂಗ್ರೆಯ ಅಬೂಬಕ್ಕರ್ ಅಶ್ರಫ್ […]

ಕರಾವಳಿ ಕಾವಲು ಪೋಲೀಸ್ ಠಾಣೆಗೆ ಉಚಿತ ಕರೆ ಸಂಖ್ಯೆ 1093

Friday, July 11th, 2014
Coastal guard

ಮಂಗಳೂರು : ಮಂಗಳೂರು ಕರಾವಳಿ ಕಾವಲು ಪೋಲೀಸ್ ಠಾಣೆಯು ತಲಪಾಡಿ ಕಡಲ ತೀರದಿಂದ ಹೊಸಬೆಟ್ಟು ಗ್ರಾಮದ ವರೆಗೆ ಅಧಿಕಾರ ವ್ಯಾಪ್ತಿಯನ್ನು ಹೊಂದಿದ್ದು, ಹಲವಾರು ಅಪರಾಧ ಪ್ರಕರಣಗಳನ್ನು ದಾಖಲಿಸುವ ಕಾರ್ಯಾಚರಣೆಯಲ್ಲಿ ತೊಡಗಿದೆ. ಸಮುದ್ರದಲ್ಲಿ 12 ನಾಟಿಕಲ್ ಮೈಲ್ ವ್ಯಾಪ್ತಿಯವರೆಗೆ ಇಲಾಖಾ ಬೋಟುಗಳಲ್ಲಿ ಅಹರ್ನಿಶಿಯಾಗಿ ಸಮುದ್ರ ಗಸ್ತು ಕರ್ತವ್ಯದೊಂದಿಗೆ ಅಕ್ರಮವಾಗಿ ಒಳನುಸುಳುವ ಅನುಮಾನಾಸ್ಪದ ಬೋಟುಗಳ ಚಲನವಲನಗಳನ್ನು ಭಯೋತ್ಪಾದಕರ ಬಗ್ಗೆ ನಿಗಾ ವಹಿಸುವ ಹಾಗೂ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿ ಅಪಾಯದಲ್ಲಿ ಸಿಲುಕಿದ ಬೋಟು ಮತ್ತು ಮೀನುಗಾರರನ್ನು, ಜೀವ ಹಾನಿಯಾಗುವ ತುರ್ತು ಸಂದರ್ಭಗಳಲ್ಲಿ […]