ಆರ್ಯಭಟ ಪ್ರಶಸ್ತಿ ವಿಜೇತ ಸಂಗೀತ ಕಲಾವಿದೆ ಶೀಲಾ ದಿವಾಕರ್ ನಿಧನ

Thursday, January 27th, 2022
Sheela Diwakar

ಮಂಗಳೂರು :  ಆರ್ಯಭಟ ಪ್ರಶಸ್ತಿ ಪುರಸ್ಕೃತೆ, 28 ವರ್ಷಗಳಿಂದ ಸಂಗೀತ ರಂಗದ ನೂರಾರು ಮೇರು ಪ್ರತಿಭೆಗಳಿಗೆ ಗುರುವಾಗಿರುವ ಶೀಲಾ ದಿವಾಕರ್ (53) ಬುಧವಾರ ನಿಧನರಾಗಿದ್ದಾರೆ. ‘ಕರಾವಳಿ ಕೋಗಿಲೆ’ ಖ್ಯಾತಿಯ ಸಂಗೀತ ಗುರುಗಳಾದ ವಿದುಷಿ ಶ್ರೀಮತಿ ಶೀಲಾ ದಿವಾಕರ್ ಅನಾರೋಗ್ಯದ ಹಿನ್ನೆಲೆ ಕೆಲ ದಿನಗಳ ಹಿಂದೆ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು, ಆದರೆ  ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ. ದ. ಕ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ವಿದ್ವತ್ ಸನ್ಮಾನ ಸ್ವೀಕರಿಸಿದ ಕರಾವಳಿ ಕೋಗಿಲೆ, 3000ಕ್ಕೂ ಅಧಿಕ ಪ್ರತಿಷ್ಠಿತ ವೇದಿಕೆಗಳಲ್ಲಿ ಜನಮೆಚ್ಚುಗೆಯ ಕಾರ್ಯಕ್ರಮ ನೀಡಿದ ಖ್ಯಾತ ಗಾಯಕಿಯಾಗಿದ್ದರು. ಶೀಲಾರವರು ಮಂಗಳೂರು, […]

ಕೃಷಿ ಪ್ರೀತಿ, ಕೃಷ್ಣಪ್ಪಗೌಡರಿಗೆ ಒಲಿದ ಆರ್ಯಭಟ ಪ್ರಶಸ್ತಿ

Monday, October 16th, 2017
Krushnappa gowda

ಮಂಗಳೂರು: ಮಂಗಳೂರಿನ ಈ ಸಾಮಾನ್ಯ ಟೆರೇಸ್ ಮನೆ ಮಹಡಿ ಮೇಲೆ ಹೋಗಿ ನೋಡಿದರೆ ಹಚ್ಚ ಹಸುರಿನ ಸುಂದರ ತೋಟ ಕಾಣಿಸುತ್ತದೆ. ಈ ತೋಟದಲ್ಲಿ ತರಹೇವಾರಿ ಹೂ ಗಿಡಗಳಿಂದ ಹಿಡಿದು ಹಣ್ಣು ತರಕಾರಿ, ಭತ್ತದ ತನಕ ಪುಟ್ಟದೊಂದು ಸಸ್ಯಕಾಶಿಯ ದರ್ಶನವಾಗುತ್ತದೆ. ಹೌದು, ಮಂಗಳೂರು ನಗರದಲ್ಲಿ ಈಗ ಎಲ್ಲಿ ನೋಡಿದರೂ ಬರೀ ಕಾಂಕ್ರೀಟ್ ರಸ್ತೆಗಳು ಬಾನೆತ್ತರದ ಕಟ್ಟಡಗಳೆ ಕಾಣಿಸುತ್ತದೆ. ಆದರೆ ಇಲ್ಲೊಬ್ಬರು ತಮ್ಮ ಮನೆಯ ಟೆರೇಸ್ ಅನ್ನೆ ಒಂದು ಸುಂದರ ತೋಟವನ್ನಾಗಿ ಮಾರ್ಪಾಡಿಸಿದ್ದಾರೆ. ಮಾತ್ರವಲ್ಲ ವರ್ಷಕ್ಕೆ ಸುಮಾರು 50 ಕೆ […]