ನಂತೂರು ಆಕ್ಸಿಡೆಂಟ್ ಬೈಕ್ ಸವಾರ ಗಂಭೀರ
Tuesday, January 1st, 2019ಮಂಗಳೂರು : ನಂತೂರು ಜಂಕ್ಷನ್ನಲ್ಲಿ ವಿರುದ್ಧ ದಿಕ್ಕಿನಿಂದ ಬಂದ ಕಾರು ಸೋಮವಾರ ಸಂಜೆ ಬೈಕೊಂದಕ್ಕೆ ಢಿಕ್ಕಿಯಾದ ಪರಿಣಾಮ ಬೈಕ್ ಸವಾರ ಗಂಭೀರ ಗಾಯಗೊಂಡು ನಗರದ ಖಾಸಗಿ ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ. ಕೊಟ್ಟಾರ ನಿವಾಸಿ ಕೃಷ್ಣ ಆಚಾರ್ಯ ಗಾಯಗೊಂಡವರು. ಇವರು ಸೋಮವಾರ ಸಂಜೆ 4:30ರ ವೇಳೆಗೆ ಬೈಕ್ನಲ್ಲಿ ನಂತೂರಿನಿಂದ ಪಂಪ್ವೆಲ್ ಕಡೆಗೆ ಹೋಗುತ್ತಿದ್ದರು. ಕೇರಳ ನೋಂದಣಿಯ ಕಾರೊಂದು ವಿರುದ್ಧ ದಿಕ್ಕಿನಲ್ಲಿ ಪಂಪ್ವೆಲ್ನಿಂದ ಕೆಪಿಟಿ ಕಡೆಗೆ ಬಂದು, ಬೈಕ್ಗೆ ಢಿಕ್ಕಿಯಾಗಿದೆ. ಇದರಿಂದ ಬೈಕ್ ಸವಾರ ರಸ್ತೆಗೆ ಬಿದ್ದು ಗಂಭೀರವಾಗಿ […]