ಸಂಶೋಧನೆ ಸಮಾಜದ ತಿಳುವಳಿಕೆ ಹೆಚ್ಚಿಸುತ್ತದೆ: ಸಿಬಂತಿ ಪದ್ಮನಾಭ ಕೆವಿ

Tuesday, September 14th, 2021
Padmanabha KV

ಮಂಗಳೂರು: ಸಂಶೋಧನೆ ಉದ್ಯೋಗದಲ್ಲಿ ನಮ್ಮ ಬೆನ್ನೆಲುಬಾಗುವ ಜೊತೆಗೆ ನಮ್ಮ ಸಮಾಜದ ತಿಳುವಳಿಕೆಯನ್ನು ಹೆಚ್ಚಿಸುವ, ಸಾಧನೆಯ ಸಂತೋಷ ನೀಡುವ ಪ್ರಕ್ರಿಯೆ, ಎಂದು ತುಮಕೂರು ವಿಶ್ವವಿದ್ಯಾನಿಲಯದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ. ಸಿಬಂತಿ ಪದ್ಮನಾಭ ಕೆವಿ ಅಭಿಪ್ರಾಯಪಟ್ಟರು. ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಪತ್ರಿಕೋದ್ಯಮ, ರಾಜ್ಯಶಾಸ್ತ್ರ, ಸಮಾಜಶಾಸ್ತ್ರ ವಿಭಾಗಗಳು, ಎನ್ಎಸ್ಎಸ್ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ‘ಸಾಮಾಜಿಕ ವಿಜ್ಞಾನದಲ್ಲಿ ಸಂಶೋಧನೆ: ಸಮಸ್ಯೆಗಳು ಮತ್ತು ಕಾಳಜಿಗಳು’ ಎಂಬ ವೆಬಿನಾರ್ನಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ಅವರು, ಸಂಶೋಧನೆಯೆಂದರೆ ವೈಜ್ಞಾನಿಕ ಮಾನದಂಡಗಳಿಗೆ ಅನುಗುಣವಾಗಿ, […]