ಎಜೆ ಆಸ್ಪತ್ರೆಯಲ್ಲಿ ದಾಖಲಾಗಿದ್ದ 20 ವರ್ಷದ ಯುವತಿಯ ಅಂಗಾಂಗ ದಾನ

Tuesday, September 14th, 2021
Kavana

ಮಂಗಳೂರು  : ಎಜೆ ಆಸ್ಪತ್ರೆಯಲ್ಲಿ ದಾಖಲಾಗಿದ್ದ 20 ವರ್ಷದ ಯುವತಿಯೊಬ್ಬಳು ಹಲವರ ಬದುಕಿಗೆ ಬೆಳಕಾಗುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾಳೆ . ಆಕೆಯ ಹೆಸರು ರಟ್ಟಿಹಳ್ಳಿ ತಾಲೂಕಿನ ಹಳ್ಳೂರು ಗ್ರಾಮದ ಶಿಕಾರಿಪುರದ ಗಾರ್ಮೆಂಟ್ಸ್ ನಲ್ಲಿ  ಕೆಲಸ ಮಾಡುತ್ತಿದ್ದ ಕವನ ಮಳ್ಳಯ್ಯ ಹಿರೇಮಠ. ಸೆ.9ರಂದು ಹೊನ್ನಾಳಿ ತಾಲೂಕು ಸೊರಟೂರು ಗ್ರಾಮದ ಬಳಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಮೃತಪಟ್ಟು ಕವನ ಗಂಭೀರ ಗಾಯಗೊಂಡಿದ್ದರು. ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಕವನರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ತಲೆಗೆ ತೀವ್ರ ಪೆಟ್ಟಾಗಿದ್ದರಿಂದ ಕೋಮಾಗೆ ತಲುಪಿದ್ದರು. ಅವರು ಮಿದುಳು ನಿಷ್ಕ್ರಿಯಗೊಂಡಿತ್ತು. ಮಗಳಂತೂ […]

ಮಂಗಳೂರಿನ ಕದ್ರಿ ಅಗ್ನಿಶಾಮಕದಳದ ಸಿಬ್ಬಂದಿ ಕೊರೊನಾ ಸೋಂಕಿಗೆ ಬಲಿ

Monday, May 24th, 2021
naveen Andra

ಮಂಗಳೂರು : ಮಂಗಳೂರಿನ ಕದ್ರಿ ಅಗ್ನಿಶಾಮಕದಳದಲ್ಲಿ ಕರ್ತವ್ಯ ನಿಭಾಯಿಸುತ್ತಿದ್ದ ಸಿಬ್ಬಂದಿಯೊಬ್ಬರು ಕೋವಿಡ್ ಸೋಂಕಿಗೆ ಬಲಿಯಾಗಿದ್ದಾರೆ. ನವೀನ್ ಚಂದ್ರ  (54) ಕೋವಿಡ್ ಸೋಂಕಿನಿಂದ ಮೃತಪಟ್ಟವರು. ನವೀನ್ ಅವರಿಗೆ ಮೇ. 9 ರಂದು ಕೋವಿಡ್ ಸೋಂಕು ದೃಢವಾಗಿತ್ತು.ಅದೇ ದಿನ ಮಂಗಳೂರಿನ ಎಜೆ ಆಸ್ಪತ್ರೆಗೆ ದಾಖಲಾದ ಅವರು ಮೇ.23 ( ಭಾನುವಾರ) ಸೋಂಕಿಗೆ ಬಲಿಯಾಗಿದ್ದಾರೆ. 1997 ರಲ್ಲಿ ಸೇವೆ ಶುರು ಮಾಡಿದ್ದ ನವೀನ್, ಕದ್ರಿಯ ಅಗ್ನಿಶಾಮಕದಳದಲ್ಲಿ ಸಿಬ್ಬಂದಿಯಾಗಿದ್ದರು. ನವೀನ್ ಅವರು ಸಾಂಸ್ಕೃತಿಕ, ಸಾಮಾಜಿಕ ಮತ್ತು ಸಂಗೀತದಂತಹ ಕಾರ್ಯಕ್ರಮಗಳಲ್ಲೂ ಸದಾ ಮುಂಚೂಣಿಯಲ್ಲಿರುತ್ತಿದ್ದರು. ಸುರ್ ಸಂಗಮ್ ಆರ್ಕೆಸ್ಟ್ರಾ ತಂಡದಲ್ಲಿ […]

