Blog Archive

ಮಂಗಳೂರಿನ ಮಂಗಳಾದೇವಿ ದೇವಸ್ಥಾನಕ್ಕೆ ನಟಿ ರಾಗಿಣಿ ದ್ವಿವೇದಿ ಭೇಟಿ..!

Monday, October 22nd, 2018
ragini

ಮಂಗಳೂರು: ಬಹುಭಾಷಾ ನಟಿ ರಾಗಿಣಿ ದ್ವಿವೇದಿ ನಿನ್ನೆ ಮಂಗಳೂರಿನ ಮಂಗಳಾದೇವಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಸಂಜೆ ದೇವಸ್ಥಾನದ ಬಾಗಿಲು ತೆಗೆಯುವ ಮೊದಲೇ ಕಾರಿನಲ್ಲಿ ಬಂದು ಕಾದಿದ್ದ ರಾಗಿಣಿ ದ್ವಿವೇದಿ ದೇವಾಲಯದ ಬಾಗಿಲು ತೆಗೆಯುತ್ತಿದ್ದಂತೆ ದೇವಸ್ಥಾನದ ಬದಿಯ ಹೂವಿನ ಅಂಗಡಿಯಲ್ಲಿ ತಾವೇ ಮಲ್ಲಿಗೆ ಹೂವನ್ನು ಖರೀದಿಸಿ ತಂದು ದೇವರ ಪೂಜೆಗೆ ನೀಡಿದರು. ತಲೆಗೆ ದುಪಟ್ಟಾ ಹೊದ್ದು ದೇವಾಲಯ ಪ್ರವೇಶಿಸಿದ ರಾಗಿಣಿ, ಈಗಷ್ಟೇ ಬಿಡುಗಡೆಯಾಗಿರುವ ‘ಟೆರರಿಸ್ಟ್’ ಸಿನಿಮಾದ ಯಶಸ್ಸಿಗಾಗಿ ಪ್ರಾರ್ಥಿಸಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಇನ್ನು […]

ಮಂಗಳಾದೇವಿ ದೇವಸ್ಥಾನದಲ್ಲಿ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ

Wednesday, October 10th, 2018
Mangaladevi Navaratri

ಮಂಗಳೂರು : ಮಹತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನದಲ್ಲಿ ದಸರಾ ಪ್ರಯುಕ್ತ ಹತ್ತು ದಿನಗಳಕಾಲ ನಡೆಯಲಿರುವ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ಬುಧವಾರ ಮಂಗಳೂರು ಮೇಯರ್ ಭಾಸ್ಕರ್ ಕೆ, ಚಾಲನೆ ನೀಡಿದರು. ಈ ಸಂದರ್ಭ ಕಾರ್ಪೋರೇಟರ್ ಪ್ರೇಮಾನಂದ ಶೆಟ್ಟಿ, ಶಶಿಧರ ಹೆಗ್ಡೆ,  ಆಡಳಿತ ಮೊಕ್ತೇಸರರಾದ ಪಿ. ರಮಾನಾಥ ಹೆಗ್ಡೆ, ಟ್ರಸ್ಟಿಗಳಾದ ಬಿ.ರಮಾನಾಯ್ಕ್ ಕೋಟೆಕಾರ್, ಪ್ರೆಮಲತಾ ಎಸ್.ಕುಮಾರ್, ಅನುವಂಶಿಕ ಟ್ರಸ್ಟಿಗಳಾದ ಜಿ ರಘುರಾಮ ಉಪಾದ್ಯಾಯ, ಪ್ರಧಾನ ಅರ್ಚಕ ಶ್ರೀಧರ್ ಐತಾಳ್  ಮತ್ತಿತರರು ಉಪಸ್ಥಿತರಿದ್ದರು. ಸುಧಾಕರ್ ರಾವ್ ಪೇಜಾವರ್ ಸ್ವಾಗತಿಸಿದರು. ಕೆ. ವಿನಯಾನಂದ ವಂದಿಸಿದರು. […]

ಮಹತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನದಲ್ಲಿ ನವರಾತ್ರಿ ಮಹೋತ್ಸವ ಕ್ಕೆ ಚಾಲನೆ

Wednesday, October 10th, 2018
mangaladevi

ಮಂಗಳೂರು: ಮಹತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನದಲ್ಲಿ ಅಕ್ಟೊಬರ್ 10 ನೇ ಬುಧವಾರದಿಂದ ಅಕ್ಟೊಬರ್  20 ನೇ ಶನಿವಾರದವರೆಗೆ ನಡೆಯಲಿರುವ ನವರಾತ್ರಿ ಮಹೋತ್ಸವಕ್ಕೆ ಬುಧವಾರ ಬೆಳಗ್ಗೆ 9.೦೦ ಕ್ಕೆ ಗಣಪತಿ ಪ್ರಾರ್ಥನೆಯೊಂದಿಗೆ ನವರಾತ್ರಿ ಉತ್ಸವವಕ್ಕೆ ಶ್ರೀ ರಾಮಕೃಷ್ಣಯಾಜಿ ನಿವೃತ್ತ ಪ್ರಾದ್ಯಾಪಕರು ಎನ್. ಐ.ಟಿ  ಕೆ ಸುರತ್ಕಲ್ ಇವರು ಚಾಲನೆ ನೀಡಿದರು. ಈ ಸಂದರ್ಭ ಮುಳಿಹಿತ್ಲು ಗೇಮ್ಸ್ ಟೀಮ್ ಇದರ ಹುಲಿವೇಷದ ಸುವರ್ಣ ಮಹೋತ್ಸವದ ಪ್ರಯುಕ್ತ ಧ್ವಜ ಸ್ತ೦ಭದ ಪೀಠಕ್ಕೆ ಬೆಳ್ಳಿ ಮತ್ತು ಪಂಚಲೋಹದ ಹೊದಿಕೆ ಸಮರ್ಪಣೆ ಮಾಡಿದರು. ಮಂಗಳಾದೇವಿ ದೇವಸ್ಥಾನದಲ್ಲಿಹತ್ತು ದಿನಗಳ ಕಾಲ ವಿವಿಧ ಧಾರ್ಮಿಕ ಹಾಗು ಸಾಂಸ್ಕೃತಿಕ […]

