ಕೊಲೆಯಾದ ಉಡುಪಿ ಉದ್ಯಮಿ ಭಾಸ್ಕರ ಶೆಟ್ಟಿ ಕೋಟ್ಯಂತರ ಅಸ್ತಿ ಯಾರಿಗೆ ಸಿಗಲಿದೆ ? ವಿವರ ಇಲ್ಲಿದೆ ನೋಡಿ !

Friday, June 11th, 2021
Bhashkar-Shetty

ಉಡುಪಿ : ಉದ್ಯಮಿ ಭಾಸ್ಕರ ಶೆಟ್ಟಿ ಕೊಲೆ ಆಗುವ 2 ವಾರಗಳ ಹಿಂದೆ ಅಂದರೆ 2016ರ ಜು. 15ರಂದು ಭಾಸ್ಕರ ಶೆಟ್ಟಿ ತನ್ನ ಆಸ್ತಿಗೆ ಸಂಬಂಧಿಸಿದಂತೆ ವೀಲುನಾಮೆ ಯನ್ನು ಬರೆಸಿದ್ದರು. ಈ ವೀಲೆನಾಮೆಯು ಕೊಲೆ ಪ್ರಕರಣದ ಆರೋಪಪಟ್ಟಿಯಲ್ಲಿ ಸಲ್ಲಿಸಿರುವ ಒಟ್ಟು 270 ದಾಖಲೆಗಳ ಪೈಕಿ 95ನೇ ದಾಖಲೆಯಾಗಿದ್ದು, ಇದನ್ನು ಉಡುಪಿ ಜಿಲ್ಲಾ ಮತ್ತು ನ್ಯಾಯಾಲಯ ವಿಚಾರಣೆ ವೇಳೆ ಪರಿಗಣಿದೆ . ಪ್ರಕರಣದ ಆರೋಪಿಗಳಾದ ಪತ್ನಿ, ಮಗ ಸೇರಿದಂತೆ ಮೂವರು ಜೀವಿತಾವಧಿ ಜೈಲುಶಿಕ್ಷೆಗೆ ಗುರಿಯಾಗಿರುವ ಹಿನ್ನಲೆಯಲ್ಲಿ ಈಗ ಭಾಸ್ಕರ ಅವರ ಆಸ್ತಿಯ ವಾರಸುದಾರಿಕೆಯ […]

ಹಿಂದೂ ದೇವರುಗಳ ನಿಂದಿಸಿದ ತೊಕ್ಕೊಟ್ಟು ನಿವಾಸಿ, ಉದ್ಯಮಿಯ ಬಂಧನ

Saturday, May 15th, 2021
Iqbal

ಉಳ್ಳಾಲ : ರಾಮ ಕೃಷ್ಣ, ಬಸವಣ್ಣ ರಾಮ ದೇವರು ಅಲ್ಲ ಅವರೆಲ್ಲ ಮಾನವರಂತೆ. ನಾವು ಯಾತಕ್ಕೆ ಹಿಂದೂ ಹಬ್ಬಗಳಿಗೆ ಶುಭ ಕೋರಬೇಕು ಎಂದೆಲ್ಲಾ ಹೇಳಿ  ಹಿಂದೂ ದೇವರುಗಳ ನಿಂದಿಸಿದ ತೊಕ್ಕೊಟ್ಟು ನಿವಾಸಿ, ಉದ್ಯಮಿಯನ್ನು ಉಳ್ಳಾಲ ಪೊಲೀಸರು ಮೇ. 15 ರ ಶನಿವಾರ ಬಂಧಿಸಿದ್ದಾರೆ. ಬಂಧಿತನನ್ನು ತೊಕ್ಕೊಟ್ಟು ಸ್ಮಾರ್ಟ್ ಸಿಟಿ ವಸತಿ ಸಂಕೀರ್ಣದಲ್ಲಿ ಇರುವ ಅಂಗಡಿ ಹೊಂದಿರುವ ಉದ್ಯಮಿ ಸ್ವಾಲಿಝ್ ಇಕ್ಬಾಲ್ (45) ಎಂದು ಗುರುತಿಸಲಾಗಿದೆ. ಆರೋಪಿ ಹಿಂದೂ ದೇವರುಗಳ ವಿರುದ್ಧ ನಿಂದನೆಯ ಮಾತುಗಳನ್ನು ಆಡಿದ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ […]