ಎಜೆ ಶೆಟ್ಟಿ ಮನೆ, ದೇರಳಕಟ್ಟೆಯ‌ ಯೆನೆಪೊಯ ಆಸ್ಪತ್ರೆ ಹಾಗೂ ಮಾಲಕರ ಮನೆಗೆ ಐಟಿ ದಾಳಿ

Wednesday, February 17th, 2021
incomeTax

ಮಂಗಳೂರು : ಎಜೆ ಆಸ್ಪತ್ರೆಯ ಮಾಲಕ ಎಜೆ ಶೆಟ್ಟಿ ಮನೆಗೆ ಮತ್ತು ದೇರಳಕಟ್ಟೆಯ‌ ಯೆನೆಪೊಯ ಆಸ್ಪತ್ರೆಗೂ ಅದರ ಮಾಲಕರ ಮನೆಗೂ ದಾಳಿ ಮಂಗಳೂರಿನ ಐಟಿ ಅಧಿಕಾರಿಗಳ ಆರು ಪ್ರತ್ಯೇಕ ತಂಡ ಬುಧವಾರ ಮುಂಜಾನೆ ಏಕಕಾಲಕ್ಕೆ ದಾಳಿ ನಡೆಸಿದೆ. ನಗರದ ಎ.ಜೆ. ಅಸ್ಪತ್ರೆ ಮತ್ತು ಯೆನೆಪೊಯ ಆಸ್ಪತ್ರೆಗೆ ಹಾಗೂ ಅದರ ಮಾಲಕರ ಮನೆ ಮತ್ತು‌ ಕಚೇರಿಗಳಿಗೆ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. ಐಟಿ ಅಧಿಕಾರಿಗಳ ತಂಡವು ಎಜೆ ಆಸ್ಪತ್ರೆಯ ಮಾಲಕರ ಮನೆಗೆ ದಾಳಿ ನಡೆಸಿದೆ‌. ಅಲ್ಲದೆ ಮಂಗಳೂರು ಮತ್ತು ದೇರಳಕಟ್ಟೆಯ‌ ಯೆನೆಪೊಯ […]

ಭೀಕರ ಅಪಘಾತ;ಓರ್ವ ಸಾವು,8 ಗಂಭೀರ

Thursday, March 29th, 2018
accident

ಮಂಗಳೂರು: ನಿಂತಿದ್ದ ಟ್ಯಾಂಕರ್‌ಗೆ ಇನ್ನೋವಾ ಕಾರೊಂದು ಢಿಕ್ಕಿಯಾದ ಪರಿಣಾಮ ಚಾಲಕ ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ್ದು, ಕಾರಿನಲ್ಲಿದ್ದ ಇತರ 8 ಮಂದಿ ಗಂಭೀರವಾಗಿ ಗಾಯಗೊಂಡಿರುವ ಭೀಕರ ಅವಘಡ ಗುರುವಾರ ಬೆಳಗ್ಗೆ ನಡೆದಿದೆ. ವರದಿಯಾದಂತೆ ಬೆಳಗಾವಿ ಮೂಲದವರು ಪ್ರಯಾಣಿಸುತ್ತಿದ್ದ ಕಾರು ಅವಘಡಕ್ಕೀಡಾಗಿದ್ದು ಚಾಲಕ ಹನುಮಂತಯ್ಯ ಸಾವನ್ನಪ್ಪಿರುವ ದುರ್ದೈವಿ. 8 ಮಂದಿಯ ಸ್ಥಿತಿ ಚಿಂತಾಜನಕವಾಗಿದ್ದು ಅವರನ್ನು ಎಜೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅಪಘಾತದ ತೀವ್ರತೆಗೆ ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿದೆ. ಮಂಗಳೂರು ಉತ್ತರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

2 ಕಾಲು ಜೋಡಿಸಿ ಮರು ಜೀವ ಕೊಟ್ಟ ಮಂಗಳೂರು ವೈದ್ಯರು!