ಮಂಗಳಾದೇವಿ ದೇವಸ್ಥಾನದಲ್ಲಿ ಅಶ್ವತ್ಥ ಮರ ಉರುಳಿ ನಾಲ್ವರಿಗೆ ಗಾಯ

Friday, June 8th, 2018
Mangaladevi Temple

ಮಂಗಳೂರು; ಮಂಗಳೂರಿನ ಮಂಗಳಾದೇವಿ ದೇವಸ್ಥಾನದಲ್ಲಿ ಸಂಜೆ ಪೂಜೆಯ ವೇಳೆಗೆ ದೇವಸ್ಥಾನದ ಎದುರಿಗೆ ಇದ್ದ ಅಶ್ವತ್ಥ ಮರ ಉರುಳಿಬಿದ್ದು ನಾಲ್ವರಿಗೆ ಗಾಯವಾದ ಘಟನೆ ನಡೆದಿದೆ. ದೇವಸ್ಥಾನದ ಮುಂಭಾಗದಲ್ಲಿರುವ ನಾಗನಕಟ್ಟೆಯ ಲ್ಲಿರುವ ಅಶ್ವಥ ಮರ ದೇವಸ್ಥಾನ ದ ಪ್ರವೇಶ ದ್ವಾರಕ್ಕೆ ಉರುಳಿಬಿದ್ದಿದೆ. ಘಟನೆಯಲ್ಲಿ ನಾಲ್ವರಿಗೆ ಗಾಯವಾಗಿದ್ದು ಓರ್ವನ ಸ್ಥಿತಿ ಗಂಭೀರವಾಗಿ ದೆ ಎಂದು ತಿಳಿದು ಬಂದಿದೆ. ಸ್ಥಳೀಯರು ಮತ್ತು ಅಗ್ನಿಶಾಮಕ ದಳ ಸಿಬ್ಬಂದಿ ಬಿದ್ದ ಮರ ತೆರವು ಕಾರ್ಯಚರಣೆ ಮಾಡುತ್ತಿದ್ದಾರೆ.

ಶ್ರೀ ಮಂಗಳಾದೇವಿ ದೇವಸ್ಥಾನದಲ್ಲಿ ಸೆ. 28ರಿಂದ ಅ. 7ರ ತನಕ ನವರಾತ್ರಿ ಉತ್ಸವ

Sunday, September 25th, 2011
Mangaladevi Temple

ಮಂಗಳೂರು: ಮಹತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವವು ಸೆ. 28ರಿಂದ ಅ. 7ರ ತನಕ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದು ಕ್ಷೇತ್ರದ ಆಡಳಿತ ಮೊಕ್ತೇಸರ ಪಿ. ರಮಾನಾಥ ಹೆಗ್ಡೆ ಶನಿವಾರ ದೇವಸ್ಥಾನದ ಆವರಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಅ. 5ರಂದು ಸಣ್ಣ ರಥೋತ್ಸವ, 6ರಂದು ರಾತ್ರಿ 7.30ಕ್ಕೆ ರಥೋತ್ಸವ ಜರಗುವುದು. ನವರಾತ್ರಿ ಉತ್ಸದ ಅವಧಿಯಲ್ಲಿ ಪ್ರತೀದಿನ ವಿವಿಧ ಸಾಂಸ್ಕೃತಿಕ ತಂಡಗಳು ಕಾರ್ಯಕ್ರಮ ನೀಡಲಿವೆ. ಸುಮಾರು 2,000 ಕಲಾವಿದರು ಕಾರ್ಯಕ್ರಮ ನೀಡುಲಿದ್ದು. ಸೌಂದರ್ಯ […]

ಮಂಗಳಾದೇವಿ ದೇವಸ್ಥಾನದಲ್ಲಿ ವಿಶ್ವ ಹಿಂದೂ ಪರಿಷತ್ ಮಾತೃ ಸಂಘದಿಂದ ವರ ಮಹಾಲಕ್ಷ್ಮಿ ವ್ರತ

Friday, August 20th, 2010
ಮಂಗಳಾದೇವಿ ದೇವಸ್ಥಾನದಲ್ಲಿ ವಿಶ್ವ ಹಿಂದೂ ಪರಿಷತ್ ಮಾತೃ ಸಂಘದಿಂದ ವರ ಮಹಾಲಕ್ಷ್ಮಿ ವ್ರತ

ಮಂಗಳಾದೇವಿ ದೇವಸ್ಥಾನದಲ್ಲಿ ವಿಶ್ವ ಹಿಂದೂ ಪರಿಷತ್ ಮಾತೃ ಸಂಘದಿಂದ ವರ ಮಹಾಲಕ್ಷ್ಮಿ ವ್ರತ