ಗೃಹಿಣಿಯರ ಪ್ರತಿಭೆಗೆ ಅವಕಾಶ ಕಲ್ಪಿಸುವ ಮಿಸೆಸ್ ಇಂಡಿಯಾ ಕರ್ನಾಟಕ ಫಿನಾಲೆ

Sunday, August 8th, 2021
mrs India

ಬೆಂಗಳೂರು : ಸದಾ ಸಂಸಾರದ ರಥ ಸಾಗಿಸುವಲ್ಲಿಯೇ ಕಳೆದುಹೋದ ಹೆಂಗಳೆಯರ ಆತ್ಮಸ್ಥೈರ್ಯವನ್ನು ಹೆಚ್ಚಿಸಿ ಅವರಲ್ಲಿನ ಪ್ರತಿಭೆಗೊಂದು ವೇದಿಕೆ ಕಲ್ಪಿಸಿ ಕೊಡುವ ಮಿಸೆಸ್ ಇಂಡಿಯಾ ಕರ್ನಾಟಕ ಅಂತಿಮ ಹಣಾಹಣಿಗೆ ಕ್ಷಣಗಣನೆ ಆರಂಭವಾಗಿದೆ. ಮಿಸೆಸ್ ಇಂಡಿಯಾ ಕರ್ನಾಟಕದ ನಿರ್ದೇಶಕಿ ಪ್ರತಿಭಾ ಸಂಶಿಮಠ ಅವರ ನೇತೃತ್ವದಲ್ಲಿ ಪ್ರತಿ ವರ್ಷವೂ ಅದ್ಧೂರಿಯಾಗಿ ನೆರವೇರುವ ಮಿಸೆಸ್ ಇಂಡಿಯಾ ಕರ್ನಾಟಕ ಫೈನಲ್ ಸ್ಪರ್ಧೆಯು ಈ ಬಾರಿ ಮೂರು ದಿನಗಳ ಕಾಲ ಅಂದರೆ ಆಗಸ್ಟ್ 9, 10 ಮತ್ತು 11ರಂದು ಆಯೋಜನೆಗೊಂಡಿದ್ದು, ನಗರದ ಯಲಹಂಕದಲ್ಲಿನ ರಮಡಾ ಹೋಟೆಲ್ […]

ತವರಿನಿಂದ ಹಣ ಹಾಗೂ ಬೈಕ್‍ ಕೊಡಿಸುವಂತೆ ಪೀಡಿಸುತ್ತಿದ್ದ ಪತಿ, ಮದ್ವೆಯಾಗಿ 8 ತಿಂಗಳಲ್ಲೇ ಪತ್ನಿಆತ್ಮಹತ್ಯೆ

Friday, March 19th, 2021
Hajira

ದಾವಣಗೆರೆ : ವ್ಯಾಪಾರ ಮಾಡಲು ತವರಿನಿಂದ ಹಣ ತರಲು ಪೀಡಿಸುತ್ತಿದ್ದ ಪತಿಯ ಕಾಟ ತಾಳಲಾರದೆ  ಗೃಹಿಣಿಯೊಬ್ಬಳು ಆತ್ಮಹತ್ಯೆಗೆ ಶರಣಾದ ಘಟನೆ ದಾವಣಗೆರೆಯ ಬಂಬೂ ಬಜಾರ್ ನ ಮನೆಯೊಂದರಲ್ಲಿ ನಡೆದಿದೆ. ಬಿಬೀ ಅಜೀರಾ (19) ಆತ್ಮಹತ್ಯೆಗೀಡಾದ ಗೃಹಿಣಿ. ಈಕೆ ವರದಕ್ಷಿಣೆ ಕಿರುಕುಳಕ್ಕೆ ಮನನೊಂದು ಅತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದುಬಂದಿದೆ. ಬಿಬೀ ಅಜಿರಾ-ಇಮ್ರಾನ್ ಮದುವೆಯಾಗಿ 8 ತಿಂಗಳಷ್ಟೆ ಕಳೆದಿತ್ತು. ಅಜಿರಾ ಕುಟುಂಬಸ್ಥರು 1ಲಕ್ಷ ರೂ ನಗದು, 3 ತೊಲೆ ಚಿನ್ನಾಭರಣ ಕೊಟ್ಟು ಮದುವೆ ಮಾಡಿ ಕೊಟ್ಟಿದ್ದರು. ಆದರೆ ಇತ್ತೀಚಿಗೆ ಪತಿ ಹಾಗೂ […]

ಬಂಟ್ವಾಳ : ಗೃಹಿಣಿಯೋರ್ವಳು ನಿಗೂಢವಾಗಿ ನಾಪತ್ತೆ

Wednesday, July 10th, 2013
Aladangady Woman

ಬಿ.ಸಿ.ರೋಡು : ಬಂಟ್ವಾಳ ಗ್ರಾಮಾಂತರ ಠಾಣಾ ವ್ಯಾಪ್ತಿಯ ಸಂಗಬೆಟ್ಟು ಗ್ರಾಮದ ಕಲ್ಕುರಿ ಎಂಬಲ್ಲಿಂದ ಗೃಹಿಣಿಯೋರ್ವಳು ನಿಗೂಢವಾಗಿ ನಾಪತ್ತೆಯಾದ ಘಟನೆ ವರದಿಯಾಗಿದೆ. ಕಾಣೆಯಾದವರನ್ನು ಸ್ಥಳೀಯ ನಿವಾಸಿ ಈಶ್ವರ ನಾಯ್ಕ ಎಂಬವರ ಮಗಳು ಶಶಿಕಲಾ (29) ಎಂದು ಗುರುತಿಸಲಾಗಿದೆ. ಗಂಡನ ಮನೆಗೆ ಹೋಗಿ ಬರುತ್ತೇನೆಂದು ತವರು ಮನೆಯಿಂದ ಹೊರಟವರು ಹಿಂದಿರುಗಿ ಮನೆಗೂ ಬಾರದೆ ಗಂಡನ ಮನೆಗೂ ತೆರಳದೆ ನಾಪತ್ತೆಯಾಗಿದ್ದಾರೆ. ಈಕೆಯನ್ನು ಬೆಳ್ತಂಗಡಿಯ ಆಳದಂಗಡಿ ನಿವಾಸಿ ಪ್ರಭಾಕರ್ ಎಂಬಾತನೊಂದಿಗೆ ಎರಡು ತಿಂಗಳ ಹಿಂದಷ್ಟೆ ವಿವಾಹ ಮಾಡಿಕೊಡಲಾಗಿತ್ತು. ಗಂಡನ ಮನೆಯಿಂದ ತವರು ಮನೆಗೆ […]