ಇಸ್ಲಾಂ ಗೆ ಮತಾಂತರಗೊಂಡ ಹಿಂದೂ ಮಹಿಳೆಗೆ ಕೊನೆಗೂ ನ್ಯಾಯ ಸಿಗಲಿಲ್ಲ !

Saturday, October 23rd, 2021
ayesha

ಮಂಗಳೂರು : ಕಳೆದ ಎರಡು ವರ್ಷಗಳಿಂದ ಗಂಡನೊಂದಿಗೆ ಜೀವನ ನಡೆಸಬೇಕು ಎಂದು ಹೋರಾಟ ಮಾಡುತ್ತಿದ್ದ ಮಹಿಳೆ ಗಂಡನಿಂದ ಯಾವುದೇ ಸ್ಪಂದನೆ ಸಿಗದ ಕಾರಣ ಹೋರಾಟದಿಂದ ಹಿಂದೆ ಸರಿದು ತನ್ನಿಷ್ಟದಂತೆ ಜೀವಿಸಲು ತೀರ್ಮಾನಿಸಿದ್ದೇನೆ ಎಂದು ಹೇಳಿದ್ದಾರೆ. ಹಿಂದೂ ಧರ್ಮಕ್ಕೆ ಸೇರಿದ ಶಾಂತಿ ಜೂಬಿ ಮುಸ್ಲಿಂ ಯುವಕನನ್ನು ಮದುವೆಯಾಗಿ ಮತಾಂತರ ಗೊಂಡ ಬಳಿಕ  ಆತ ಆಕೆಯನ್ನು ಬಿಟ್ಟುಬಿಟ್ಟಿದ್ದಾನೆ. ಸುಳ್ಯದ ಕಟ್ಟೆಕ್ಕಾರ್ಸ್ ಕುಟುಂಬದ ಇಬ್ರಾಹಿಂ ಖಲೀಲ್ ಎಂಬವ ಕೇರಳದ ಕಣ್ಣೂರಿನ ಹಿಂದೂ ಧರ್ಮಕ್ಕೆ ಸೇರಿದ ಶಾಂತಿ ಜೂಬಿ ಎಂಬ ಯುವತಿಯನ್ನು ಮದುವೆಯಾಗಿದ್ದನು. ಯುವತಿ ಮತಾಂತರವಾದ […]

ಜಗತ್ತಿನಲ್ಲಿ ಇಸ್ಲಾಂನ ಆಡಳಿತ ತರಲಿಕ್ಕಾಗಿಯೇ ‘ಹಲಾಲ್’ ಆರ್ಥಿಕತೆಯ ರಚನೆ !

Monday, September 20th, 2021
Ramesh Sindhe

ಮಂಗಳೂರು  : ‘ಹಲಾಲ್ ಸರ್ಟಿಫಿಕೆಶನ್'(ಪ್ರಮಾಣಪತ್ರ) ಮೂಲಕ ಜಗತ್ತಿನ ಆರ್ಥಿಕ ವ್ಯವಸ್ಥೆಯನ್ನು ನಿಯಂತ್ರಿಸಲಾಗುತ್ತಿದೆ. ಕಳೆದ 50 ವರ್ಷಗಳಲ್ಲಿ, ಇಸ್ಲಾಮಿಕ್ ದೇಶಗಳು 10 ಟ್ರಿಲಿಯನ್ ಅಮೇರಿಕಾ ಡಾಲರ್‌ನ ಆರ್ಥಿಕತೆಯನ್ನು ನಿರ್ಮಿಸಿವೆ. ಅದು ಭಾರತದ ಆರ್ಥಿಕತೆಯ ಮೂರು ಪಟ್ಟಿನಷ್ಟಿದೆ. ಇಸ್ಲಾಮಿಕ್ ಪ್ರಾಬಲ್ಯ ಮತ್ತು ಭಯೋತ್ಪಾದನೆಯನ್ನು ನಿರ್ಮಿಸಲು ಹಲಾಲ್‌ನ ಹಣವನ್ನು ಬಳಸಲಾಗುತ್ತಿದೆ, ಎಂದು ಜಗತ್ತಿನಾದ್ಯಂತದ ಅನೇಕ ಗುಪ್ತಚರ ಸಂಸ್ಥೆಗಳಿಂದ ಮಾಹಿತಿಯಿದೆ. ಹಲಾಲ್ ಇದು ‘ಮದರ ಆಫ್ ಜಿಹಾದ್’ ಆಗಿದೆ. ‘ಗ್ರಾಂಟ್ ಮುಕ್ತೀ ಆಫ್ ಬೊಸನಿಯಾ’ದ ಮೌಲಾನಾ ಮುಸ್ತಫಾ ಇವರು ಐ.ಎಸ್.ಐ.ಎಸ್. ಹಾಗೂ ತಾಲಿಬಾನ್ […]

