ಉಡುಪಿ ಬೈಲಕೆರೆಯ ಬಳಿ ನಿಲ್ಲಿಸಿದ್ದ ಸ್ಕೂಟರ್ ಕಳವು ಮಾಡಿದ ಚಾಲಾಕಿ ಕಳ್ಳ

Monday, January 31st, 2022
Scooter-Thief

ಉಡುಪಿ : ಉಡುಪಿ ಬೈಲಕೆರೆಯ ಸಾಯಿರಾಧ ಗೋಕುಲ್ ಧಾಮ್ ವಸತಿ ಸಮುಚ್ಚಯದ ಬಳಿ ಕಳ್ಳನೊಬ್ಬ ಪಾರ್ಸೆಲ್ ವಸ್ತುವಿನೊಂದಿಗೆ ಸ್ಕೂಟರ್ ಅನ್ನು ಕಳವು ಮಾಡಿರುವ ಘಟನೆ ಸೋಮವಾರ ನಡೆದಿದೆ. ಸ್ಕೂಟರ್ ಕಳ್ಳತನ ಮಾಡಿರುವ ವ್ಯಕ್ತಿಯನ್ನು ಸಾಲಿಗ್ರಾಮ ಸಾಸ್ತಾನ ವ್ಯಾಪ್ತಿಯ ಯುವಕ ಸ್ಕೂಟರ್ ಸಂಖ್ಯೆ KA20 EV6577 ನ್ನು ಈತ ಕಳವು ಮಾಡಿದ್ದಾನೆ. ಬೈಕ್ ಮಾಲೀಕರು ಬೈಲಕೆರೆಯ ಸಾಯಿರಾಧ ಗೋಕುಲ್ ಧಾಮ್ ಬಳಿ ಹೋಂಡಾ ಡಿಯೋ‌ ಸ್ಕೂಟರ್ ಅನ್ನು ನಿಲ್ಲಿಸಿ ಕರ್ಮಷಿಯಲ್ ಪಾರ್ಸೆಲ್ ಕೊಡಲು ಹೋಗಿದ್ದರು. ಈ ವೇಳೆ ಅದೇ ದಾರಿಯಲ್ಲಿ ಬಂದ […]

ದನವನ್ನು ಕಳವು ಮಾಡಿ ಮನೆಗೆ ತಂದು ಕಡಿದು 164 ಕೆ.ಜಿ. ಮಾಂಸ ಮಾಡಿದ ದನ ಕಳ್ಳರು

Saturday, April 10th, 2021
cow thieves

ಮಂಗಳೂರು  : ದನವನ್ನು ಕಳವು ಮಾಡಿ ತಂದು ಅಕ್ರಮವಾಗಿ ಕಡಿದು ಮಾಂಸಮಾಡಿದ ಘಟನೆ  ಅಡ್ಡೂರು ಸಮೀಪ ಮನೆಯೊಂದರಲ್ಲಿ ಶುಕ್ರವಾರ ಬೆಳಿಗ್ಗೆ ನಡೆದಿದೆ. ಅಡ್ಡೂರು ಪಾಂಡೇಲು ಗದ್ದೆ ಮನೆಯ ಮೊಹಮ್ಮದ್ ಎಂಬವರ ಮಗ  ಅಬ್ದುಲ್ ಮಜೀದ್ ಕಕ್ಕೆ, ಪ್ರಾಯ:35 ವರ್ಷ ಮತ್ತು  ಪಿ. ಮುಸ್ತಾಪ, ಪ್ರಾಯ: 30 ವರ್ಷ, ಈ ಇಬ್ಬರು ದನವನ್ನು ಕದ್ದು ತಂದು  ಕಡಿದು 164 ಕೆ.ಜಿ. ಮಾಂಸ ಮಾಡಿದ್ದರು. ಖಚಿತ ಮಾಹಿತಿ ತಿಳಿದ  ಬಜಪೆ ಠಾಣಾ ಪಿಎಸ್ಐ ಪೂವಪ್ಪ ರವರ ನೇತ್ರತ್ವದಲ್ಲಿ ಸಿಬ್ಬಂದಿಗಳೊಂದಿಗೆ ದಾಳಿ ನಡೆಸಿದ್ದು, 2 ಜನ ಆರೋಪಿ ಸಮೇತ ಮಾರಾಟ ಮಾಡಲು ತಯಾರು […]