Saturday, December 16th, 2017
AJ-Hospital

ಮಂಗಳೂರು : ಎರಡೂ ಕಾಲುಗಳು ತುಂಡಾಗಿದ್ದ ಪುಟ್ಟ ಕಂದಮ್ಮನ ಕಾಲುಗಳನ್ನು ಮರು ಜೋಡಿಸುವಲ್ಲಿ ಮಂಗಳೂರಿನ ವೈದ್ಯರು ಯಶಸ್ವಿಯಾಗಿದ್ದಾರೆ. ವಿಶ್ವದ 14 ನೇ ಅತೀ ವಿರಳ ಘಟನೆ ಇದಾಗಿದೆ.2017 ರ ಏಪ್ರಿಲ್ 29 ರಂದು ಕೇರಳದ ಪಯ್ಯನೂರಿನಲ್ಲಿ ನಡೆದ ರೈಲು ಅಫಘಾತದಲ್ಲಿ ಎರಡೂವರೆ ವರ್ಷದ ಮಗು ಮಹಮ್ಮದ್ ಸಾಲೆಯ ಕಾಲುಗಳೆರಡೂ ತುಂಡಾಗಿ ಬೇರ್ಪಟ್ಟಿತ್ತು. ಘಟನೆಯಲ್ಲಿ ಮಗುವಿನ ತಾಯಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದರು. ತನ್ನ ಕಿಡ್ನಿಯನ್ನೇ ನೀಡಿ ತಮ್ಮನ ಪ್ರಾಣಕ್ಕೆ ರಕ್ಷೆಯಾದ ಅಕ್ಕ ರಕ್ತದ ಮಡುವಿನಲ್ಲಿ ಒದ್ದಾಡುತ್ತಿದ್ದ ಮಗುವನ್ನು ರೈಲ್ವೆ ಪೊಲೀಸರು […]

ನಿವೃತ್ತ ಸೈನಿಕನ ಪತ್ನಿ ತನ್ನ ಮಗಳನ್ನು ಬಾವಿಗೆ ಎಸೆದು ತಾನು ಆತ್ಮಹತ್ಯೆ !

Thursday, July 11th, 2013
Bantwal Death

ಬಂಟ್ವಾಳ:  ನಿವೃತ್ತ ಸೈನಿಕ ನವೀನ್ ಚಂದ್ರ ಎಂಬವರ ಪತ್ನಿ ಪ್ರತಿಮಾ(32) ತನ್ನ ಮಗಳು ದಿಯಾ(9) ಜೊತೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಬಂಟ್ವಾಳ ಸಮೀಪದ ಮೆಲ್ಕಾರ್ ಎಂಬಲ್ಲಿ ನಡೆದಿದೆ. ಗುರುವಾರ ಮುಂಜಾನೆ ಈರ್ವರ ಶವ  ಮನೆ ಸಮೀಪದ ಬಾವಿಯಲ್ಲಿ ಪತ್ತೆಯಾಗಿದೆ, ಕೌಟುಂಬಿಕ ವಿರಸದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತದೆಯಾದರೂ, ಸ್ಪಷ್ಟ ಕಾರಣ ಇನ್ನಷ್ಟೇ ತಿಳಿಯಬೇಕಿದೆ. ಮೆಲ್ಕಾರ್ ನಲ್ಲಿ ವಾಸ್ತವ್ಯ ವಿರುವ ಪ್ರತಿಮಾ ಮಂಗಳೂರಿನ ಎಜೆ ಆಸ್ಪತ್ರೆಯಲ್ಲಿ ದಾದಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಮಗಳು ದಿಯಾ ಪಾಣೆಮಂಗಳೂರು […]