ಎರಡು ಐಷಾರಾಮಿ ಕಾರುಗಳು , ಎರಡು ಸ್ಕೂಟರ್‌ಗಳ ಜೊತೆಗೆ 25 ಲಕ್ಷ ರೂ. ಕೊಟ್ಟರು ಗಂಡನನ್ನು ದೂರವಿರಿಸಿದ ಮನೆಯವರು

Wednesday, November 25th, 2020
Ayesha

ಮಂಗಳೂರು : ಫೇಸ್‌ಬುಕ್ ಮೂಲಕ ಪರಿಚಯವಾದ ವ್ಯಕಿಯನ್ನು ಮದುವೆಯಾದ ಮಹಿಳೆಯ ಗಂಡನನ್ನು ಆತನ ಮನೆಯವರು ಎರಡು ವರ್ಷದ ಬಳಿಕ ಆಕೆಗೆ ಸಿಗದಂತೆ ನಿಗೂಢವಾಗಿ ಅಡಗಿಸಿಡಲಾಗಿದೆ ಎಂದು ಆರೋಪಿಸಿದ್ದಾರೆ. ಕೇರಳದ ಕಣ್ಣೂರು ಮೂಲದ ಶಾಂತಿ ಜೂಬಿಗೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ದ ಇಬ್ರಾಹಿಂ ಖಲೀಲ್ ಕಟ್ಟೇಕರ್ ಎಂಬವರು ಫೇಸ್‌ಬುಕ್ ಮೂಲಕ ಪರಿಚಯವಾಗಿ ಜುಲೈ 12, 2017 ಮದುವೆಯಾಗುತ್ತಾರೆ. ಮದುವೆಯಾದ ಬಳಿಕ ಶಾಂತಿ ಜೂಬಿ ಆಯಿಷಾ ಇಬ್ರಾಹಿಂ ಖಲೀಲ್ ಕಟ್ಟೇಕರ್ ಎಂದು ಹೆಸರು ಬದಲಿಸಿಕೊಂಡು ದಂಪತಿಗಳು ಬೆಂಗಳೂರು, ಮೈಸೂರು […]

ಕಂಕನಾಡಿ ನಗರ ಠಾಣಾ ವ್ಯಾಪ್ತಿಯಲ್ಲಿ ಇಬ್ಬರು ಯುವತಿಯರು ನಾಪತ್ತೆ

Tuesday, October 27th, 2020
Lakshmi-Reshma

ಮಂಗಳೂರು : ಕಂಕನಾಡಿ ನಗರ ಠಾಣಾ ವ್ಯಾಪ್ತಿಯಲ್ಲಿ ಕೆಲಸಕ್ಕೆ ಹೋಗುವುದಾಗಿ ಹೇಳಿ ಹೋಗಿದ್ದ ಇಬ್ಬರು ಯುವತಿಯರು ನಾಪತ್ತೆಯಾದ ಬಗ್ಗೆ ದೂರು  ದಾಖಲಾಗಿದೆ. ಕಣ್ಣೂರು ನಿವಾಸಿ ಲಕ್ಷ್ಮೀಬಾಯಿ (19), ಶಕ್ತಿ ನಗರದ ರೇಷ್ಮಾ ಡಿಸೋಜ (38) ನಾಪತ್ತೆಯಾದವರು. ಲಕ್ಷ್ಮೀಬಾಯಿ ಅ.18ರಂದು ಕಣ್ಣೂರು ಗ್ರಾಮದ ಬಾಡಿಗೆ ಮನೆಯಿಂದ ಕೆಲಸಕ್ಕೆಂದು ಹೋದವಳು ಮನೆಗೆ ವಾಪಸಾಗದೆ ಕಾಣೆಯಾಗಿದ್ದಾರೆ. ಲಕ್ಷ್ಮೀಬಾಯಿ ಎತ್ತರ- 5.5 ಅಡಿ, ಎಣ್ಣೆ ಕಪ್ಪು ಮೈ ಬಣ್ಣ, ಸಾಧಾರಣ ಶರೀರ. ಬಿಳಿ ಟಾಪ್, ಕಪ್ಪು ಬಣ್ಣದ ಪ್ಯಾಂಟ್, ಬಿಳಿ ಬಣ್ಣದ ಶಾಲು ಧರಿಸಿರುತ್ತಾಳೆ. […]