ಭಾರತದಲ್ಲಿ ಕಮ್ಯುನಿಸ್ಟರು ಎಂದು ಹೇಳಿಕೊಳ್ಳುತ್ತಿರುವವರು ಅಸಲಿ ಕಮ್ಯುನಿಸ್ಟರಲ್ಲ

Sunday, March 21st, 2021
DRaja

ಭಾರತದಲ್ಲಿ ಅದೆಷ್ಟು ಕಮ್ಯುನಿಸ್ಟರಿದ್ದಾರೋ ಅವರ‌್ಯಾರೂ ಅಸಲಿಗೆ ಒಂದು ಕಡೆ ಕಮ್ಯುನಿಸ್ಟರಲ್ಲವೇ ಅಲ್ಲ, ಯಾಕಂದ್ರೆ ಕಮ್ಯುನಿಸ್ಟ್ ಸಿದ್ಧಾಂತ ಹೊಂದಿರುವ ವ್ಯಕ್ತಿಯು ಯಾವುದೇ ದೇವರಲ್ಲಿ ನಂಬಿಕೆಯಿರದ ನಾಸ್ತಿಕನಾಗಿರುತ್ತಾನೆ ಅದೇ ಆತ ಕಮ್ಯುನಿಸ್ಟ್ ಎಂಬುದರ ಮೊದಲ ಗುರುತಾಗಿರುತ್ತದೆ. ಭಾರತದ ಕಮ್ಯುನಿಸ್ಟರು ಫೇಕ್ ಕಮ್ಯುನಿಸ್ಟರಾಗಿದ್ದಾರೆ ಹಾಗು ಅಸಲಿಗೆ ಭಾರತದ ಈ ಕಮ್ಯುನಿಸ್ಟರು ಒಂದೋ ಇಸ್ಲಾಂ ಅಥವ ಕ್ರಿಶ್ಚಿಯನ್ನರಾಗಿದ್ದು ಹಿಂದೂ ಹೆಸರನ್ನಿಟ್ಟುಕೊಂಡು ಜನರ ಕಣ್ಣಿಗೆ ಮಣ್ಣೆರೆಚುತ್ತ ಓಡಾಡುತ್ತಿದ್ದಾರೆ. ಇದರ ಮೂಲ ಉದ್ದೇಶವೆಂದರೆ ಹಿಂದೂ ಹೆಸರಿಟ್ಟುಕೊಂಡು ಕಮ್ಯುನಿಸ್ಟ್ ಹೆಸರನ್ನ ಹೇಳಿಕೊಂಡು ಹಿಂದುಗಳಿಗೆ ಅದೆಷ್ಟು ಮೂರ್ಖರನ್ನಾಗಿ ಮಾಡಬೇಕೋ […]

ಭಾರತ ಗಾಢ ನಿದ್ದೆಯಲ್ಲಿ ಮಲಗಿದೆ, ಇಸ್ಲಾಂ ವೇಗವಾಗಿ ಬೆಳೆಯುತ್ತಿದೆ : ಸೌದಿ ಅರಬ್‌‌ನ ಪ್ರೊಫೆಸರ್ ನಾಸಿರ್ ಬಿನ್ ಸುಲೇಮಾನ್

