Blog Archive

ಸಿ‌ಐಟಿಯು ವತಿಯಿಂದ ನಗರದ ಜ್ಯೋತಿ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಪ್ರತಿಭಟನಾ ಪ್ರದರ್ಶನ ಹಾಗೂ ಬೃಹತ್ ಮೆರವಣಿಗೆ

Saturday, September 21st, 2013
mangalore-protest

ಮಂಗಳೂರು :  ಕಾರ್ಮಿಕ ಕ್ಷೇತ್ರದಲ್ಲಿನ ಅವ್ಯವಸ್ಥೆಗಳನ್ನು  ಖಂಡಿಸಿ ಸಿ‌ಐಟಿಯು ವತಿಯಿಂದ, ಕನಿಷ್ಠ ಕೂಲಿ, ಮನೆ ನಿವೇಶನ ಎಲ್ಲಾ ಕುಟುಂಬಗಳಿಗೂ ರೇಷನ್, ಕಾರ್ಮಿಕ ಕಾನೂನಿನ ಕಟ್ಟುನಿಟ್ಟಿನ ಜಾರಿ ಇತ್ಯಾದಿ ಬೇಡಿಕೆಗಳನ್ನು ಈಡೇರಿಸುವಂತೆ ಅಗ್ರಹಿಸಿ ಶುಕ್ರವಾರ ನಗರದ ಜ್ಯೋತಿ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ  ಬೃಹತ್ ಮೆರವಣಿಗೆ ಹಾಗೂ ಪ್ರತಿಭಟನಾ ಪ್ರದರ್ಶನ ನಡೆಯಿತು. ಸಿ‌ಐಟಿಯು ಕೇಂದ್ರ ಸಮಿತಿ ಮುಖಂಡ ಬಿ.ಮಾಧವ ಪ್ರತಿಭಟನಕಾರರನ್ನು ಉದ್ದೇಶಿಸಿ  ಕಾರ್ಮಿಕರು ಬಿಪಿ‌ಎಲ್ ರೇಷನ್ ಕಾರ್ಡ್, ಸಂಬಳದಲ್ಲಿ ಹೆಚ್ಚಳ, ಸಾಮಾಜಿಕ ಭದ್ರತೆ, ಪಿಂಚಣಿ ಸೌಲಭ್ಯ ಹಾಗೂ ಎಫ್ ಡಿ‌ಐ […]

ಸಿಐಡಿ ಪೊಲೀಸರ ಬಗ್ಗೆ ನಮಗೆ ಎಳ್ಳಷ್ಟೂ ವಿಶ್ವಾಸವಿಲ್ಲ : ಡಿವೈಎಫ್‍ಐನ ಜಿಲ್ಲಾ ಧ್ಯಕ್ಷ ಮುನೀರ್ ಕಾಟಿಪಳ್ಳ

Saturday, September 7th, 2013
Dyfc

ಮಂಗಳೂರು: ಪಂಜಿಮೊಗರು ಜೋಡಿ ಕೊಲೆ ಪ್ರಕರಣವನ್ನು ಸಿಬಿಐಗೆ ಒಪ್ಪಿಸಲು ಅಗ್ರಹಿಸಿ ಜಿಲ್ಲಾಧಿಕಾರಿ ಕಚೇರಿಯ ಮುಂಭಾಗದಲ್ಲಿ ಸೆ.6 ರಂದು 24 ಗಂಟೆಗಳ ಹಗಲು ರಾತ್ರಿ ಧರಣಿ ನಡೆಯಿತು. ಡಿವೈಎಫ್‍ಐನ ಜಿಲ್ಲಾ ಧ್ಯಕ್ಷ ಮುನೀರ್ ಕಾಟಿಪಳ್ಳ ಜೋಡಿ ಕೊಲೆ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ಪೊಲೀಸರ ಬಗ್ಗೆ ನಮಗೆ ಎಳ್ಳಷ್ಟೂ ವಿಶ್ವಾಸವಿಲ್ಲ. ಅವರು ಎರಡೂ ಕುಟುಂಬಗಳನ್ನು ಜಗಳಕ್ಕೆ ಬಿಟ್ಟು ಶಾಂತಿ ಕದಡಿದ್ದಾರೆ ಎಂದು ಡಿವೈಎಫ್‍ಐನ ಜಿಲ್ಲಾ ಧ್ಯಕ್ಷ ಮುನೀರ್ ಕಾಟಿಪಳ್ಳ ಆರೋಪಿಸಿದ್ದಾರೆ. ಇದರಿಂದ ಇದೀಗ ಆ ಕುಟುಂಬಗಳಲ್ಲಿ ಜಗಳ ನಡೆಯುತ್ತಿದ್ದು, […]

