ಮಂಗಳೂರು : ಕೇರಳ ಮೂಲದ ಉದ್ಯಮಿಯನ್ನು ಮನೆಯಲ್ಲೇ ಕೊಲೆಗೈದ ದುಷ್ಕರ್ಮಿಗಳು

Tuesday, November 3rd, 2020
Murder

ಮಂಗಳೂರು : ಕೇರಳ ಮೂಲದ ಉದ್ಯಮಿಯೊಬ್ಬರನ್ನು ದುಷ್ಕರ್ಮಿಗಳು ಚೂರಿಯಿಂದ ಹಾಡಹಗಲೇ ಇರಿದು ಹತ್ಯೆ ಮಾಡಿದ ಘಟನೆ ನಗರದ ಕಾವೂರಿನಲ್ಲಿ ಮಂಗಳವಾರ ನಡೆದಿದೆ. ಕಾವೂರು ಮಲ್ಲಿ ಲೇಔಟ್ ನಿವಾಸಿ ಸುರೇಂದ್ರನ್ (60) ಕೊಲೆಯಾದ ವ್ಯಕ್ತಿ ಎಂದು ತಿಳಿದುಬಂದಿದೆ. ಮೂಲತಃ ಕೇರಳದವರಾದ ಸುರೇಂದ್ರನ್ ಅವರು ಹಲವು ವರ್ಷಗಳಿಂದ ಕಾವೂರು ಮಲ್ಲಿ ಲೇಔಟ್‌ನಲ್ಲೇ ಸ್ವಂತ ಮನೆ ಮಾಡಿ ತನ್ನ ಪತ್ನಿ ಜತೆ ವಾಸಿಸುತ್ತಿದ್ದರು. ಮಂಗಳವಾರ ಸುರೇಂದ್ರನ್ ನಗರಕ್ಕೆ ಹೋಗಿದ್ದರೆ, ಅವರ ಪತ್ನಿ ಫಾರ್ಮ್ ಉದ್ಯಮ ವ್ಯವಹಾರ ನೋಡಿಕೊಳ್ಳಲು ತೆರಳಿದ್ದರು. ಮಧ್ಯಾಹ್ನ 1 […]

ಕಾವೂರು ಶ್ರೀ ಮಹಾಲಿಂಗೇಶ್ವರ ದೇವಳದಲ್ಲಿ ಮನಮೋಹಕ‌ ಆಕಾಶ ಬುಟ್ಟಿಗಳ ಸ್ಪರ್ಧೆ

Tuesday, November 6th, 2018
deepavali

ಮಂಗಳೂರು: ನಗರದ ಕಾವೂರು ಶ್ರೀ ಮಹಾಲಿಂಗೇಶ್ವರ ದೇವಳದಲ್ಲಿ ಮನಮೋಹಕ‌ ಆಕಾಶ ಬುಟ್ಟಿಗಳ ಸ್ಪರ್ಧೆ ನಡೆಯಿತು. ವಿವಿಧ ಪ್ರಕಾರದ ಆಕಾಶ ಬುಟ್ಟಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ಸೆಗಣಿ, ವ್ಯಾಲ್ವೇಟ್, ರಬ್ಬರ್ ಬ್ಯಾಂಡ್, ಶಂಖ, ಧಾನ್ಯಗಳು, ಭತ್ತ, ಹುಣಸೆ ಬೀಜ, ಕಡಲೆಕಾಳು, ಕ್ಯಾಸೇಟ್ ರೀಲ್, ಕ್ರೇಯಾನ್ಸ್, ಬಿದಿರಿನ ಕೋಲು, ನ್ಯೂಸ್ ಪೇಪರ್ ಹೀಗೆ ವಿವಿಧ ಪ್ರಕಾರದ ವಸ್ತುಗಳಿಂದ ತಯಾರಿಸಿದ ಆಕಾಶ ಬುಟ್ಟಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ಸಾಂಪ್ರದಾಯಿಕ, ಆಧುನಿಕ ಹಾಗೂ ಪ್ರತಿಕೃತಿ ವಿಭಾಗ ಹೀಗೆ ಮೂರು ಮೂರು ವಿಭಾಗಗಳಲ್ಲಿ ಸ್ಪರ್ಧೆ ನಡೆಯಿತು. ಸುಮಾರು […]

ಮನೆಯೊಂದರಲ್ಲಿ ವೇಶ್ಯಾವಾಟಿಕೆ..ಇಬ್ಬರ ಸೆರೆ!