ದೇವಸ್ಥಾನದಿಂದ ಕಾಣಿಕೆ ಡಬ್ಬಿ ಕಳವು ವಿಶ್ವ ಹಿಂದೂ ಪರಿಷತ್​ನ ಪ್ರಖಂಡ ಸಂಚಾಲಕ ಬಂಧನ

Monday, March 8th, 2021
Mohan

ಮಂಗಳೂರು : ದೇವಸ್ಥಾನದಿಂದ ಕಾಣಿಕೆ ಡಬ್ಬಿ ಹಾಗೂ ಮೊಂಟೆಪದವು ಬಳಿಯ ಮನೆಯೊಂದರಿಂದ ಬೈಕ್ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶ್ವ ಹಿಂದೂ ಪರಿಷತ್ನ ಉಳ್ಳಾಲ ಗ್ರಾಮಾಂತರ ಪ್ರಖಂಡದ ಸಂಚಾಲಕ ಮೊಂಟೆಪದವು ನಿವಾಸಿ ತಾರನಾಥ್ ಮೋಹನ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಈತ ಮಂಜನಾಡಿ ದೇವಸ್ಥಾನದಿಂದ ಕಾಣಿಕೆ ಡಬ್ಬಿ ಹಾಗೂ ಮೊಂಟೆಪದವು ಬಳಿಯ ಮನೆಯೊಂದರಿಂದ ಬೈಕ್ ಕಳವು ಮಾಡಿದ್ದ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದವು. ಈ ಹಿನ್ನೆಲೆ ಸಾರ್ವಜನಿಕರು ಆತನನ್ನು ಹಿಡಿದು ಹತ್ತಿರದ ಕೊಣಾಜೆ ಪೊಲೀಸರಿಗೆ ಒಪ್ಪಿಸಿದ್ದಾರೆ.

ಜಿಲ್ಲೆಯ ಹಲವೆಡೆ ಪೆಟ್ರೋಲ್ ಬಂಕ್ ಕಳವು​​​​ ಮಾಡುತ್ತಿದ್ದ ಮೂವರ ಬಂಧನ

Saturday, October 3rd, 2020
Petrol Pump Robers

ಮಂಗಳೂರು : ಪಂಪ್ ವೆಲ್ ಉಜ್ಜೋಡಿಯಲ್ಲಿರುವ ಪೆಟ್ರೋಲ್ ಬಂಕ್ ಕಳವು ಸೇರಿದಂತೆ ವಿವಿಧ ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಮೂವರನ್ನು ಕಂಕನಾಡಿ ಠಾಣಾ ಪೊಲೀಸರು ಬಂಧಿಸಿದ್ದಾರೆ. ಮಂಗಳೂರಿನ ಕೆ. ಸಿ. ರೋಡ್ನ ಮುಹಮ್ಮದ್ ಸುಹೈಲ್ ಯಾನೆ ಅಶ್ರಫ್ (19), ಆಶಿಕ್ (19) ಮತ್ತು ಮಂಗಳೂರಿನ ಫಳ್ನೀರ್ನ ಮುಹಮ್ಮದ್ ಅರ್ಫಾನ್ (20) ಬಂಧಿತ ಆರೋಪಿಗಳು. ಬಂಧಿತರಿಂದ ನಗದು, ಮಾರಕಾಯುಧ, ಹೆಲ್ಮೆಟ್ ಮತ್ತು ಬೈಕ್ ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ಸೆ.20ರ ರಾತ್ರಿ ಪಂಪ್ ವೆಲ್ ಉಜ್ಜೋಡಿಯಲ್ಲಿರುವ ಪೆಟ್ರೋಲ್ ಬಂಕ್ನಲ್ಲಿ ಕಳವು ನಡೆಸಿದ್ದರು‌. ಈ […]