ಮಂಜೇಶ್ವರ ನಿವಾಸಿಗಳಿಂದ ಕಣ್ಣೂರು ವಿಮಾನ ನಿಲ್ದಾಣದಲ್ಲಿ 45 ಲಕ್ಷ ರೂ. ವೌಲ್ಯದ ಚಿನ್ನಾಭರಣ ವಶ

Thursday, August 13th, 2020
gold

ಕಾಸರಗೋಡು :  ಕಣ್ಣೂರು ವಿಮಾನ ನಿಲ್ದಾಣದಲ್ಲಿ ವಿದೇಶದಿಂದ ಅಕ್ರಮವಾಗಿ ಚಿನ್ನಾಭರಣ ಸಾಗಾಟ ಮಾಡುತ್ತಿದ್ದ ಆರೋಪದಲ್ಲಿ ಇಬ್ಬರನ್ನು ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ. ಮಂಜೇಶ್ವರ ನಿವಾಸಿಗಳಾದ ಸತ್ತಾರ್ ಮತ್ತು ಸಮೀರ್ ಬಂಧಿತ ಆರೋಪಿಗಳು. ಬಂಧಿತರಿಂದ 45 ಲಕ್ಷ ರೂ. ವೌಲ್ಯದ ಚಿನ್ನಾಭರಣ ವಶಪಡಿಸಿ ಕೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಇವರು ಶಾರ್ಜಾ ಮತ್ತು ದುಬೈಯಿಂದ ಆಗಮಿಸಿದವರೆನ್ನಲಾಗಿದೆ. ಕಣ್ಣೂರು ವಿಮಾನ ನಿಲ್ದಾಣದಲ್ಲಿ ಇತ್ತೀಚಿನ ದಿನಗಳಿಂದ ಅಕ್ರಮ ಚಿನ್ನಾಭರಣ ಸಾಗಾಟ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಕಸ್ಟಮ್ಸ್ ತಪಾಸಣೆ ತೀವ್ರಗೊಳಿಸಲಾಗಿದೆ.

ಟ್ಯಾಂಕರ್ ಮತ್ತು ಸರಕಾರಿ ಬಸ್ ಢಿಕ್ಕಿ: ಇಬ್ಬರಿಗೆ ಗಾಯ

Tuesday, December 4th, 2018
Accident

ಮಂಗಳೂರು: ಕಣ್ಣೂರು ಸಮೀಪದ ಕೊಡಕ್ಕಲ್ ಬಳಿ ಗ್ಯಾಸ್ ಟ್ಯಾಂಕರ್ ಮತ್ತು ಸರಕಾರಿ ಬಸ್ ನಡುವೆ ಅಪಘಾತ ನಡೆದಿದೆ. ಅಪಘಾತದಿಂದ ಇಬ್ಬರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಬಿ.ಸಿ‌.ರೋಡ್ ನಿಂದ ಮಂಗಳೂರಿಗೆ ಬರುತ್ತಿದ್ದ ಗ್ಯಾಸ್ ಟ್ಯಾಂಕರ್ ಹೆದ್ದಾರಿ ಪಕ್ಕ ನಿಂತಿದ್ದ ಶಾಲಾ ವಾಹನ ಹಠಾತ್ ತಿರುಗಿಸಿದ ವೇಳೆ ಟ್ಯಾಂಕರ್ ಚಾಲಕ ಬ್ರೇಕ್ ಹಾಕಿದ್ದು, ಈ ಸಂದರ್ಭ ಧರ್ಮಸ್ಥಳದಿಂದ ಮಂಗಳೂರಿಗೆ ಬರುತ್ತಿದ್ದ ಬಸ್ ಹಿಂಬದಿಯಿಂದ ಟ್ಯಾಂಕರ್ ಗೆ ಢಿಕ್ಕಿ ಹೊಡೆದಿದೆ ಎಂದು ಹೇಳಲಾಗುತ್ತಿದೆ.

