Blog Archive

ಚಿತ್ರಮಂದಿರ ಬಂದ್‌‌ಗೆ ಮಂಗಳೂರಲ್ಲಿ ಉತ್ತಮ‌ ಸ್ಪಂದನೆ

Saturday, March 10th, 2018
theater

ಮಂಗಳೂರು: ಡಿಜಿಟಲ್ ಸರ್ವಿಸರ್ಸ್ ಪ್ರೊವೈಡರ್ಸ್ ವಿಧಿಸುತ್ತಿರುವ ದರ ಕಡಿತಗೊಳಿಸಲು ಆಗ್ರಹಿಸಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ‌ ಇಂದು ಕರೆ ನೀಡಿದರುವ ರಾಜ್ಯದ‌ ಚಿತ್ರಮಂದಿರಗಳ ಬಂದ್‌‌ಗೆ ನಗರದಲ್ಲಿ ಉತ್ತಮ‌ ಸ್ಪಂದನೆ ಸಿಕ್ಕಿದೆ. ಪ್ರೇಕ್ಷಕರು ಮುಚ್ಚಿದ ಬಾಗಿಲುಗಳ ಚಿತ್ರಮಂದಿರಗಳನ್ನು ನೋಡಿ ಹಿಂದಕ್ಕೆ ಮರಳಿದ್ದಾರೆ. ಈಗಾಗಲೇ ವಿಧಿಸಿರುವ ದರಗಳಲ್ಲಿ ಶೇ. 25ರಷ್ಟು ಕಡಿತ ಮಾಡಲು ಯುಎಫ್ಒ‌ ಮತ್ತು ಕ್ಯೂಬ್‌‌‌‌‌‌ಗೆ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಕೇರಳ, ಪುದುಚ್ಚೇರಿ ಚಲನಚಿತ್ರ ವಾಣಿಜ್ಯ ಮಂಡಳಿಗಳು ಮನವಿ ಸಲ್ಲಿಸಿದ್ದವು. ಎರಡೆರಡು ಬಾರಿ ಮಾತುಕತೆ ನಡೆಸಿದರೂ ಯಾವುದೇ […]

ಶಶಿಕಲಾ ಬಣದ ಎಡಪ್ಪಾಡಿ ಪಳನಿಸ್ವಾಮಿ ತಮಿಳುನಾಡಿನ ನೂತನ ಮುಖ್ಯಮಂತ್ರಿ

Thursday, February 16th, 2017
Palani-Swami

ಚೆನ್ನೈ: ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಎಡಪ್ಪಾಡಿ ಪಳನಿಸ್ವಾಮಿ ಅವರನ್ನು ರಾಜ್ಯಪಾಲ ಸಿ.ವಿದ್ಯಾಸಾಗರ್ ರಾವ್ ನೇಮಿಸಿದ್ದಾರೆ ಎಂದು ರಾಜಭವನದ ಪ್ರಕಟಣೆ ತಿಳಿಸಿದೆ. ಇಂದು ಸಂಜೆ 4 ಗಂಟೆಗೆ ಪಳನಿಸ್ವಾಮಿ ತಮ್ಮ ಸಂಪುಟ ಸಚಿವರೊಂದಿಗೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ವಿ.ಕೆ.ಶಶಿಕಲಾ ಅವರ ನಿಷ್ಠಾವಂತ ಇ.ಕೆ.ಪಳನಿಸ್ವಾಮಿಯವರಿಗೆ ರಾಜ್ಯಪಾಲ ಸಿ.ವಿದ್ಯಾಸಾಗರ್ ರಾವ್ ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಲು 15 ದಿನಗಳ ಕಾಲಾವಕಾಶ ನೀಡಿದ್ದಾರೆ. ಪಳನಿಸ್ವಾಮಿ ತಮ್ಮ ಬೆಂಬಲಿಗರಾದ ಸಚಿವರಾದ ಜಯಕುಮಾರ್, ಕೆ.ಎ.ಸೆಂಗೊಟ್ಟೈಯನ್, ಎಸ್.ಪಿ.ವ ವೇಲುಮಣಿ, ಟಿ.ಟಿ.ದಿನಕರನ್, ಕೆ.ಪಿ. ಅನ್ಬಜಗನ್ ಮೊದಲಾದವರು ರಾಜ್ಯಪಾಲರ ಭೇಟಿಗೆ ತೆರಳಿದ್ದರು. […]