Friday, July 13th, 2018
mangaluru

ಮಂಗಳೂರು: ನಗರದ ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯ ಕೊಟ್ಟಾರ ಚೌಕಿ ಬಳಿಯ ಮನೆಯೊಂದರಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಮಹಿಳಾ ಪಿಂಪ್ ಸಹಿತ ಇಬ್ಬರನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಉಡುಪಿ ಪಡುಬಿದ್ರೆಯ ಮುದರಂಗಡಿ ಮನೆ ನಿವಾಸಿ ಸಜಿತ್ ಶೇಖರ್ (30) ಹಾಗೂ ಮಹಿಳಾ ಪಿಂಪ್ ಒಬ್ಬಾಕೆಯನ್ನು ಬಂಧಿಸಲಾಗಿದ್ದು, ಬಂಧಿತರಿಂದ 5 ಮೊಬೈಲ್ ಫೋನ್ಗಳ ಸಹಿತ 15,240 ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಆರೋಪಿ ಸಜಿತ್ ಶೇಖರ್ ಈ ಮನೆಯನ್ನು ಬಾಡಿಗೆಗೆ ಪಡೆದು ಮಹಿಳಾ ಪಿಂಪ್ ಜೊತೆ ಯುವತಿಯರನ್ನು ಈ ಮನೆಯಲ್ಲಿ […]

ಕಾವೂರು ಸಿಗಡಿ ಹೊಂಡಕ್ಕೆ ಬಿದ್ದು ಕಾರ್ಮಿಕನ ಸಾವು

Saturday, June 16th, 2018
Prowns pond

ಮಂಗಳೂರು : ಸಿಗಡಿ ಕೃಷಿ ಹೊಂಡಕ್ಕೆ ಬಿದ್ದು ಉತ್ತರ ಕರ್ನಾಟಕ ಮೂಲದ ಕಾರ್ಮಿಕನೊಬ್ಬ ಸಾವನ್ನಪ್ಪಿದ ಘಟನೆ ಮಂಗಳೂರಿನ ಕಾವೂರು ಬಳಿಯ ಭಟ್ಟಕುದ್ರು ಎಂಬಲ್ಲಿ ನಡೆದಿದೆ. ಬಾಗಲಕೋಟೆ ಜಿಲ್ಲೆ ಬಾದಾಮಿ ಮೂಲದ ಮುತ್ತ(21) ಸಾವನ್ನಪ್ಪಿದ ಕಾರ್ಮಿಕ. ಮಂಗಳೂರು ಮಹಾನಗರ ಪಾಲಿಕೆ ಸದಸ್ಯ ದೀಪಕ್ ಪೂಜಾರಿ ತಮ್ಮನಿಗೆ ಸೇರಿದ ಕೃಷಿ ಹೊಂಡಕ್ಕೆ ಬಿದ್ದು ಅವರು ಸಾವನ್ನಪ್ಪಿದ್ದಾರೆ. ಪಾಲ್ಗುಣಿ ನದಿ ಮಧ್ಯದ ಕುದ್ರುವಿನಲ್ಲಿ ಸಿಗಡಿ ಕೃಷಿ ನಡೆಯುತ್ತಿತ್ತು. ಮಂಗಳೂರಿನ ಕಾವೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೂಲಿ ಅರಸಿ ವಲಸೆ ಹೋದ ಅಪ್ಪ-ಅಮ್ಮ …ಸಿಡಿಲಿಗೆ ಬಲಿಯಾಯ್ತು ಕಂದಮ್ಮ!

Tuesday, May 29th, 2018
child

ಮಂಗಳೂರು: ಭಾನುವಾರ ರಾತ್ರಿ ಸುರಿದ ಭಾರಿ ಮಳೆಯ ವೇಳೆ ಮಂಗಳೂರಿನ ದೇರೇಬೈಲ್ ಸಮೀಪದ ಬೋರುಗುಡ್ಡೆ ಎಂಬಲ್ಲಿ ಸಿಡಿಲು ಬಡಿದು ಎರಡೂವರೆ ವರ್ಷದ ಮಗುವೊಂದು ಸಾವನ್ನಪ್ಪಿದೆ. ಮೂಲತಃ ಉತ್ತರ ಕರ್ನಾಟಕದವರಾದ ಮಗವಿನ ಅಪ್ಪ -ಅಮ್ಮ ಮಂಗಳೂರಿನಲ್ಲಿ ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ. ಹನುಮಂತ ಕೆ. ಎಂಬುವರ ಎರಡೂವರೆ ವರ್ಷದ ಗಂಡು ಮಗು ಮುತ್ತು ಸಿಡಿಲಿಗೆ ಬಲಿಯಾಗಿದೆ. ಬೋರುಗುಡ್ಡೆಯ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಹನುಮಂತ ಕುಟುಂಬ ಇದೀಗ ಮಗುವನ್ನು ಕಳೆದುಕೊಂಡು ಶೋಕಸಾಗರದಲ್ಲಿ ಮುಳುಗಿದೆ. ಭಾನುವಾರ ರಾತ್ರಿ ಸುಮಾರು 7.30ರ ಸುಮಾರಿಗೆ […]