Wednesday, March 17th, 2021
Nasir-bin-Suleiman

ರಿಯಾದ್  : ಸೌದಿ ಅರಬ್‌‌ನ ಪ್ರೊಫೆಸರ್ ನಾಸಿರ್ ಬಿನ್ ಸುಲೇಮಾನ್ ಉಲ್ ಉಮರ್, “ಭಾರತ ಗಾಢ ನಿದ್ದೆಯಲ್ಲಿ ಮಲಗಿದೆ, ಇಸ್ಲಾಂ ವೇಗವಾಗಿ ಬೆಳೆಯುತ್ತಿದೆ ಹಾಗು ಸಾವಿರಾರು ಮುಸಲ್ಮಾನರು ಪೋಲಿಸ್, ಸೇನೆ, ಅಧಿಕಾರಶಾಹಿ ಹಾಗು ಇತರೇ ಕ್ಷೇತ್ರಗಳಲ್ಲಿ ಒಳಹೊಕ್ಕು ಸಿಸ್ಟಮ್‌ನಲ್ಲಿ ಪ್ರವೇಶಿಸಿದ್ದಾರೆ ಹಾಗು ಇಸ್ಲಾಂ ಭಾರತದಲ್ಲಿ ಅತಿ ದೊಡ್ಡ ಧರ್ಮವಾಗಿದೆ. ಇಂದು ಭಾರತ ವಿನಾಶದಂಚಿಗೆ ತಲುಪಿದೆ. ಯಾವ ದೇಶ ಉದಯವಾಗುವುದಕ್ಕೆ ಹಲವಾರು ದಶಕಗಳೇ ಬೇಕಾಗುತ್ತದೆಯೋ ಅದೇ ರೀತಿ ಅದರ ವಿನಾಶವಾಗೋಕೂ ಸಮಯ ತೆಗೆದುಕೊಳ್ಳುತ್ತದೆ. ಭಾರತ ರಾತ್ರೋ ರಾತ್ರಿ ನಾಶವಾಗಲ್ಲ. […]

ಇಸ್ಲಾಂನ ತ್ರಿವಳಿ ತಲಾಖ್ ಅಸಂವಿಧಾನಿಕ, ಇದು ಮುಸ್ಲಿಂ ಮಹಿಳೆಯರ ಹಕ್ಕಿನ ಉಲ್ಲಂಘನೆಯಾಗಿದೆ: ಅಲಹಾಬಾದ್ ಹೈಕೋರ್ಟ್

Thursday, December 8th, 2016
trevali talak

ಲಖ್ನೋ: ದೇಶಾದ್ಯಂತ ದೊಡ್ಡ ವಿವಾದಕ್ಕೆ ಹಾಗೂ ಚರ್ಚೆಗೆ ಕಾರಣವಾಗಿದ್ದ ಇಸ್ಲಾಂನ ತ್ರಿವಳಿ ತಲಾಖ್ ಪದ್ಧತಿ ಅಸಂವಿಧಾನಿಕ, ಇದು ಮುಸ್ಲಿಂ ಮಹಿಳೆಯರ ಹಕ್ಕಿನ ಉಲ್ಲಂಘನೆಯಾಗಿದೆ ಎಂದು ಉತ್ತರಪ್ರದೇಶದ ಅಲಹಾಬಾದ್ ಹೈಕೋರ್ಟ್ ಪೀಠ ಮಹತ್ವದ ತೀರ್ಪನ್ನು ಗುರುವಾರ ನೀಡಿದೆ. ಮೂರು ಬಾರಿ ತಲಾಖ್ ಎಂದು ಹೇಳಿ ಮಹಿಳೆಗೆ ವಿಚ್ಛೇದನ ನೀಡುವ ಇಸ್ಲಾಂನ ಈ ಪದ್ಧತಿ ಸಂವಿಧಾನ ಬಾಹಿರವಾದದ್ದು ಎಂದು ಅಲಹಾಬಾದ್ ಹೈಕೋರ್ಟ್ ಪೀಠ ಹೇಳಿರುವುದಾಗಿ ಎಎನ್ ಐ ವರದಿ ಮಾಡಿದೆ. ತ್ರಿವಳಿ ತಲಾಖ್ ಪದ್ಧತಿ ಮುಸ್ಲಿಂ ಮಹಿಳೆಯರ ಹಕ್ಕಿನ ಉಲ್ಲಂಘನೆಯ […]