ದ.ಕ. ಜಿಲ್ಲಾ ಬಿಜೆಪಿ ಸಮಿತಿ ವತಿಯಿಂದ ಯುಪಿಎ ಸರಕಾರದ ಬೆಲೆ ಏರಿಕೆ ವಿರುದ್ದ ಪ್ರತಿಭಟನೆ

Tuesday, September 3rd, 2013
Bjp

ಮಂಗಳೂರು : ಕೇಂದ್ರದ ಯುಪಿಎ ಸರಕಾರವು ನಿರಂತರವಾಗಿ ಡೀಸೆಲ್, ಪೆಟ್ರೋಲ್ ಮತ್ತು ಗ್ಯಾಸ್ ಬೆಲೆಗಳನ್ನು ಏರಿಸುವ ಮೂಲಕ ಜನಸಾಮಾನ್ಯರ ದೈನಂದಿನ ಬದುಕಿನ ಜೊತೆ ಚೆಲ್ಲಾಟವಾಡುತ್ತಿರುವ ಜನವಿರೋಧಿ ನೀತಿಯನ್ನು ಖಂಡಿಸಿ ದ.ಕ. ಜಿಲ್ಲಾ ಬಿಜೆಪಿ ಸಮಿತಿ ವತಿಯಿಂದ ಸೋಮವಾರ ಸಂಜೆ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಯಿತು. ಕೇಂದ್ರದ ಯುಪಿಎ ಸರಕಾರದ ಅಸಮರ್ಪಕವಾದ ಆರ್ಥಿಕ ನೀತಿಗಳಿಂದಾಗಿ ಡಾಲರ್ ಬೆಲೆಯೆದುರು ರೂಪಾಯಿಯ ಮೌಲ್ಯ ನಿರಂತರ ಅಪಮೌಲ್ಯಕ್ಕೀಡಾಗುತ್ತಿದೆ. ಇದರಿಂದಾಗಿ ತೈಲ ಬೆಲೆಗಳು ಏರಿಕೆಯಾಗಿದೆ ಎಂಬ ಸಬೂಬನ್ನು ಹೇಳುವ ಸರಕಾರ ರೂಪಾಯಿಯ ಮೌಲ್ಯ […]

ಜಿಲ್ಲಾಧಿಕಾರಿ ಕಚೇರಿ ಕಟ್ಟಡದಲ್ಲಿರುವ ಅಂಚೆ ಕಚೇರಿಯಲ್ಲಿ ಬೆಂಕಿ, ತಪ್ಪಿದ ಅನಾಹುತ

Tuesday, April 2nd, 2013
Post office

ಮಂಗಳೂರು : ಇಂದು ಮಧ್ಯಾಹ್ನ ಜಿಲ್ಲಾಧಿಕಾರಿ ಕಚೇರಿ ಕಟ್ಟಡದ ಒಂದನೇ ಮಹಡಿಯಲ್ಲಿರುವ ಅಂಚೆ ಕಚೇರಿಯಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದ್ದು ಇದರಿಂದ  ಕಚೇರಿಯಲ್ಲಿದ್ದ ಕೆಲವು ಅರ್ಜಿ ಫಾರಂಗಳು ಸುಟ್ಟು ಹೋಗಿವೆ. ಅಂಚೆ ಕಚೇರಿಯಲ್ಲಿರುವ ಕಸದ ಬುಟ್ಟಿಯಲ್ಲಿ ಮದ್ಯಾಹ್ನ ಸುಮಾರು 12.15 ರ ಸುಮಾರಿಗೆ ಕಾಣಿಸಿಕೊಂಡ ಬೆಂಕಿ ಪಕ್ಕದಲ್ಲಿದ್ದ ಟೇಬಲ್ ಗೆ ಹರಡಿ ಕೆಲವು ಕಡತಗಳಿಗೆ ಹಾಗು ಅರ್ಜಿ ಫಾರಂಗಳಿಗೆ ತಗಲಿದೆ. ಪರಿಣಾಮ ಕೆಲವು ಅರ್ಜಿ ಫಾರಂ ಗಳು ಸುಟ್ಟು ಹೋಗಿದ್ದು  ಸಿಬ್ಬಂಧಿಗಳು ಕೂಡಲೆ  ಅಗ್ನಿಶಾಮಕ ಇಲಾಖೆಗೆ ಸುದ್ದಿ ಮುಟ್ಟಿಸಿ, […]