ದಶಕಗಳಿಂದ ಪಾಳುಬಿದ್ದಿದ್ದ ಕಾವೂರು ಕೆರೆ ಪುನಃಶ್ಚೇತನ

Thursday, March 22nd, 2018
kavoor

ಮಂಗಳೂರು: ಪಾಳು ಬಿದ್ದಿರುವ ಕೆರೆಗಳ ಪುನಃಶ್ಚೇತನಕ್ಕೆ ಮುಂದಾಗುವುದು ಬಹಳ ಅಪರೂಪ. ಈ ಕಾರಣದಿಂದಲೇ ಪಾಳು ಬಿದ್ದಿದ್ದ ಎಷ್ಟೋ ಕೆರೆಗಳು ಈಗ ಕಣ್ಮರೆಯಾಗಿವೆ. ಹೀಗಿರುವಾಗ, ಹಲವು ದಶಕಗಳಿಂದ ಪಾಳು ಬಿದ್ದಿರುವ ಕಾವೂರಿನಲ್ಲಿರುವ ಬೃಹತ್‌ ಕರೆಯೊಂದನ್ನು ಪುನಃಶ್ಚೇತನಗೊಳಿಸಿ ಅಂತರ್ಜಲ ಮಟ್ಟ ವೃದ್ಧಿಸಲು ಸ್ಥಳೀಯರೇ ಮುಂದಾಗಿದ್ದಾರೆ. ಕಾವೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬಳಿ ಇರುವ ಬೃಹದಾಕಾರದ ಕೆರೆಯ ಪುನಃ ಶ್ಚೇತನದ ದೃಷ್ಟಿಯಿಂದ ಯೋಜನೆಯೊಂದು ಸಿದ್ಧಗೊಳ್ಳುತ್ತಿದ್ದು, ಮೊದಲ ಹಂತವಾಗಿ ಮಾ. 25ರಂದು ಬೆಳಗ್ಗೆ 6.30ರಿಂದ ಸುಮಾರು 100 ಮಂದಿ ಸ್ವಯಂ ಸೇವಕರು ಶ್ರಮದಾನ […]

ಶಿವಸೇನಾ ಪ್ರಮುಖ ದಿ.ಬಾಳ ಠಾಕ್ರೆ ಸೊಸೆ ಜತೆಗಿದ್ದ ಮಹಿಳೆ ಮೇಲೆ ಖಾಸಗಿ ಕಾರ್‌ ಚಾಲಕನಿಂದ ಹಲ್ಲೆ

Wednesday, March 14th, 2018
smitha-takrey

ಮಂಗಳೂರು: ಶಿವಸೇನಾ ಪ್ರಮುಖ ದಿ. ಬಾಳ ಠಾಕ್ರೆ ಸೊಸೆ ಜತೆಗಿದ್ದ ಮಹಿಳೆ ಮೇಲೆ ಖಾಸಗಿ ಕಾರ್‌ ಚಾಲಕನಿಂದ ಹಲ್ಲೆ ನಡೆದಿರುವ ಘಟನೆ ಕಾವೂರು ಪೊಲೀಸ್ ಠಾಣೆ ವ್ಯಾಪ್ತಿಯ ಮರಕಡ ಎಂಬಲ್ಲಿ ನಡೆದಿದೆ. ಸ್ಮಿತಾ ಠಾಕ್ರೆ ಜತೆಯಲ್ಲಿದ್ದ ಶರೀನ್ ಎಂಬ ಮಹಿಳೆ ಮೇಲೆ ಖಾಸಗಿ ಕಾರು ಚಾಲಕ ದಯಾನಂದ ಎಂಬಾತ ಹಲ್ಲೆ ನಡೆಸಿದ್ದಾನೆ. ಬೆಳ್ತಂಗಡಿಯಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿರುವಾಗ ವಾಹನ ಚಾಲನೆ‌ ಮಾಡುವ ಸಮಯದಲ್ಲಿ ಚಾಲಕ ಮೊಬೈಲ್ ಬಳಸಿದ್ದಾನೆ. ಮೊಬೈಲ್‌ ಬಳಕೆಗೆ ಸಂಬಂಧಿಸಿದಂತೆ ಇಬ್ಬರ ಮಧ್ಯೆ ವಾಗ್ವಾದ […]