ಬಾಕ್ಸೈಟ್ ಮೈನಿಂಗ್ ವ್ಯವಹಾರದಲ್ಲಿ ಮೋಸ, ಫಳ್ನೀರ್ ನಿವಾಸಿಯ ಬಂಧನ

Friday, April 23rd, 2021
Divya Darshan

ಮಂಗಳೂರು : ಬಾಕ್ಸೈಟ್ ಮೈನಿಂಗ್ ವ್ಯವಹಾರದಲ್ಲಿದ್ದ ಕೇರಳ ಮೂಲದ ಉದ್ಯಮಿ ಯೊಬ್ಬರನ್ನು ಸುಮಾರು ಎರಡೂವರೆ ತಿಂಗಳ ಕಾಲ ಒತ್ತೆಯಾಳಾಗಿರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಫಳ್ನೀರ್ ನಿವಾಸಿ ದಿವ್ಯದರ್ಶನ (33) ಎಂಬಾತನನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಈ ಕುರಿತು ತಿಳಿಸಿದ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್, ದುಬೈನಲ್ಲಿ ಉದ್ಯೋಗಿಯಾಗಿದ್ದ ಕೇರಳ ಮೂಲದ ಮುಹಮ್ಮದ್ ಹನೀಫ್ ಎಂಬವರನ್ನು 2019-20ನೆ ಸಾಲಿನ ಅವಧಿಯಲ್ಲಿ ಜೀವ ಬೆದರಿಕೆ ಇದೆ ಎಂಬುದಾಗಿ ಹೇಳಿ ಅವರನ್ನು ತನ್ನ ಫ್ಲ್ಯಾಟ್‌ನಲ್ಲಿ ದಿವ್ಯದರ್ಶನ  ಇರಿಸಿದ್ದ ಎಂದು ಹೇಳಿದರು. ತನ್ನದೇ ಸಹಚರರಿಂದ […]

ಉದ್ಯಮಿಯ 8 ವರ್ಷದ ಪುತ್ರನ ಅಪಹರಣ, 10 ಕೋಟಿ ಹಣದ ಬೇಡಿಕೆ

Friday, December 18th, 2020
Anubhav

ಉಜಿರೆ: ಇಂಡಿಕಾ ಕಾರಿನಲ್ಲಿ ಬಂದ ಅಪರಿಚಿತ ವ್ಯಕ್ತಿಗಳು ಉಜಿರೆಯ ರಥಬೀದಿ ನಿವಾಸಿ, ಖ್ಯಾತ ಉದ್ಯಮಿ ಬಿಜೋಯ್ ಯವರ 8 ವರ್ಷದ ಪುತ್ರ ಅನುಭವ್ ನನ್ನು  ಗುರುವಾರ ಸಂಜೆ ಮನೆಯಂಗಳದಿಂದ  ಅಪಹರಿಸಲಾಗಿದ್ದು, ಅಪಹರಣಗಾರರ ಸುಳಿವು ಇನ್ನೂ ಲಭ್ಯವಾಗಿಲ್ಲ. ಆದರೆ ಅಪಹರಣಗಾರರು ಬಾಲಕನ ಬಿಡುಗಡೆಗೆ ರೂ.10 ಕೋಟಿ ಹಣದ ಬೇಡಿಕೆಯನ್ನು ಮುಂದಿಟ್ಟಿದ್ದಾರೆ. ಡಿ.17 ರಂದು ಮನೆಯ ಗೇಟಿನ ಬಳಿ ಆಟವಾಡುತ್ತಿದ್ದ ಅನುಭವ್ ನನ್ನು ಇಂಡಿಕಾ ಕಾರಿನಲ್ಲಿ ಬಂದ ಅಪರಿಚಿತ ವ್ಯಕ್ತಿಗಳು ಅಪಹರಿಸಿದ್ದು, ಈ ಸಂದರ್ಭ ಬಾಲಕನ ತಾತ ಶಿವನ್ ರವರು ಓಡಿ […]