ಗ್ರಾಮಾಂತರ ಪ್ರದೇಶದ ರಿಕ್ಷಾಗಳ ನಗರಪ್ರದೇಶ ಪ್ರವೇಶಕ್ಕೆ ಪರವಾನಗಿ ನೀಡುವಂತೆ ಒತ್ತಾಯಿಸಿ ಪ್ರತಿಭಟನೆ

Tuesday, February 19th, 2013
Rural auto drivers strike

ಮಂಗಳೂರು : ಗ್ರಾಮಾಂತರ ಪ್ರದೇಶದ ರಿಕ್ಷಾ ಚಾಲಕರಿಗೆ ಮಂಗಳೂರು ನಗರಪ್ರದೇಶಕ್ಕೆ ಬಾಡಿಗೆ ಮಾಡಲು ಪರವಾನಗಿ ನೀಡಬೇಕೆಂದು ಕೋರಿ ಮಂಗಳವಾರ ರಿಕ್ಷಾಚಾಲಕರು ತೊಕ್ಕೊಟ್ಟಿನಿಂದ ಮಂಗಳೂರು ಜಿಲ್ಲಾಧಿಕಾರಿ ಕಚೇರಿಯವರೆಗೆ ರಿಕ್ಷಾ ಜಾಥಾದ ಮೂಲಕ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು. ಪ್ರತಿಭಟನೆಯ ನೇತೃತ್ವ ವಹಿಸಿದ ಯೋಗೀಶ್ ಶೆಟ್ಟಿ ಜಪ್ಪು ಮಾತನಾಡಿ, ಮಂಗಳೂರು ನಗರದ ನೇತ್ರಾವತಿ ಸೇತುವೆಯಿಂದ ತೊಕ್ಕೊಟ್ಟು ಉಳ್ಳಾಲ ದೇರಳಕಟ್ಟೆ ಸೋಮೇಶ್ವರ, ಕೋಟೆಕಾರ್, ಕುತ್ತಾರ್, ಕೋಣಾಜೆ ಮುಂತಾದ ಪ್ರದೇಶಗಳು ಮಂಗಳೂರು ನಗರಕ್ಕೆ ಅತ್ಯಂತ ಸಮೀಪದಲ್ಲಿದ್ದು, ಕೇವಲ 10 ಕಿ.ಮೀ. ಪರಿಮಿತಿಯಲ್ಲಿ […]

ಕ್ಯಾಮರಾಮೆನ್ ಶರಣ್ ರಾಜ್ ಬಂಧನ ವಿರೋಧಿಸಿ ಪತ್ರಕರ್ತರ ಪ್ರತಿಭಟನೆ

Friday, January 4th, 2013
DKWJA

ಮಂಗಳೂರು :ಹೋಂ ಸ್ಟೇ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಹಾಯ ಸುದ್ದಿವಾಹಿನಿ ಕ್ಯಾಮರಾಮ್ಯಾನ್ ಶರಣ್ ಬಂಧನವನ್ನು ಖಂಡಿಸಿ ದೃಶ್ಯ ಮಾದ್ಯಮ ಪತ್ರಕರ್ತರ ಸಂಘ ಗುರುವಾರ ಬೀದಿಗಿಳಿದು ಹೋರಾಟ ನಡೆಸಿದರು. ಸಮಯ ನ್ಯೂಸ್ ಸುದ್ದಿ ವಾಹಿನಿಯ ವರದಿಗಾರ ಇರ್ಷಾದ್ ಮಾತನಾಡಿ ಪತ್ರಕರ್ತರು ವರದಿಯನ್ನು ಸಂಗ್ರಹಿಸಲು ಮಾತ್ರ ತೆರಳಿದ್ದು ಹೋಮ್ ಸ್ಟೇ ದಾಳಿಯ ಆರೋಪಿಗಳ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸುವ ಮುನ್ನವೇ ಪೊಲೀಸ್ ಆಯುಕ್ತರನ್ನು ಭೇಟಿ ಮಾಡಿ ಪ್ರಕರಣದಲ್ಲಿ ಪತ್ರಕರ್ತರ ಪಾತ್ರ ಇಲ್ಲದಿರುವುದನ್ನು ಮನವರಿಕೆ ಮಾಡಿಕೊಡಲಾಗಿತ್ತು. ಈ ಸಂದರ್ಭದಲ್ಲಿ ಪೊಲೀಸ್ ಆಯುಕ್ತರು […]

