ತಲೆಮರೆಸಿಕೊಂಡ ಗಾಂಜಾ ಪ್ರಕರಣದ ಆರೋಪಿ ಬಂಧನ

Saturday, July 30th, 2016
Ambachu

ಮಂಜೇಶ್ವರ: ಪೊಲೀಸರ ಕಾರ್ಯಾಚರಣೆಯ ಸಂದಭದಲ್ಲಿ ಗಾಂಜಾ ಹಾಗೂ ಆಟೋ ರಿಕ್ಷಾ ಉಪೇಕ್ಷಿಸಿ ಪರಾರಿಯಾಗಿದ್ದ ಆರೋಪಿ ಮಳ್ಳಂಗೈ ನಿವಾಸಿ ಅಬ್ಬಾಸ್ ಯಾನೆ ಅಂಬಾಚು(42) ನನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ. ಜೂನ್ 4 ರಂದು ಉಪ್ಪಳ ಬಳಿಯ ಪತ್ವಾಡಿಯಲ್ಲಿ ಅಬ್ಬಾಸ್ ಯಾನೆ ಅಂಬಾಚು ಆಟೋ ರಿಕ್ಷಾದಲ್ಲಿ ಗಾಂಜಾ ಸಾಗಿಸುತ್ತಿದ್ದ ವೇಳೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು. ಈ ವೇಳೆ ಸಂದಭದಲ್ಲಿ ಗಾಂಜಾ ಹಾಗು ಆಟೋ ರಿಕ್ಷಾ ಉಪೇಕ್ಷಿಸಿ ಪರಾರಿಯಾಗಿದ್ದ. ರಿಕ್ಷಾದಿಂದ 200 ಗ್ರಾಂ ಗಾಂಜಾ ವಶಪಡಿಸಿಕೊಳ್ಳಲಾಗಿತ್ತು.

ಮುರಳೀ ಶ್ಯಾಮ್‌ಗೆ ಡಾಕ್ಟರೇಟ್ ಪದವಿ

Thursday, February 11th, 2016
shyam bhat

ಕುಂಬಳೆ: ತಿರುಪತಿಯ ರಾಷ್ಟ್ರೀಯ ಸಂಸ್ಕೃತ ವಿದ್ಯಾಪೀಠದ ಫಲಿತ ಜ್ಯೋತಿಷ ವಿಭಾಗದಲ್ಲಿ ‘ದೈವಜ್ಞ ಕಾಮಧೇನು ಗ್ರಂಥಸ್ಯ ಸಮೀಕ್ಷಾತ್ಮಕ ಮಧ್ಯಯನಮ್ ಮಹಾ ಪ್ರಬಂಧವನ್ನು ಮಂಡಿಸಿ ಪಿ.ಎಚ್.ಡಿ ಗೆ ಸಮಾನವಾದ ‘ವಿದ್ಯಾವಾರಿಧಿ ಪದವಿಯನ್ನು ಮುರಳೀ ಶ್ಯಾಮ ಪಡೆದಿದ್ದಾರೆ. ಅವರು ಎಡನಾಡು ಗ್ರಾಮದ ಹೊಸಮನೆ ನಿವಾಸಿ ಎಚ್. ಕೃಷ್ಣ ಭಟ್ ಮತ್ತು ಶ್ಯಾಮಲಾ ದಂಪತಿಯ ಪುತ್ರ. ಮುರಳೀ ಶ್ಯಾಮ್ ಪ್ರೊ.ರಾಧಾಕಾಂತ ಠಾಕೂರ್ ಇವರ ಮಾರ್ಗದರ್ಶನದಲ್ಲಿ ಮಹಾಪ್ರಬಂಧವನ್ನು ಮಂಡಿಸಿದ್ದರು. ಇತ್ತೀಚೆಗೆ ತಿರುಪತಿಯಲ್ಲಿ ನಡೆದ ಘಟಿಕೋತ್ಸವದಲ್ಲಿ ಮುರಳೀ ಶ್ಯಾಮ್‌ಗೆ ಡಾಕ್ಟರೇಟ್ ನೀಡಿ ಗೌರವಿಸಲಾಯಿತು. ಇವರು ಪೆರಡಾಲ […]