ಕಾರ್ಕಳ ಶಾಸಕ ವಿ. ಸುನಿಲ್‌ ಕುಮಾರ್‌ ಅವರಿಗೆ ಕೊರೋನ ದೃಢ

Friday, April 2nd, 2021
Sunil Kumar

ಕಾರ್ಕಳ : ಸದಾ ಬ್ಯುಸಿಯಲ್ಲಿರುವ ಕಾರ್ಕಳ ಶಾಸಕ ವಿ. ಸುನಿಲ್‌ ಕುಮಾರ್‌ ಅವರಿಗೆ ಕೊರೋನ ಪಾಸಿಟಿವ್‌ ದೃಢಪಟ್ಟಿದೆ. ಕೇರಳ ಬಿಜೆಪಿ ಸಹ ಪ್ರಭಾರಿಯಾಗಿರುವ ಸುನಿಲ್‌ ಕುಮಾರ್‌ ಅವರು ಕಳೆದ ಮೂರು ತಿಂಗಳಿನಿಂದ ಚುನಾವಣಾ ಪ್ರಚಾರ ನಡೆಸುತ್ತಿದ್ದರು. ಇಂದು ಅವರಿಗೆ ಕೊರೋನ ಪಾಸಿಟಿವ್‌ ದೃಢಪಟ್ಟಿದ್ದು, ಶಾಸಕರು ಕ್ವಾರಂಟೈನ್‌ನಲ್ಲಿದ್ದಾರೆ. ತಮ್ಮ ಸಂಪರ್ಕಕ್ಕೆ ಬಂದವರು ಕೋವಿಡ್‌ ಟೆಸ್ಟ್‌ ಮಾಡಿಸುವಂತೆ ಅವರು ವಿನಂತಿಸಿದ್ದಾರೆ.

ಜನ ಪ್ರೀತಿಸುವ ಸುರೇಶ್ ಬಜಾಲ್ ಗೆಲುವು ನಿಶ್ಚಿತ : ಕೆ ಯಾದವ ಶೆಟ್ಟಿ

Thursday, November 7th, 2019
suresh

ಮಂಗಳೂರು : ಬಜಾಲ್ ಪ್ರದೇಶದಾದ್ಯಂತ ಪ್ರತಿ ಮನೆ ಮನೆಗೂ ನಿಕಟ ಸಂಬಂಧ ಹೊಂದಿದ್ದ ಸುರೇಶ್ ಬಜಾಲ್ ಜನ ಅನುಭವಿಸಿದ ನೋವು ನಲಿವುಗಳಿಗೆ ದಿನಾ ಸ್ಪಂಧಿಸುತ್ತಾ ಬಂದಿರುತ್ತಾರೆ. ಈ ರೀತಿ ಜನಸಾಮಾನ್ಯರ, ಯುವಜನರ ಪ್ರೀತಿಯನ್ನು ಗಳಿಸಿದ ಸುರೇಶ್ ಬಜಾಲ್ ಅವರ ಗೆಲುವು ಈ ಬಾರಿ ನಿಶ್ಚಿತ ಎಂದು ಸಿಪಿಐಎಂ ದ.ಕ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಕೆ ಯಾದವ ಶೆಟ್ಟಿಯವರು 53 ನೇ ಬಜಾಲ್ ವಾರ್ಡ್ ನ ಸಿಪಿಐಎಂ ಅಭ್ಯರ್ಥಿ ಸುರೇಶ್ ಬಜಾಲ್ ಪರ ವಾಹನ ಪ್ರಚಾರ ಜಾಥವನ್ನು […]

ನಾನು ಮಂಗಳೂರುನ್ನ ನರಕ ಎಂದಿಲ್ಲ: ರಮ್ಯಾ

Friday, August 26th, 2016
Ramya

ಮಂಗಳೂರು: ‘ನಾನು ಮಂಗಳೂರುನ್ನ ನರಕ ಎಂದಿಲ್ಲ’ ಎಂದು ಮಾಜಿ ಸಂಸದೆ-ಚಿತ್ರನಟಿ ರಮ್ಯಾ ತಮ್ಮದೇ ಹೇಳಿಕೆಗೆ ಸ್ಪಷ್ಟನೆ ನೀಡಿದ್ದಾರೆ. ತನ್ನನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, `ಮಂಗಳೂರಿನ ಕುರಿತಾಗಿ ಅಂತಹ ಯಾವುದೇ ಕೆಟ್ಟ ಪದವನ್ನು ಬಳಸಿಲ್ಲ. ಟಿವಿ ವಾಹಿನಿಯೊಂದು ನನ್ನ ಹೇಳಿಕೆಯನ್ನು ತಿರುಚಿ ಪ್ರಸಾರ ಮಾಡಿದೆ. ಜಗತ್ತಿನಲ್ಲಿ ಯಾವುದೇ ಸ್ಥಳವನ್ನು ನರಕ ಅನ್ನುವುದು ಸರಿಯಲ್ಲ. ಅದರಲ್ಲೂ ನನ್ನ ಪ್ರೀತಿಯ ಊರಾದ ಮಂಗಳೂರನ್ನು ಯಾಕೆ ನರಕ ಎಂದು ಕರೆಯಲಿ?’ ನಾನು ಇಂದಿಗೂ ಎಂದೆಂದಿಗೂ ಮಂಗಳೂರನ್ನು ಪ್ರೀತಿಸುತ್ತೇನೆ. ಯಾಕೆಂದರೆ ನನ್ನ […]

ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಎ 4ಕ್ಕೆ ಮಂಗಳೂರಿಗೆ

Thursday, April 3rd, 2014
ಕಾಂಗ್ರೆಸ್‌ ಉಪಾಧ್ಯಕ್ಷ  ರಾಹುಲ್‌ ಗಾಂಧಿ ಎ 4ಕ್ಕೆ ಮಂಗಳೂರಿಗೆ

ಮಂಗಳೂರು: ಲೋಕ ಸಭಾ ಚುನಾವಣಾ ಪ್ರಚಾರಕ್ಕಾಗಿ ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರ ಮಂಗಳೂರಿಗೆ ಎ. 4ರಂದು ಭೇಟಿ ನೀಡಲಿದ್ದಾರೆ. ಅದಕ್ಕಾಗಿ ಸಿದ್ಧತೆಗಳು ನಡೆಯುತ್ತಿವೆ ಎಂದು ದ.ಕ. ಜಿಲ್ಲಾ ಕಾಂಗ್ರೆಸ್‌ ವಕ್ತಾರ ಐವನ್‌ ಡಿ’ಸೋಜಾ ಬುಧವಾರ  ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಕೇಂದ್ರ ಸಚಿವ ಆಸ್ಕರ್‌ ಫೆರ್ನಾಂಡಿಸ್‌, ದಿಗ್ವಿಜಯ ಸಿಂಗ್‌ ಸಹಿತ ಪಕ್ಷದ ಕೇಂದ್ರ ಮತ್ತು ರಾಜ್ಯ ನಾಯಕರು  ಭಾಗವಹಿಸಲಿದ್ದಾರೆ .  ರಾಹುಲ್‌ ಗಾಂಧಿ ಅವರು ಮಧ್ಯಾಹ್ನ 3 ಗಂಟೆಗೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿ ಬಳಿಕ 4 ಗಂಟೆಗೆ ನಗರದ ನೆಹರೂ ಮೈದಾನದಲ್ಲಿ ಚುನಾವಣಾ ಪ್ರಚಾರ ಭಾಷಣ […]

ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಕೃಷ್ಣ ಜೆ. ಪಾಲೆಮಾರ್ ರಿಂದ ಚುನಾವಣಾ ಪ್ರಚಾರ

Tuesday, April 23rd, 2013
Palemar

ಮಂಗಳೂರು : ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ,  ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್ ಸೋಮವಾರ ನಗರದ ಹರಿಪದವು, ಯಯ್ಯಾಡಿ, ಹಾಗೂ ಲ್ಯಾಂಡ್ ಲಿಂಕ್ಸ್ ಟೌನ್ ಶಿಪ್ ಪರಿಸರದಲ್ಲಿ ಚುನಾವಣಾ ಪ್ರಚಾರಕಾರ್ಯ ನಡೆಸಿದರು. ಅಲ್ಪಸಂಖ್ಯಾತ ಅಭ್ಯರ್ಥಿ ಈ ಬಾರಿ ತಮ್ಮ ಎದುರಾಳಿಯಾಗಿದ್ದು, ಅಲ್ಪಸಂಖ್ಯಾತರು ಮತ್ತು ಬಹುಸಂಖ್ಯಾತರು ತಮ್ಮ ಜೊತೆಗಿದ್ದಾರೆ. ಈ ನಿಟ್ಟಿನಲ್ಲಿ ಈ ಬಾರಿ ಗೆಲುವು ಸಾಧಿಸುವ ಎಲ್ಲಾ  ಲಕ್ಷಣಗಳು ಇದೆ, ಜೊತೆಗೆ ನಾನು ಈ ಕ್ಷೇತ್ರದಲ್ಲಿ ಮಾಡಿದ ಜನೋಪಯೋಗಿ ಅಭಿವೃದ್ದಿ ಕಾಮಗಾರಿಗಳೆ […]

ಸೀಲಿಂಗ್‌ ಫ್ಯಾನ್‌ ಹಿಡಿದು ಬೀದಿಗಿಳಿದ ಶ್ರೀರಾಮುಲು

Thursday, November 17th, 2011
Sri Ramulu

ಬಳ್ಳಾರಿ: ಇಷ್ಟು ದಿನ ಬಿಜೆಪಿಯಲ್ಲಿದ್ದು  ಇದೀಗ ಬಳ್ಳಾರಿ ಉಪಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಶ್ರೀರಾಮುಲು ತಮ್ಮ ಚಿಹ್ನೆ‌ ಸೀಲಿಂಗ್‌ ಫ್ಯಾನ್‌ ಹಿಡಿದು ಪ್ರಚಾರ ನಡೆಸಲು  ಬೀದಿಗಿಳಿದಿದ್ದಾರೆ. ಬಳ್ಳಾರಿ  ಜನರಿಗೆ ಶ್ರೀರಾಮುಲು ಅಂದರೆ ಬಿಜೆಪಿ ಹಾಗೂ ಕಮಲ ಎಂದರೆ ರಾಮುಲು ಎಂಬಾಂತಾಗಿತ್ತು. ಹೀಗಾಗಿ ಹಳ್ಳಿಗಾಡಿನ ಜನರಿಗೆ ಹೆಚ್ಚಿನ ಅರಿವು ಮೂಡಿಸುವ ಉದ್ದೇಶದಿಂದ ಈ ಕ್ರಮ ಅನುಸರಿಸಲಾಗುತ್ತಿದೆ ಎಂದು ರಾಮುಲು ಮತದಾರರಿಗೆ ತನ್ನ  ಚುನಾವಣಾ ಪ್ರಚಾರದಲ್ಲಿ ತಿಳಿಸಿದರು. ಬುಧವಾರ ಮೋಕಾ, ಯರಗುಡಿ, ಬೆಣಕಲ್ಲು, ಸಿಂಧವಾಳ ಸೇರಿದಂತೆ ಅನೇಕ ಹಳ್ಳಿಗಳಲ್ಲಿ ಚುನಾವಣಾ ಪ್ರಚಾರ ನಡೆಸಿದ […]