ಆಧಾರ ದ್ವಿತೀಯ ಹಂತದ ನೋಂದಣಿ ಕಾರ್ಯದ ಯೋಜನಾ ಕಾರ್ಯಾಗಾರ

Thursday, December 13th, 2012
Workshop

ಮಂಗಳೂರು :ಬುಧವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಆಧಾರ ದ್ವಿತೀಯ ಹಂತದ ನೋಂದಣಿ ಕಾರ್ಯದ ಯೋಜನಾ ಕಾರ್ಯಾಗಾರ ವನ್ನು ಆಯೋಜಿಸಲಾಗಿತ್ತು. ಇದರ ಅದ್ಯಕ್ಷತೆಯನ್ನು ಅಪರ ಜಿಲ್ಲಾಧಿಕಾರಿ ಕೆ.ಎ ದಯಾನಂದ ರವರು ವಹಿಸಿದ್ದರು. ಆಧಾರ್ ನಡಿ ನೋಂದಣಿಕರಿಸುವುದನ್ನು ಸಮಗ್ರವಾಗಿಸಲು ನಿವೃತ್ತ ಅಧಿಕಾರಿಗಳನ್ನು ಪರಿಶೀಲಕರನ್ನಾಗಿ ನೇಮಿಸಲಾಗಿದ್ದು, ಅವರಿಗಾಗಿ ತರಬೇತಿಯನ್ನು ಆಯೋಜಿಸಲಾಗಿದೆ. ಈ ಕಾರ್ಯವನ್ನು ಬಹಳ ಗಮನವಹಿಸಿ ನಿರ್ವಹಿಸಬೇಕು. ಪರಿಶೀಲಕರ ಜವಾಬ್ದಾರಿ ಮತ್ತು ಕರ್ತವ್ಯ ಬಹುಮುಖ್ಯವಾಗಿದ್ದು, ಪರಿಶೀಲನೆಯ ನಂತರ ಪರಿಶೀಲಿಸಿದ ಮಾಹಿತಿಯ ದೋಷಗಳಿಗೆ ಪರಿಶೀಲಕರೇ ಜವಾಬ್ದಾರರು. ಹಾಗಾಗಿ ಕಾರ್ಯಾಗಾರವನ್ನು ಗಂಭೀರವಾಗಿ ತೆಗೆದುಕೊಂಡು ಎಲ್ಲ ಪ್ರಶ್ನೆಗಳಿಗೆ […]

ಗಡ್ಗರಿ ಹೇಳಿಕೆ ವಿರೋಧಿಸಿ ಎಸ್.ಎಫ್.ಐ. ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ವತಿಯಿಂದ ಪ್ರತಿಭಟನೆ

Wednesday, November 7th, 2012
SFI Protest

ಮಂಗಳೂರು :ಎಸ್.ಎಫ್.ಐ. ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ವತಿಯಿಂದ ನಿನ್ನೆ ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿಯ ಮುಂಭಾಗದಲ್ಲಿ ಬಿ.ಜೆ.ಪಿ. ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಸ್ವಾಮಿ ವಿವೇಕಾನಂದ ಹಾಗೂ ಭೂಗತ ದೊರೆ ದಾವೂದ್ ಇಬ್ರಾಹಿಂ ಬುದ್ದಿಮತ್ತೆ ಒಂದೇ ಎಂಬ ಹೇಳಿಕೆಯ ವಿರುದ್ಧ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು. ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಎಸ್.ಎಫ್.ಐ. ರಾಜ್ಯ ಸಹ ಕಾರ್ಯದರ್ಶಿ ಜೀವನ್ ರಾಜ್ ಕುತ್ತಾರ್ ಭ್ರಷ್ಟಾಚಾರದಲ್ಲಿ ಸಿಲುಕಿರುವ ನಿತಿನ್ ಗಡ್ಕರಿ ಹತಾಶರಾಗಿದ್ದು, ಅವರ ತಲೆ ಖಾಲಿಯಾಗಿದೆ. ಆದುದರಿಂದ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಯುವಕರ ಆದರ್ಶ […]