ಮಂಗಳೂರು : ಕೇರಳ ಮೂಲದ ಉದ್ಯಮಿಯನ್ನು ಮನೆಯಲ್ಲೇ ಕೊಲೆಗೈದ ದುಷ್ಕರ್ಮಿಗಳು

Tuesday, November 3rd, 2020
Murder

ಮಂಗಳೂರು : ಕೇರಳ ಮೂಲದ ಉದ್ಯಮಿಯೊಬ್ಬರನ್ನು ದುಷ್ಕರ್ಮಿಗಳು ಚೂರಿಯಿಂದ ಹಾಡಹಗಲೇ ಇರಿದು ಹತ್ಯೆ ಮಾಡಿದ ಘಟನೆ ನಗರದ ಕಾವೂರಿನಲ್ಲಿ ಮಂಗಳವಾರ ನಡೆದಿದೆ. ಕಾವೂರು ಮಲ್ಲಿ ಲೇಔಟ್ ನಿವಾಸಿ ಸುರೇಂದ್ರನ್ (60) ಕೊಲೆಯಾದ ವ್ಯಕ್ತಿ ಎಂದು ತಿಳಿದುಬಂದಿದೆ. ಮೂಲತಃ ಕೇರಳದವರಾದ ಸುರೇಂದ್ರನ್ ಅವರು ಹಲವು ವರ್ಷಗಳಿಂದ ಕಾವೂರು ಮಲ್ಲಿ ಲೇಔಟ್‌ನಲ್ಲೇ ಸ್ವಂತ ಮನೆ ಮಾಡಿ ತನ್ನ ಪತ್ನಿ ಜತೆ ವಾಸಿಸುತ್ತಿದ್ದರು. ಮಂಗಳವಾರ ಸುರೇಂದ್ರನ್ ನಗರಕ್ಕೆ ಹೋಗಿದ್ದರೆ, ಅವರ ಪತ್ನಿ ಫಾರ್ಮ್ ಉದ್ಯಮ ವ್ಯವಹಾರ ನೋಡಿಕೊಳ್ಳಲು ತೆರಳಿದ್ದರು. ಮಧ್ಯಾಹ್ನ 1 […]