ಮಹಿಳೆಯ ಚಿನ್ನದ ಸರ ಎಗರಿಸಿದ ಪ್ರಕರಣ, ಓರ್ವ ಮಹಿಳೆ ಸಹಿತ ನಾಲ್ವರು ಆರೋಪಿಗಳ ಬಂಧನ

Thursday, September 24th, 2020
Vitla Accuced

ಬಂಟ್ವಾಳ: ಮಹಿಳೆಯ ಚಿನ್ನದ ಸರ ಎಗರಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಮಹಿಳೆ ಸಹಿತ ಒಟ್ಟು ನಾಲ್ವರು ಆರೋಪಿಗಳನ್ನು ವಿಟ್ಲ ಎಸ್ಐ ವಿನೋದ್ ಕುಮಾರ್ ರೆಡ್ಡಿ ನೇತೃತ್ವದ ತಂಡ ಬಂಧಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪುತ್ತೂರು ತಾಲೂಕಿನ ಸವಣೂರು ನಿವಾಸಿಗಳಾದ ಮಹಮ್ಮದ್ ಶಾಕೀರ್ (23), ಮಹಮ್ಮದ್ ಇಕ್ಬಾಲ್ (24), ಕೆ.ಎ. ಮಹಮ್ಮದ್ ಯಾನೆ ಐಟಿ ಮಮ್ಮು (41) ಆರೋಪಿಗಳಿಗೆ ಸಹಕರಿಸಿದ ತಿಂಗಳಾಡಿ ನಿವಾಸಿ ಹಾಜೀರಾ (44)  ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. ಕುಂಬ್ರದ ಬ್ಯಾಂಕ್ ನಲ್ಲಿ ಅಡವಿಟ್ಟ ಕಳವು ಮಾಡಿದ ಚಿನ್ನ, ಆಕ್ಟೀವ್ […]

ಸ್ಟುಡಿಯೋ ಮಾಲಕರು ಜಾಗ್ರತೆ ವಹಿಸಬೇಕು : ನಂದ ಕುಮಾರ್

Wednesday, July 2nd, 2014
Studio owners

ಬಂಟ್ವಾಳ: ಇತ್ತೀಚಿನ ಕೆಲ ದಿನಗಳಿಂದ ಜಿಲ್ಲೆಯಲ್ಲಿ ಸ್ಟುಡಿಯೋಗಳಿಂದ ಬೆಲೆ ಬಾಳುವ ವಸ್ತುಗಳು ಕಳವು ನಡೆಯುತ್ತಿರುವ ಬಗ್ಗೆ ಸ್ಟುಡಿಯೋ ಮಾಲಕರು ಜಾಗ್ರತೆ ವಹಿಸಬೇಕು ಎಂದು ನಗರ ಠಾಣಾ ಉಪನಿರೀಕ್ಷಕ ನಂದ ಕುಮಾರ್ ಹೇಳಿದರು. ಅವರು ನಗರ ಠಾಣೆಯಲ್ಲಿ ಸ್ಟುಡಿಯೋ ಮಾಲಕರ ಜೋತೆ ಸಮಾಲೋಚನೆ ಸಭೆ ನಡೆಸಿ ಮುಂಜಾಗ್ರತೆಯ ಬಗ್ಗೆ ತಿಳಿಸಿದರು. ಸ್ಟುಡಿಯೋಗಳಿಗೆ ಕಾವಲುಗಾರರನ್ನು ನೇಮಿಸಬೇಕು, ಬಾಗಿಲು ಕಿಟಕಿ ಮತ್ತು ಛಾವಣಿಗಳನ್ನು ಭದ್ರಗೋಳಿಸಿ, ಅಂಗಡಿಗಳ ಒಳಗೆ ಮುನ್ಸೂಚನೆ ನೀಡುವ ಎಚ್ಚರಿಕೆ ಗಂಟೆಯನ್ನು ಅಳವಡಿಸಿ ಮತ್ತು ಸಿ,ಸಿ ಕ್ಯಾಮಾರಗಳನ್ನು ಅಳವಡಿಸಿ ಎಂದು […]