ಪಂಜಿಮೊಗರು ಜೋಡಿ ಕೊಲೆ ಪ್ರಕರಣವನ್ನು ಸಿಬಿಐಗೆ ಒಪ್ಪಿಸಲು ಡಿವೈಎಫ್‌ಐ ಆಗ್ರಹ

Tuesday, September 20th, 2011
DYFI-protest

ಮಂಗಳೂರು : ಡಿವೈಎಫ್‌ಐ ನೇತೃತ್ವದಲ್ಲಿ ಸ್ಥಳೀಯ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಸೋಮವಾರ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿ ಎದುರು ಪಂಜಿಮೊಗರು ತಾಯಿ- ಮಗು ಜೋಡಿ ಕೊಲೆ ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸ ಬೇಕು ಎಂದು ಪ್ರತಿಭಟನಾ ಸಭೆ . ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಡಿವೈಎಫ್‌ಐ ಜಿಲ್ಲಾಧ್ಯಕ್ಷ ಮುನೀರ್‌ ಕಾಟಿಪಳ್ಳ ಪಂಜಿಮೊಗರಿನ ಘಟನೆ ಸಂಭವಿಸಿ 3 ತಿಂಗಳಾಗುತ್ತಾ ಬಂದರೂ ಇದನ್ನು ಬೇಧಿಸುವಲ್ಲಿ ಪೊಲೀಸರು ವಿಫಲರಾಗಿದ್ದಾರೆ. ತನಿಖೆಯ ನೆಪದಲ್ಲಿ ಅಮಾಯಕರಿಗೆ ಕಿರುಕುಳ ನೀಡುತ್ತಿದ್ದಾರೆ. ರಝಿಯಾ ಮತ್ತು ಆಕೆಯ ಪುತ್ರಿ ಫಾತಿಮಾ ಜುವಾ […]

ಅಣ್ಣಾ ಹಜಾರೆ ಹೋರಾಟದ ಬೆಂಬಲಕ್ಕೆ ನಿಂತ ವಕೀಲರ ಸಂಘ

Friday, August 19th, 2011
lawyers Protest/ ವಕೀಲರ ಸಂಘ

ಮಂಗಳೂರು : ವಕೀಲರ ಸಂಘದ ವತಿಯಿಂದ ಗುರುವಾರ ಜಿಲ್ಲಾಧಿಕಾರಿ ಕಚೇರಿ ಬಳಿ ಅಣ್ಣಾ ಹಜಾರೆ ಆರಂಭಿಸಿರುವ ಹೋರಾಟವನ್ನು ಬೆಂಬಲಿಸಿ ವಕೀಲರ ಸಂಘದ ವತಿಯಿಂದ ಗುರುವಾರ ಜಿಲ್ಲಾ ನ್ಯಾಯಾಲಯದ ಆವರಣದಿಂದ ಜಿಲ್ಲಾಧಿಕಾರಿ ಕಚೇರಿ ತನಕ ಮೌನ ಮೆರವಣಿಗೆ ಮತ್ತು ಬಳಿಕ ಪ್ರತಿಭಟನಾ ಸಭೆ ಜರಗಿತು. ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ವಕೀ‌ಲರ ಸಂಘದ ಅಧ್ಯಕ್ಷ ಎಸ್‌.ಪಿ. ಚೆಂಗಪ್ಪ ಕೇಂದ್ರ ಸರಕಾರ ಸಂಸತ್ತಿನಲ್ಲಿ ಮಂಡಿಸಿರುವ ಲೋಕ ಪಾಲ ಮಸೂದೆಯಿಂದ ಎಲ್ಲಾ ಭ್ರಷ್ಟರನ್ನು ಶಿಕ್ಷಿಸಲು ಸಾಧ್ಯವಾಗದು. ಪ್ರಧಾನಿ ಮತ್ತು ಉನ್ನತ ನ್ಯಾಯಾಂಗದ ಸಹಿತ […]