ಉದ್ಯಮಿ ಮನೆಯಿಂದ ತಪ್ಪಿಸಿಕೊಂಡ ಜೀತಕ್ಕೆ ಇಟ್ಟುಕೊಂಡಿದ್ದ ಬಾಲಕಿ, ಸಹಾಯಕ್ಕೆ ಬಂದ ಚೈಲ್ಡ್‌ಲೈನ್

Monday, October 5th, 2020
child jeeta

ಮಂಗಳೂರು: ಉದ್ಯಮಿಯೊಬ್ಬರು ಬಾಲಕಿಯೊಬ್ಬಳನ್ನು ಜೀತಕ್ಕೆ ಇಟ್ಟುಕೊಂಡಿದ್ದು ಆಕೆ ತಾನು ಕೆಲಸ ಮಾಡುತ್ತಿದ್ದ ಮನೆಯಿಂದ ತಪ್ಪಿಸಿಕೊಂಡಿದ್ದಲ್ಲದೆ, ರಸ್ತೆಗೆ ಬಂದು ಸಹಾಯ ಮಾಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಳು. ಇದನ್ನು ಗಮನಿಸಿದ ಸ್ಥಳೀಯರು ಚೈಲ್ಡ್‌ಲೈನ್‌ಗೆ ಕರೆ ಮಾಡಿ ತಿಳಿಸಿದ್ದರು. ಆ ಪ್ರಕಾರ ಬರ್ಕೆ ಪೊಲೀಸರು ಬಾಲಕಿಯನ್ನು ಜೀತಕ್ಕಿಟ್ಟುಕೊಂಡಿದ್ದ ಮನೆಗೆ ತೆರಳಿದ್ದು, ಯಾವುದೇ ಕ್ರಮ ವಹಿಸದೆ ಹಿಂದಿರುಗಿದ್ದಾರೆ ಎಂದು ಒಡನಾಡಿ ಎನ್ಜಿಒ ಸಂಸ್ಥೆ ಆರೋಪಿಸಿದೆ. ಬಳಿಕ ಬಾಲಕಿ ಒಡನಾಡಿ ಸಂಸ್ಥೆಗೆ ತೆರಳಿ ದೂರು ನೀಡಿದ್ದಳು. ಮೈಸೂರಿನ ಈ ಬಾಲಕಿಯನ್ನು ಜೀತದಾಳು ಆಗಿ ಇರಿಸಿಕೊಂಡಿರುವುದರ ನಗರದ ಉದ್ಯಮಿಯೊಬ್ಬರ ವಿರುದ್ಧ […]

ಲೋಕ್ ಡೌನ್ ಸಂದರ್ಭದಲ್ಲಿ ವೈದ್ಯಕೀಯ ಸೇವಾನಿರತರಾದವರಿಗೆ ಉದ್ಯಮಿ ಎನ್. ಟಿ. ಪೂಜಾರಿಯವರ ಸಹಾಯ

Saturday, May 30th, 2020
NT-poojary

ಮುಂಬಯಿ : ಮಹಾನಗರದ ಜನಪ್ರಿಯ ಹೋಟೇಲು ಉದ್ಯಮಿ, ಬಿಲ್ಲವ ಚೇಂಬರ್ ಆಫ್ ಕಾರ್ಮರ್ಸ್ ಮತ್ತು ಇಂಡಷ್ಟ್ರೀಸ್ ನ ಕಾರ್ಯಾಧ್ಯಕ್ಷ ಎನ್. ಟಿ. ಪೂಜಾರಿಯವರು ಜನಸಾಮಾನ್ಯರ ಸೇವೆಯಲ್ಲಿ ಈಗಾಗಲೇ ಜನಪ್ರಿಯರಾಗಿದ್ದು. ಕಳೆದ ಹಲವಾರು ವರ್ಷಗಳಿಂದ ತನ್ನ ತವರೂರಲ್ಲಿ ಅನೇಕ ಜೋಡಿಗಳಿಗೆ ತನ್ನ ಸ್ವಂಥ ಖರ್ಚಿನಿಂದ ವಿವಾಹ ಮಾಡಿಸುತ್ತಿರುವ ಕೊಡುಗೈ ದಾನಿಯಾಗಿರುವರು. ಇದೀಗ ಲೋಕ್ ಡೌನ್ ನಿಂದಾಗಿ ಆರಂಭದ ದಿನದಿಂದಲೇ ಮುಂಬಯಿ ಮಹಾನರಗದ ಪ್ರಮುಖ ಬಾಗಗಳಲ್ಲಿರುವ ’ಬಿ’ ಹಾಗೂ ’ಸಿ’ ವಾರ್ಡ್ ನ ಆಸ್ಪತ್ರೆಗಳಲ್ಲಿ ಕೆಲಸ ಮಾಡುತ್ತಿರುವ ಇನ್ನೂರಕ್ಕೂ ಅಧಿಕ […]

