Blog Archive

ರಿಕ್ಷಾ ಚಾಲಕನ ಹತ್ಯೆ: ಬಂಟ್ವಾಳ ಪೊಲೀಸರೇ ನೇರ ಹೊಣೆ DYFI ಆರೋಪ

Tuesday, August 12th, 2014
Bantwal Murder

ಮಂಗಳೂರು : ಕ್ರಿಮಿನಲ್ ಗ್ಯಾಂಗ್ ಗಳ ಮೇಲಾಟಕ್ಕೆ ಅಮಾಯಕ ರಿಕ್ಷಾ ಚಾಲಕ ರಿಫಾಯಿ ಹತ್ಯೆಗೀಡಾಗಿರುವುದು ನಾಗರಿಕ ಸಮಾಜವನ್ನೇ ಬೆಚ್ಚಿ ಬೀಳಿಸಿದೆ. ರಿಕ್ಷಾ ಚಾಲಕನ ಬರ್ಬರ ಕೊಲೆಗೆ ಬಂಟ್ವಾಳ ಪೊಲೀಸರ ನಿಷ್ಕ್ರೀಯತೆ, ಕ್ರಿಮಿನಲ್ ನೊಂದಿಗಿನ ಒಡನಾಟವೇ ಕಾರಣ ಎಂದು DYFI ದ.ಕ. ಜಿಲ್ಲಾ ಸಮಿತಿ ಆಪಾದಿಸಿದೆ. ದ.ಕ. ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿರುವುದನ್ನು ಈ ಘಟನೆ ಎತ್ತಿ ತೋರಿಸುತ್ತದೆ ಎಂದು DYFI ಆರೋಪಿಸಿದೆ. ಮಾರಿಪಳ್ಳ ಪರಿಸರದಲ್ಲಿ ಕಳೆದ ಒಂದೆರಡು ವರ್ಷಗಳಿಂದ ನಿರಂತರವಾಗಿ ನಡೆಯುತ್ತಿರುವ ಮಾದಕ ಪದಾರ್ಥಗಳ ಜಾಲ, ಕ್ರಿಮಿನಲ್ […]

ಮಂಗಳೂರು ರಥಬೀದಿಯಲ್ಲಿ ರಿಕ್ಷಾ ಚಾಲಕ ಹೃದಯಾಘಾತಕ್ಕೆ ಬಲಿ

Friday, June 7th, 2013
Auto Driver Died

ಮಂಗಳೂರು : ನಗರದ ರಥಬೀದಿಯ ವೆಂಕಟರಮಣ ದೇವಸ್ಥಾನದ ಬಳಿ ರಿಕ್ಷಾ  ಚಾಲಕರೊಬ್ಬರು ದಾರಿ ಮಧ್ಯದಲ್ಲಿ ರಿಕ್ಷಾವನ್ನು ನಿಲ್ಲಿಸಿ  ಹೃದಯಾಘಾತದಿಂದ  ಸ್ಥಳದಲ್ಲೇ  ಬಿದ್ದು  ಮೃತಪಟ್ಟ ಘಟನೆ  ಇಂದು ನಡೆದಿದೆ. ಆಟೊ ರಿಕ್ಷಾದ ಚಾಲಕ ಸುರೇಶ್(43) ಮೃತಪಟ್ಟವರಾಗಿದ್ದು  ಅವರು ಮಂಗಳಾದೇವಿ ಬೋಳಾರದ ನಿವಾಸಿಯಾಗಿದ್ದಾರೆ.  ನಗರದ ವಿಶ್ವಭವನದ ಬಳಿಯಿರುವ ಆಟೋರಿಕ್ಷಾ ನಿಲ್ದಾಣದಲ್ಲಿ ತಮ್ಮ ಕೆ.ಎ.19ಸಿ 2373 ನೋಂದಣಿ ಸಂಖ್ಯೆಯ ಆಟೋವನ್ನು ಪಾರ್ಕ್ ಮಾಡುತ್ತಿದ್ದರು. ಇಂದು ರಥಬೀದಿಗೆ ತಮ್ಮ ರಿಕ್ಷಾದಲ್ಲಿ ಬಾಡಿಗೆಗೆ ಬಂದಿದ್ದ ಸಂದರ್ಭದಲ್ಲಿ  ತೀವ್ರ ತೆರನಾದ ಎದೆನೋವು ಕಾಣಿಸಿಕೊಂಡು ದಾರಿಮಧ್ಯೆಯೇ ರಿಕ್ಷಾವನ್ನು […]