ಕುಡಿದ ಮತ್ತಿನಲ್ಲಿ ಸಂಬದಿಕನನ್ನೇ ಕೊಲೆಮಾಡಿದ ವ್ಯಕ್ತಿ

Friday, October 8th, 2021
Murder Case

ಬೆಳ್ತಂಗಡಿ: ಮನೆಯಲ್ಲಿ ಒಬ್ಬರೇ ಇದ್ದ ವೇಳೆ ವ್ಯಕ್ತಿಯೊಬ್ಬರನ್ನು ತಲವಾರಿನಿಂದ ಕಡಿದು ಕೊಲೆ ಮಾಡಿದ ಘಟನೆ ವೇಣೂರು ಕರಿಮಣೇಲುವಿನಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ಕರಿಮಣೇಲು ನಿವಾಸಿ, ಕೂಲಿ ಕಾರ್ಮಿಕ ಸಂಜೀವ ಶೆಟ್ಟಿ (60) ಎಂದು ಗುರುತಿಸಲಾಗಿದೆ. ರಾತ್ರಿ ವೇಳೆ ಇಬ್ಬರೂ ಸೇರಿ ಮದ್ಯಪಾನ ಮಾಡಿದ್ದು ಯಾವುದೋ ವಿಚಾರಕ್ಕೆ ಗಲಾಟೆಯಾಗಿ ಕೊಲೆಯಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಮೃತ ಸಂಜೀವ ಶೆಟ್ಟಿ ಕೂಲಿ ಕಾರ್ಮಿಕನಾಗಿದ್ದು, ವೈಯುಕ್ತಿಕ ದ್ವೇಷದಿಂದ ಕೊಲೆ ನಡೆದಿರಬಹುದು ಎಂದು ಪೊಲೀಸರು ಅಂದಾಜಿಸಿದ್ದಾರೆ. ಕೊಲೆ ಪ್ರಕರಣದ ಆರೋಪಿ ಸ್ಥಳೀಯ ನಿವಾಸಿ ಶಿವು […]

ಯುವತಿಗೆ ಹಾಡಹಗಲೇ ನಡುರಸ್ತೆಯಲ್ಲಿ ತಲವಾರಿನಿಂದ ಇರಿದ ಆಟೋ ಚಾಲಕ

Tuesday, December 22nd, 2020
Asha

ಹುಬ್ಬಳ್ಳಿ: ಆಟೋರಿಕ್ಷಾ ಚಾಲಕ  ಹುಚ್ಚುಪ್ರೇಮಿಯೊಬ್ಬ ಯುವತಿಗೆ ಹಾಡಹಗಲೇ ನಡುರಸ್ತೆಯಲ್ಲಿ ತಲವಾರಿನಿಂದ ಮನಬಂದಂತೆ ಇರಿದು ಗಂಭೀರ ಗಾಯಗೊಳಿಸಿದ ಘಟನೆ ಸೋಮವಾರ ಬೆಳಗ್ಗೆ ಇಲ್ಲಿನ ದೇಶಪಾಂಡೆ ನಗರದಲ್ಲಿ ನಡೆದಿದೆ. ಕುಂದಗೋಳ ತಾಲೂಕ ರಾಮಾಪೂರ ಗ್ರಾಮದ ಆಟೋರಿಕ್ಷಾ ಚಾಲಕ ಇಸ್ಮಾಯಿಲ್ ಕೆ. ಕುಂಕುರ ಹಲ್ಲೆ ಮಾಡಿದ ಆರೋಪಿ. ಇಲ್ಲಿನ ದುರ್ಗದ ಬಯಲಿನ ಜುವೆಲ್ಲರಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಆಶಾ ಡಿ. ಅಗಸರ ಹಲ್ಲೆಗೊಳಗಾಗಿದ್ದಾಳೆ. ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಎಂಟು ಜನ ಗಾಂಜಾ ವ್ಯಸನಿಗಳ ತಂಡದಿಂದ ಯುವಕರ ಮೇಲೆ ತಲವಾರು ಹಲ್ಲೆ

Tuesday, July 14th, 2020
Bajilakeri Gangwar

ಮಂಗಳೂರು : ನಗರದ ಬಜಿಲಕೇರಿಯಲ್ಲಿ ಜುಲೈ 13 ರ ಸೋಮವಾರ ತಡರಾತ್ರಿ  ಸುಮಾರು ಎಂಟು ಜನರ ತಂಡವೊಂದು ಯುವಕನ ಮೇಲೆ ದಾಳಿ ಮಾಡಿದೆ, ಮಾರಕ ಆಯುಧ ಹೊಂದಿದ್ದ ಗ್ಯಾಂಗ್ ಮೂವರು ಯುವಕರ ಮೇಲೆ ಹಲ್ಲೆ ನಡೆಸಿದೆ. ಕ್ಷುಲ್ಲಕ ಕಾರಣಗಳಿಂದ ಈ ದಾಳಿ ನಡೆದಿದೆ ಎಂದು ವರದಿಯಾಗಿದೆ. ಗಾಯಗೊಂಡ ಮೂವರು ಇಲ್ಲಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಪೊಲೀಸರು ಅಪರಾಧ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು ಗ್ಯಾಂಗ್ ಕೃತ್ಯ ನಡೆಸಿದ್ದ ಸ್ಥಳದಲ್ಲಿನ ಮನೆ ಮುಂದಿನ ವಸ್ತುಗಳನ್ನು ಹಾನಿಗೊಳಿಸಿದೆ. ಯುವಕರು ಗಾಂಜಾ […]