ಪತಿಯನ್ನ ಕೊಂದು ಸಹಜ ಸಾವೆಂದು ನಾಟಕವಾಡಿದ್ದ ಪತ್ನಿ ಅರೆಸ್ಟ್
Tuesday, June 5th, 2018ಹುಬ್ಬಳ್ಳಿ: ಪತಿಯನ್ನು ಕೊಂದು ಸಹಜ ಸಾವು ಎಂದು ನಾಟಕವಾಡಿದ್ದ ಪತ್ನಿಯನ್ನು ವಿದ್ಯಾನಗರ ಪೊಲೀಸರು ಬಂಧಿಸಿದ್ದಾರೆ. ಕಾವ್ಯ ಅಲಿಯಾಸ್ ಭಾರತಿ(40) ಬಂಧಿತ ಮಹಿಳೆ. ಮೇ 2 ರಂದು ಓಂ ನಗರದಲ್ಲಿ ನಿವಾಸದಲ್ಲಿ ಪತಿ ಶಿವಯೋಗಿ ಹಳೆಮನೆಯನ್ನ ಪತ್ನಿ ಕಾವ್ಯ ಕೊಲೆ ಮಾಡಿದ್ದಳು. ಕ್ರಿಕೆಟ್ ಬ್ಯಾಟ್ನಿಂದ ಹೊಡೆದು ಕೊಲೆ ಮಾಡಿದ್ದಳು. ಬಳಿಕ ಮಂಚದ ಮೇಲಿಂದ ಬಿದ್ದು ಸತ್ತಿದ್ದಾರೆಂದು ಎಂದು ಕಥೆ ಕಟ್ಟಿದ್ದಳು. ಆದ್ರೆ ಶಿವಯೋಗಿ ಸಹೋದರಿ ರಾಜೇಶ್ವರಿ ಅವರು ಈ ಬಗ್ಗೆ ಅನುಮಾನ ವ್ಯಕ್ತಪಡಿಸಿ ವಿದ್ಯಾನಗರ ಪೊಲೀಸರಿಗೆ ದೂರು ನೀಡಿದ್ದರು. […]