ಕಾವೂರು ಮೂಲಭೂತ ಸೌಕರ್ಯ ಒತ್ತಾಯಿಸಿ ತುಳುನಾಡ ರಕ್ಷಣಾ ವೇದಿಕೆ ಪ್ರತಿಭಟನೆ

Saturday, March 14th, 2015
yogish shetty

ಮಂಗಳೂರು : ಕುಂಜತ್ತಬೈಲು ಗ್ರಾಮದ ಕಾವೂರು ಶ್ರೀ ವೈದ್ಯನಾಥ ದೇವಸ್ಥಾನದಿಂದ ತೋಡಲ ಗುಡ್ಡೆ ಮಲ್ಲಿ ಲೇಔಟ್ ವರೆಗೆ ಸುಮಾರು 600 ಮನೆಗಳಿದ್ದು , ಅಲ್ಲದೆ ಆದಿಚುಂಚನಗಿರಿ ಶಾಲೆ ಹಾಗೂ ಮಠ ಕಾಲೇಜು ಮತ್ತು ವಿದ್ಯಾರ್ಥಿ ನಿಲಯಗಳೆಂದು ಇಲ್ಲಿ ಸುಮಾರು 750 ಮಂದಿ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದು, ಇಲ್ಲಿ ಉಪಯೋಗಿಸುವ ನೀರನ್ನು ರಸ್ತೆಗೆ ಬಿಡುತ್ತಿದ್ದು ಹಾಗೂ ತೆರೆದ ಚರಂಡಿಯಲ್ಲಿ ಶೌಚಾಲಯ ಹಾಗೂ ಇತರ ಕೊಳಚೆ ನೀರು ಹರಿಯುತ್ತಿದ್ದು, ರಸ್ತೆಯಲ್ಲಿ ಪ್ರಯಾಣಿಸಬೇಕಾದರೆ ವಾಸನೆಯಿಂದಾಗಿ ಮೂಗು ಹಿಡಿದು ಹೋಗಬೇಕಾಗುತ್ತದೆ. ಈ ಪರಿಸ್ಥಿತಿಯು […]

ತಂದೆಯ ಅನಾರೋಗ್ಯದಿಂದ ನೊಂದ ಪುತ್ರಿ ಆತ್ಮಹತ್ಯೆ, ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲು

Monday, May 20th, 2013
Willetha Lima Lobo

ಮಂಗಳೂರು : ನಗರದ ಕಾವೂರು ಬಳಿಯ ಬೊಲ್ಪುಗುಡ್ಡೆ ನಿವಾಸಿ ವಿಲೆಟ ಲಿಮಾ ಲೋಬೊ(26) ಎಂಬಾಕೆ ತನ್ನ ತಂದೆಯ ಅನಾರೋಗ್ಯದಿಂದ ತೀವ್ರವಾಗಿ ನೊಂದು ತನ್ನ ಸ್ವ ಗೃಹದಲ್ಲಿ ನೇಣು ಬಿಗಿದು  ಆತ್ಮಹತ್ಯೆ ಮಾಡಿಕೊಂಡ ಘಟನೆ ಭಾನುವಾರ ನಡೆದಿದೆ. ವಿಲೆಟ ರ ತಂದೆ ವಾಲ್ಟರ್ ಲೋಬೊ ವಾರದ ಹಿಂದೆ ಮಲೇರಿಯಾಕ್ಕೆ ತುತ್ತಾಗಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆಸ್ಪತ್ರೆಯಿಂದ ಭಾನುವಾರ ಬೆಳಗ್ಗೆ ವಾಲ್ಟರ್ ಲೋಬೊ ರಿಗೆ ರಕ್ತದ  ಅವಶ್ಯಕತೆ ಇದೆ ಎಂದು ಕರೆ ಬಂದ ಹಿನ್ನಲೆಯಲ್ಲಿ ಆಸ್ಪತ್ರೆಗೆ ತೆರಳಿದ ವಾಲ್ಟರ್ ಲೋಬೊ […]