ಹೆರಿಗೆಯಾಗಿ 24ನೇ ದಿನಕ್ಕೇ ಮಹಾಮಾರಿ ಕರೊನಾಗೆ ಮಹಿಳೆ ಬಲಿ

Saturday, June 5th, 2021
nirmala

ಕೊಪ್ಪಳ: ತಾಲೂ ಕಿನ  ಗುಳದಳ್ಳಿ ಗ್ರಾಮದ ಮಹಿಳೆಯೊಬ್ಬರು ಹೆರಿಗೆಯಾಗಿ 24ನೇ ದಿನಕ್ಕೇ ಮಹಾಮಾರಿ ಕರೊನಾಗೆ  ಬಲಿಯಾಗಿದ್ದು, ಹಸುಗೂಸು ತಾಯಿ ಇಲ್ಲದೆ ತಬ್ಬಲಿ ಆಗಿದೆ. ನಿರ್ಮಲಾ ವೀರಯ್ಯ  ಮೃತರಾದ ಮಹಿಳೆ. ನಿರ್ಮಲಾಗೆ ಹೆರಿಗೆ ಆದ ಬಳಿಕ ಕರೊನಾ ಸೋಂಕು ಕಾಣಿಸಿಕೊಂಡಿತ್ತು. ಚಿಕಿತ್ಸೆಗಾಗಿ ಕೊಪ್ಪಳ ಜಿಲ್ಲಾಸ್ಪತ್ರೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಿಸದೆ ಶುಕ್ರವಾರ ರಾತ್ರಿ ಕೊನೆಯುಸಿರೆಳೆದಿದ್ದಾರೆ.