Blog Archive

ಈಮೇಲ್ ಮೂಲಕ ಉಳ್ಳಾಲದ ಮಹಿಳೆಗೆ 21 ಲಕ್ಷ ವಂಚನೆ

Tuesday, June 13th, 2017
Email

ಮಂಗಳೂರು: ಉಳ್ಳಾಲದ ಮಹಿಳೆಯೋರ್ವಳಿಗೆ ವಿದೇಶಿ ಕರೆನ್ಸಿ ಗಿಫ್ಟ್ ಕಳುಹಿಸುವ ಆಮಿಷವೊಡ್ಡಿ 21 ಲಕ್ಷ ರೂ. ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಉಳ್ಳಾಲ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ನವದೆಹಲಿಯ ಲಾಲ್ ತಾನ್ ಮಾವಿಯಾ (34) ಮತ್ತು ಮಣಿಪುರದ ಕೂಫ್ ಬೊಯಿ (32) ಬಂಧಿತರು. ಆರೋಪಿಗಳಿಬ್ಬರು ವಾಯ್ಲೆಟ್ ಡಿಸೋಜ ಎಂಬುವರಿಗೆ ರಾಯಲ್ ಬ್ಯಾಂಕ್ ಸ್ಕಾಟ್‌ಲ್ಯಾಂಡ್ ನವದೆಹಲಿಯ ಹೆಸರಿನಲ್ಲಿ ವಿದೇಶಿ ಕರೆನ್ಸಿ ಗಿಫ್ಟ್ ನೀಡಲಾಗುವುದೆಂದು ಮೊದಲು ಈಮೇಲ್ ಸಂದೇಶ ಕಳುಹಿಸಿದ್ದರು. ಆಗ ಮಹಿಳೆಯಿಂದ 21,58,200 ರೂ. ಗಳನ್ನು ತಮ್ಮ ಖಾತೆಗೆ ಜಮಾ ಮಾಡಿಸಿಕೊಂಡಿದ್ದರು […]

ಬಾಲಕಿಯನ್ನು ಶಿಕ್ಷಣ ನೀಡುವುದಾಗಿ ಕರೆದುಕೊಂಡು ಹೋಗಿ ಅತ್ಯಾಚಾರ: ಆರೋಪಿಗಳ ಬಂಧನ

Friday, December 23rd, 2016
Thokkottu

ಮಂಗಳೂರು: ಬಾಲಕಿಯನ್ನು ಶಿಕ್ಷಣ ನೀಡುವುದಾಗಿ ಕರೆದುಕೊಂಡು ಹೋಗಿ ಗೆಳೆಯನ ಮನೆಯಲ್ಲಿರಿಸಿ ನಿರಂತರ ಅತ್ಯಾಚಾರವೆಸಗಿದ ಘಟನೆ ಮಂಗಳೂರಿನ ತೊಕ್ಕೊಟ್ಟು ಸಮೀಪ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಅತ್ಯಾಚಾರವೆಸಗಿದ ಆರೋಪಿ ಡಾವರ್ನ್‌ ಡಿಸೋಜ (42) ಹಾಗೂ ಮನೆಯ ಯಜಮಾನ ಮೆಲ್ವಿನ್ ಎಂಬಿಬ್ಬರನ್ನು ಉಳ್ಳಾಲ ಪೊಲೀಸರು ಪೋಕ್ಸೊ ಕಾಯ್ದೆಯಡಿಯಲ್ಲಿ ಬಂಧಿಸಿದ್ದಾರೆ. ಮೂಡಬಿದ್ರೆ ನಿವಾಸಿಯಾದ ಬಾಲಕಿಯನ್ನು ಅವಳ ಪರಿಚಿತನೊಬ್ಬ ಆಕೆಗೆ ಶಿಕ್ಷಣ ನೀಡುವುದಾಗಿ ಆಕೆಯ ತಾಯಿಯ ಮನವೊಲಿಸಿ ತೊಕ್ಕೊಟ್ಟಿನ ಅಡಂಕುದ್ರು ಬಳಿಯಿರುವ ತನ್ನ ಗೆಳೆಯ ಮೆಲ್ವಿನ್ ಮನೆಯಲ್ಲಿರಿಸಿದ್ದ. ಬಳಿಕ ಹಲವು ದಿನಗಳಿಂದ ನಿರಂತರ ಅತ್ಯಾಚಾರ […]

ವೈದ್ಯಕೀಯ ಸೀಟು ಕೊಡಿಸುವುದಾಗಿ ನಂಬಿಸಿ ವಿದ್ಯಾರ್ಥಿಗಳಿಂದ 2.82 ಕೋಟಿ ರೂ. ಪಡೆದು ವಂಚನೆ

Monday, September 19th, 2016
deralakatte

ಮಂಗಳೂರು: ವೈದ್ಯಕೀಯ ಸೀಟು ಕೊಡಿಸುವುದಾಗಿ ನಂಬಿಸಿ ಕೋಟ್ಯಂತರ ರೂಪಾಯಿ ವಂಚಿಸಿದ್ದಾರೆ ಎನ್ನಲಾದ ಇಬ್ಬರು ಆರೋಪಿಗಳನ್ನು ಉಳ್ಳಾಲ ಪೊಲೀಸರು ಬಂಧಿಸಿ, 37.50 ಲಕ್ಷ ರೂ. ವಶಕ್ಕೆ ಪಡೆದಿದ್ದಾರೆ. ತಮಿಳುನಾಡಿನ ಈರೋಡ್ ನಿವಾಸಿ ಸಂಜೀವಕುಮಾರ್ ಆರ್.(45) ಮತ್ತು ಮಡಿಕೇರಿ ನಿವಾಸಿ ಬಿ.ಸಿ.ತಿಮ್ಮಯ್ಯ(34) ಬಂಧಿತ ಆರೋಪಿಗಳು. ಇವರು ತಮಿಳುನಾಡು ಮೂಲದ 16 ವಿದ್ಯಾರ್ಥಿಗಳಿಂದ 2.82 ಕೋಟಿ ರೂ. ಪಡೆದು ವಂಚಿಸಿದ್ದಾರೆ ಎಂಬ ಆರೋಪವಿದೆ. ದೇರಳಕಟ್ಟೆಯ ಪ್ರತಿಷ್ಠಿತ ವೈದ್ಯಕೀಯ ಕಾಲೇಜಿನಲ್ಲಿ ಸೀಟು ಕೊಡಿಸುವುದಾಗಿ ನಂಬಿಸಿ ಹಣ ಪಡೆದು ಆರೋಪಿಗಳು ವಂಚಿಸಿದ್ದರು ಎನ್ನಲಾಗಿದೆ. ಕಾಲೇಜಿನಿಂದ […]