ತಂದೆಯಿಂದಲೇ ಗುಂಡೇಟಿಗೆ ಒಳಗಾಗಿದ್ದ ಬಾಲಕ ಮೃತ್ಯು

Friday, October 8th, 2021
Sudheendra

ಮಂಗಳೂರು:  ತಂದೆಯಿಂದಲೇ ಗುಂಡೇಟಿಗೆ ಒಳಗಾಗಿದ್ದ  ಹದಿನಾರರ ಹರೆಯದ ಬಾಲಕ ಮೆದುಳು ನಿಷ್ಕ್ರಿಯಗೊಂಡಿದ್ದ ಬಾಲಕ ಶುಕ್ರವಾರ ಬೆಳಗ್ಗೆ 5 ಗಂಟೆಯ ಸುಮಾರಿಗೆ ಮೃತಪಟ್ಟಿದ್ದಾರೆ. ಉದ್ಯಮಿ ರಾಜೇಶ್ ಪ್ರಭು ನಗರದ ಮೋರ್ಗನ್ಸ್‌ಗೇಟ್‌ನಲ್ಲಿ  ಅ.5ರಂದು ಪುತ್ರ ಸುಧೀಂದ್ರನ ಮೇಲೆ ಆಕಸ್ಮಿಕವಾಗಿ ಗುಂಡು ಹಾರಿಸಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಸುಧೀಂದ್ರನನ್ನು ನಗರದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮರುದಿನ ಆತನ ಮೆದುಳು ನಿಷ್ಕ್ರಿಯಗೊಂಡ ವಿಷಯವನ್ನು ವೈದ್ಯರು ಘೋಷಿಸಿದ್ದರು. ಶುಕ್ರವಾರ  ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಮೋರ್ಗನ್ಸ್‌ಗೇಟ್‌ನ ವೈಷ್ಣವಿ ಎಕ್ಸ್‌ಪ್ರೆಸ್ ಕಾರ್ಗೊ ಸರಕು ಸಾಗಾಟ ಸಂಸ್ಥೆಯಲ್ಲಿ ಸೆ.30ರಂದು ಅಶ್ರಫ್, ಚಂದ್ರಹಾಸ ಎಂಬವರು ಕೆಲಸಕ್ಕೆ ಸೇರಿಕೊಂಡಿದ್ದರು. ಅದೇ ದಿನ ಗೂಡ್ಸ್ […]

ತಲೆಗೆ ಗುಂಡೇಟು ತಗುಲಿದ್ದ ಹದಿನಾರರ ಹರೆಯದ ಬಾಲಕನ ಮೆದುಳು ನಿಷ್ಕ್ರಿಯ

Wednesday, October 6th, 2021
Sudheendra

ಮಂಗಳೂರು : ವೈಷ್ಣವಿ ಕಾರ್ಗೋ ಪ್ರೈ ಲಿಮಿಟೆಡ್  ಬಳಿ ಮಾಲಕ ಚಾಲಕನ ಮದ್ಯೆ ಉಂಟಾದ ಗಲಾಟೆಯಲ್ಲಿ ತಲೆಗೆ ಗುಂಡೇಟು ತಗುಲಿದ್ದ ಹದಿನಾರರ ಹರೆಯದ ಬಾಲಕ  ಚಿಕಿತ್ಸೆಗೆ ಸ್ಪಂಧಿಸದೆ ಮೆದುಳು ನಿಷ್ಕ್ರಿಯಗೊಂಡು ತುರ್ತು ನಿಗಾ ಘಟಕದಲ್ಲಿ ವೆಟಿಲೇಟರ್ ನಲ್ಲಿ ಉಸಿರು ನೀಡಲಾಗುತ್ತಿದೆ. ಮಂಗಳವಾರ ತನ್ನ ಕಚೇರಿ ಮುಂಬಾಗದಲ್ಲಿಯೇ ನಾಲ್ಕು ಸಾವಿರ ರೂಪಾಯಿ ಕೊಡುವ ವಿಚಾರದಲ್ಲಿ ಫೈರಿಂಗ್ ನಡೆದಿದೆ, ಅದು ಮಿಸ್ ಫೈರ್ ಆಗಿ ಮಾಲಕರ ಮಗನ ಕಣ್ಣಿನ ಮೇಲೆಯೇ ತಗುಲಿ ಗಂಭೀರ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದ. ವೈಷ್ಣವಿ ಕಾರ್ಗೋ ಪ್ರೈ […]