ಮುಂಬೈ : ಗಣೇಶ ವಿಸರ್ಜನೆ ಸಂದರ್ಭದಲ್ಲಿ 17ಕ್ಕೂ ಹೆಚ್ಚು ಜನರು ನೀರಿನಲ್ಲಿ ಮುಳುಗಿ ಸಾವು

Friday, September 13th, 2019
ganesha

ಮುಂಬೈ : ಗಣೇಶ ಚತುರ್ಥಿಯ ಹಿನ್ನೆಲೆಯಲ್ಲಿ ಕೊನೆಯ ದಿನ ನಡೆದ ಗಣೇಶ ವಿಗ್ರಹಗಳ ವಿಸರ್ಜನೆ ಸಂದರ್ಭದಲ್ಲಿ 17ಕ್ಕೂ ಹೆಚ್ಚು ಜನರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಅಲ್ಲದೇ ವಿವಿಧ ಜಿಲ್ಲೆಗಳಲ್ಲಿ ಐವರು ನೀರಿನಲ್ಲಿ ಮುಳುಗಿ ನಾಪತ್ತೆಯಾಗಿರುವುದಾಗಿ ವರದಿ ತಿಳಿಸಿದೆ. ಬಿಗಿ ಬಂದೋಬಸ್ತ್ ನಲ್ಲಿ ಗುರುವಾರ ನಡೆದ ಗಣಪತಿ ವಿಸರ್ಜನೆ ಮೆರವಣಿಗೆಯಲ್ಲಿ ಭಾರೀ ಪ್ರಮಾಣದಲ್ಲಿ ಜನ ಪಾಲ್ಗೊಂಡಿದ್ದರು. ಹತ್ತು ದಿನಗಳ ಕಾಲ ನಡೆದ ಗಣೇಶ ಹಬ್ಬದ ಕೊನೆಯ ದಿನವಾದ ಗುರುವಾರ ಗಣೇಶ ವಿಗ್ರಹಗಳ ವಿಸರ್ಜನೆ ನಡೆದಿತ್ತು. […]

ಮಂಗಳೂರಿನಲ್ಲಿ ನಾನಾ ಆಕಾರದ ಗಣೇಶ ವಿಗ್ರಹಗಳ ಭರದಿಂದ ತಯಾರಿ

Friday, September 6th, 2013
ಮಂಗಳೂರಿನಲ್ಲಿ ನಾನಾ ಆಕಾರದ ಗಣೇಶ ವಿಗ್ರಹಗಳ ಭರದಿಂದ ತಯಾರಿ

ಮಂಗಳೂರು : ಭಾದ್ರಪದ ಮಾಸದ ಶುಕ್ಲ ಪಕ್ಷದ ಚೌತಿಯಂದು ಗಣೇಶ ಆರಾಧನೆ ದೇಶದ ಮೂಲೆ ಮೂಲೆಗಳಲ್ಲಿ ನಡೆಯುತ್ತದೆ. ಶಿವ ಪಾರ್ವತಿಯರ ಪುತ್ರ ಗಣೇಶನ ಆಕಾರವು ವಿಚಿತ್ರ ಮತ್ತು ವಿಶೇಷವಾದದು. ಆನೆ ಮುಖದ ದೊಡ್ಡ ಕಿವಿಯ, ಡೊಳ್ಳು ಹೊಟ್ಟೆಯ ಈತ ದೇವತೆಗಳಿಗೂ ಮಾನವ ಕುಲಕ್ಕೂ ಪ್ರಥಮ ಪೂಜಿತ. ಶಿವ ಪುರಾಣದ ಪ್ರಕಾರ ಪಾರ್ವತಿಯು ತನ್ನ ಮೈ ಮೇಲಿನ ಮಣ್ಣಿನ ಕೊಳೆಯನ್ನು ಮೂರ್ತಿಯನ್ನಾಗಿಸಿ ಅದಕ್ಕೆ ಜೀವ ನೀಡಿದ್ದಳು ಎಂದು ಹೇಳಲಾಗುತ್ತದೆ. ಜೀವ ಪಡೆದ ಆ ಪಾರ್ವತಿಯ ಪುತ್ರನನ್ನು ತಾನು ಸ್ನಾನಕ್ಕೆ […]