ಮಂಗಳೂರು : ಉದ್ಯಮಿ, ಸಾಧಕ ಕೆ.ಪ್ರಕಾಶ್ ಶೆಟ್ಟಿ 60ನೇ ಹುಟ್ಟು ಹಬ್ಬಕ್ಕೆ ಹರಿದು ಬಂದ ಜನಸಾಗರ

Thursday, December 26th, 2019
prakash-shetty

ಮಂಗಳೂರು : ಕೆ ಪ್ರಕಾಶ್ ಶೆಟ್ಟಿ ಅಭಿನಂದನಾ ಸಮಿತಿ ವತಿಯಿಂದ ಬುಧವಾರ ನಗರದ ಬಂಗ್ರಕೂಳೂರು ಗೋಲ್ಡ್ ಪಿಂಚ್ ಸಿಟಿ ಸಭಾಂಗಣದಲ್ಲಿ ನಡೆದ  ಉದ್ಯಮಿ, ಸಾಧಕ ಕೆ.ಪ್ರಕಾಶ್ ಶೆಟ್ಟಿಯವರ 60ನೇ ಹುಟ್ಟು ಹಬ್ಬಕ್ಕೆ ಆಗಸ್ಟ್ 25, ಬುಧವಾರ ದೇಶ, ವಿದೇಶಗಳಿಂದ ಅವರ ಅಭಿಮಾನಿಗಳ ಜನಸಾಗರವೇ ಹರಿದು ಬಂದಿತ್ತು. ರಾಜ್ಯದ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಬಿಜೆಪಿ ರಾಜ್ಯಾಧ್ಯಕ್ಷರ ಸಹಿತ, ವಿವಿಧ ಪಕ್ಷಗಳ ರಾಜಕೀಯ ಮುಖಂಡರು, ಸ್ಥಳೀಯ ಶಾಸಕರು ಅಲ್ಲದೆ ಬಂಟ ಸಮುದಾಯದ ಗಣ್ಯರ ಸಹಿತ ಸುಮಾರು ಇಪ್ಪತ್ತು ಸಾವಿರಕ್ಕೂ ಹೆಚ್ಚು ಮಂದಿ ಕೆ.ಪ್ರಕಾಶ್ ಶೆಟ್ಟಿ […]

ಬಲ್ಲಾಳ್ ಬಾಗ್ ಶೂಟೌಟ್ ಆರು ಮಂದಿ ಆರೋಪಿಗಳ ಬಂಧನ

Wednesday, August 7th, 2013
Ballalbagh-shoot-out

ಮಂಗಳೂರು :  ನಗರದ – ಮಣ್ಣಗುಡ್ಡ  ರಸ್ತೆಯಲ್ಲಿ  ಆಗಸ್ಟ್ 2 ರಂದು ಉದ್ಯಮಿಯ ಮೇಲೆ ನಡೆದ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆನ್ನು  ಬರ್ಕೆ ಪೊಲೀಸರು  ಮಂಗಳವಾರ ವಶಕ್ಕೆ ತೆಗೆದುಕೊಂಡಿದ್ದಾರೆ. ಆರೋಪಿಗಳಾದ ಸೂರಿಂಜೆಯ ನಿತೀಷ್‌ಕುಮಾರ್ ಯಾನೆ ಲಿಂತು(20), ಸತೀಷ್ ಯಾನೆ ಸಚ್ಚು (28) ಮರೋಳಿಯ ದೀಕ್ಷಿತ್ ಯಾನೆ ದಿಕ್ಷ್(26), ಬಜ್ಪೆಯ ಪದ್ಮ ರಾಜ್ ಯಾನೆ ಪದ್ದು(24), ಸೋಮೇಶ್ವರದ ಚೋನಿಯ ಯಾನೆ ಕೇಶವ (23)ಮತ್ತು ಕಂಕನಾಡಿಯ ಅನಿಲ್ (30) ಬಂಧಿತ ಆರೋಪಿಗಳಾ ಗಿದ್ದಾರೆ.  ಇವರು ಈ ಹಿಂದೆ ಹಲವಾರು ಕೊಲೆ ಪ್ರಕರಣಗಳಲ್ಲಿ ಆರೋಪಿಗಳಾಗಿದ್ದು , ನಿತೀಶ್‌ […]