ಭೂಕುಸಿತ ಹಿನ್ನೆಲೆ: ಮಂಗಳೂರು-ಬೆಂಗಳೂರು ರೈಲು ರದ್ದು

Saturday, September 1st, 2018
rail-track

ಮಂಗಳೂರು: ಸುಬ್ರಹ್ಮಣ್ಯ ರೋಡ್‌- ಸಕಲೇಶಪುರ ರೈಲು ನಿಲ್ದಾಣ ಮಧ್ಯೆ ಭೂಕುಸಿತ ಹಿನ್ನೆಲೆಯಲ್ಲಿ ರೈಲು ನಂ. 16517/16523 ಕೆಎಸ್‌ಆರ್‌ ಬೆಂಗಳೂರು- ಕಣ್ಣೂರು /ಕಾರವಾರ ಎಕ್ಸ್‌ಪ್ರೆಸ್‌ನ ಸಂಚಾರವನ್ನು ಸೆ. 2ರಿಂದ ಸೆ. 4ರ ವರೆಗೆ ಮತ್ತು ಸೆ. 9ರಿಂದ ಸೆ. 11 ರ ವರೆಗೆ ರದ್ದುಪಡಿಸಲಾಗಿದೆ. ರೈಲು ನಂ. 16511/16513 ಕೆಎಸ್‌ಆರ್‌ ಬೆಂಗಳೂರು- ಕಣ್ಣೂರು / ಕಾರವಾರ ಎಕ್ಸ್‌ಪ್ರೆಸ್‌ನ ಸಂಚಾರವನ್ನು ಸೆ. 1ರಿಂದ ಸೆ. 8ರ ವರೆಗೆ ಹಾಗೂ ಸೆ. 12 , ಸೆ.13 ಹಾಗೂ ಸೆ. 14ರಂದು ರದ್ದುಗೊಳಿಸಲಾಗಿದೆ. […]

ಕಣ್ಣೂರಿನಲ್ಲಿ ನಿಂತಿದ್ದ ಕಾರಿಗೆ ಇನ್ನೊಂದು ಕಾರು ಡಿಕ್ಕಿ ಓರ್ವ ಸಾವು, ನಾಲ್ವರು ಗಂಭೀರ

Wednesday, June 27th, 2018
Kannaur Accident

ಮಂಗಳೂರು:  ‌ಕಣ್ಣೂರಿನಲ್ಲಿ ಬುಧವಾರ  ಮುಂಜಾನೆ ನಡೆದ ಸರಣಿ‌ ಅಪಘಾತದಲ್ಲಿ ಓರ್ವ ಮೃತಪಟ್ಟು, ನಾಲ್ವರು ಗಾಯಗೊಂಡ ಘಟನೆ ನಡೆದಿದೆ. ಬಿಸಿ ರೋಡ್ ಕಡೆಯಿಂದ ಮಂಗಳೂರಿಗೆ ಬರುತ್ತಿದ್ದ ನೋಂದಾವಣೆಯಾಗದ ಹೊಸ ಪೋಲೊ ಕಾರು. ಅಲ್ಲೇ ನಿಂತಿದ್ದ ಬಿಎಂಡಬ್ಲ್ಯೂ ಕಾರಿಗೆ ಡಿಕ್ಕಿ ಹೊಡೆದು ಒಬ್ಬ ಮೃತರಾಗಿದ್ದಾರೆ. ಇದು ಕಣ್ಣೂರು ಮಸೀದಿ ಮುಂಭಾಗದಲ್ಲಿ ನಡೆದಿದ್ದು ಎರಡು ಕಾರು, ಬೈಕ್ , ರಿಕ್ಷಾ ಒಂದಕ್ಕೊಂದು ಬಡಿದುಕೊಂಡು ಈ ಘಟನೆ ನಡೆದಿದೆ. ಘಟನೆಯಲ್ಲಿ ಕಾರು ಚಾಲಕ ಫಾರುಕ್ (26) ಎಂಬವರು ಮೃತಪಟ್ಟಿದ್ದು, ಜುನೈದ್, ಸರ್ಫಾರಾಜ್ ಹಾಗು ಪೋಲೊ ಕಾರಿನಲ್ಲಿದ್ದ ಇಬ್ಬರಿಗೆ […]