ಗ್ರಾ.ಪಂ. ಚುನಾವಣೆಯ ಪಕ್ಷೇತರ ಅಭ್ಯರ್ಥಿ, ಆರ್‌ಟಿಐ ಕಾರ್ಯಕರ್ತ ನಾಪತ್ತೆ

Sunday, December 20th, 2020
missing

ಕುಂದಾಪುರ : ಆರ್‌ಟಿಐ ಕಾರ್ಯಕರ್ತ ತನ್ನ ಕುಟುಂಬದ ಸದಸ್ಯರಾದ ಅಶೋಕ ಶೆಟ್ಟಿಗಾರ್‌ (49) ಹಾಗೂ ಅವರ ಪತ್ನಿ ಶ್ರೀನಿಧಿ (40), ಮಗ ಅಶ್ವಿ‌ನ್‌ (16), ಮಗಳು ಆಶಿಕಾ (14) ಅವರು ಅಮಾಸೆಬೈಲು ಗ್ರಾ.ಪಂ. ವ್ಯಾಪ್ತಿಯ ಮಚ್ಚಟ್ಟು ಗ್ರಾಮದ ತೊಂಬಟ್ಟು ಕಬ್ಬಿನಾಲೆಯಿಂದ  ಡಿ. 15ರಿಂದ ನಾಪತ್ತೆಯಾಗಿದ್ದಾರೆ ಎಂದು ಅವರ ಅಳಿಯ ಶಿವಕುಮಾರ್‌ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಅಶೋಕ್‌ ಶೆಟ್ಟಿಗಾರ್‌ ಅವರು ಗ್ರಾ.ಪಂ. ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು. ರಾಜಕೀಯ ಒತ್ತಡದಿಂದ ಚುನಾವಣೆ ಮುಗಿಯುವವರೆಗೆ ಬೇರೆಡೆ ಇರೋಣವೆಂದು […]

ಎರಡು ಲಾರಿಗಳಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 52 ಕೋಣಗಳ ವಶ

Tuesday, September 15th, 2020
baffalo

ಉಡುಪಿ  : ಹೊರ ಜಿಲ್ಲೆಗಳಿಂದ ಎರಡು ಲಾರಿಗಳಲ್ಲಿ ಅಕ್ರಮವಾಗಿ ಜಾನುವಾರುಗಳನ್ನು ಸಾಗಾಟ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಅಮಾಸೆಬೈಲು ಪೊಲೀಸರು ಮಂಗಳವಾರ  ಬೆಳಗ್ಗೆ ಹೊಸಂಗಡಿ ಚೆಕ್‌ಪೋಸ್ಟ್‌ನಲ್ಲಿ ಬಂಧಿಸಿದ್ದಾರೆ. ಬಂಧಿತರಿಂದ  ಒಟ್ಟು 52 ಕೋಣಗಳನ್ನು ವಶಪಡಿಸಿಕೊಂಡಿದ್ದಾರೆ. ದಾವಣಗೆರೆ ಹರಿಹರ ತಾಲೂಕಿನ ಮೆಹಬೂಬ್(27), ಬೆಳಗಾವಿ ಬೈಲಹೊಂಗಲ ತಾಲೂಕಿನ ಬಾಪು ಸಾಹೇಬ್(46) ಮತ್ತು ಆಸಿಫ್(23) ಹಾಗೂ ದಾವಣಗೆರೆ ಹೊಸ ಚಿಕ್ಕನಹಳ್ಳಿ ಹೊಸ ಬಡಾವಣೆಯ ಇಮ್ರಾನ್(29) ಬಂಧಿತ ಆರೋಪಿಗಳು. ಎರಡು ಈಚರ್ ಲಾರಿಗಳಲ್ಲಿ ವಾಹನಗಳಲ್ಲಿ ಕ್ರಮವಾಗಿ 24 ಮತ್ತು 28 ಕೋಣಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಬಗ್ಗೆ […]

ವಧೆಗಾಗಿ 37 ಕೋಣಗಳನ್ನು ಹಿಂಸ್ಮಾತಕವಾಗಿ ಸಾಗಿಸುತ್ತಿದ್ದ ಟ್ರಕ್ ವಶ

Wednesday, August 19th, 2020
buffalo

ಕುಂದಾಪುರ :  ಅಮಾಸೆಬೈಲು ಪೊಲೀಸ್ ಠಾಣೆಯ ಹೊಸಂಗಡಿ ಚಕ್ ಪೋಸ್ಟ್  ವಾಹನ ತಪಾಸಣೆಯ ವೇಳೆಯಲ್ಲಿ ಹುಲಿಕಲ್ ಘಾಟಿಯಿಂದ ಹೊಸಂಗಡಿ ಕಡೆಗೆ ಬರುತ್ತಿರುವ ಟ್ರಕ್ ವಾಹನದಲ್ಲಿ ಅಕ್ರಮ ಗೋ ಸಾಗಣಿಕೆ ಪತ್ತೆ ಹಚ್ಚಿದ್ದಾರೆ. ಉತ್ತರ ಪ್ರದೇಶ ನೊಂದಾವಣೆಯ ಟ್ರಕ್‍ನಲ್ಲಿ ಸುಮಾರು 37 ಕೋಣಗಳನ್ನು ಹಿಂಸ್ಮಾತಕವಾಗಿ ಕಟ್ಟಿಹಾಕಿ, ವಧೆ ಮಾಡುವ ಉದ್ದೇಶಕ್ಕಾಗಿ ಸಾಗಣಿಕೆ ಮಾಡುತ್ತಿದ್ದರು. ಪೊಲೀಸರು ವಾಹನ ಮತ್ತು ಕೋಣಗಳನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಗಳಾದ ಉತ್ತರ ಪ್ರದೇಶದ ಸಾಹಿರ್ ಜಿಲ್ಲೆಯ ಕಮಲಾಪುರದ ಶಕೀಲ್(35) ಮತ್ತು ಮೀರತ್ ಜಿಲ್ಲೆಯ ಪಕ್ರಿ ಆಲಂ (24)ನ್ನು […]