ತುಂಬೆ ಮಜಿಯಲ್ಲಿ ನಾಲ್ಕು ಮನೆಗಳಿಗೆ ನುಗ್ಗಿ ನಗದು ದರೋಡೆ

Friday, April 16th, 2021
tumbe

ಬಂಟ್ವಾಳ :   ನಾಲ್ಕು ಮನೆಗಳಿಗೆ ನುಗ್ಗಿರುವ ಕಳ್ಳರು ಒಂದು ಮನೆಯಿಂದ ನಗದು ಕಳ್ಳತನ ಮಾಡಿ ಪರಾರಿಯಾಗಿರುವ ಘಟನೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ತುಂಬೆಯಲ್ಲಿ ಗುರುವಾರ ನಡೆದಿದೆ. ಮನೆಮಂದಿ ನಾಟಕ ವೀಕ್ಷಣೆಗೆಂದು ತೆರಳಿದ್ದ ಸಂದರ್ಭ ತುಂಬೆ ಗ್ರಾಮದ ಮಜಿ ಎಂಬಲ್ಲಿ ನಾಲ್ಕು ಮನೆಗಳಿಗೆ ನುಗ್ಗಿರುವ ಕಳ್ಳರು ಒಂದು ಮನೆಯಿಂದ 8 ಸಾವಿರ ರೂ. ನಗದನ್ನು ದೋಚಿದ್ದಾರೆ. ಇನ್ನುಳಿದ ಮೂರು ಮನೆಯ ಕಪಾಟು ಸಹಿತ ಇತರ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿ ಜಾಲಾಡಿದ್ದು, ನಗದು ಸಹಿತ ಬೆಲೆಬಾಳುವ ಯಾವುದೇ […]

ಕೊಣಾಜೆ : ಇಬ್ರಾಹಿಂ ಕೋಡಿಜಾಲ್ ಮಗನ ಮನೆಗೆ ನುಗ್ಗಿದ ಕಳ್ಳರು, ಚಿನ್ನಾಭರಣ ಹಾಗೂ ನಗದು ದೋಚಿ ಪರಾರಿ

Thursday, March 25th, 2021
Gold Theft

ಕೊಣಾಜೆ  : ಮಂಗಳೂರು ವಿವಿ ಕ್ಯಾಂಪಸ್ ಸಮೀಪದಲ್ಲಿರುವ ಮನೆಯೊಂದಕ್ಕೆ ನುಗ್ಗಿದ ದುಷ್ಕರ್ಮಿಗಳು ಅಪಾರ ಮೌಲ್ಯದ ಚಿನ್ನಾಭರಣ ಹಾಗೂ ನಗದು ದೋಚಿ ಪರಾರಿಯಾಗಿರುವ ಘಟನೆ ಗುರುವಾರ ಬೆಳಗ್ಗೆ ಬೆಳಕಿಗೆ ಬಂದಿದೆ. ಹಾಜಿ ಇಬ್ರಾಹಿಂ ಕೋಡಿಜಾಲ್ ಅವರ ಪುತ್ರ ಹಬೀಬ್ ಅವರ ಮನೆಯಲ್ಲಿ ಈ ಕಳ್ಳತನ ಕೃತ್ಯ ನಡೆದಿದೆ. ಹಬೀಬ್, ಅವರ ಕುಟುಂಬದ ನಾಲ್ಕು ಮಂದಿ ಮನೆಯೊಳಗೆ ಇದ್ದಾಗಲೇ ರಾತ್ರಿ ವೇಳೆಯಲ್ಲಿ ಕಳ್ಳತನ ನಡೆಸಿದ್ದಾರೆ. ಮನೆಯ ಮಹಡಿಯ ಬಾಗಿಲು ಮುರಿದು ಒಳಗೆ ಪ್ರವೇಶಿಸಿರುವ ದುಷ್ಕರ್ಮಿಗಳು‌ ಕೋಣೆಯ ಕಪಾಟಿನಲ್ಲಿದ್ದ ಸುಮಾರು 100 […]

ಅಂಗನವಾಡಿ ಕಾರ್ಯಕರ್ತೆಯನ್ನು ನಂಬಿಸಿ 50 ಲಕ್ಷ ನಗದು ಮತ್ತು 22.75 ಲಕ್ಷ ಮೌಲ್ಯದ ಚಿನ್ನಾಭರಣ ಎಗರಿಸಿದ ಪಕ್ಕದ ಮನೆ ಗ್ಯಾಂಗ್

Thursday, August 13th, 2020
benedict

ಮಂಗಳೂರು : ಅಂಗನವಾಡಿ ಟೀಚರನ್ನು ನಂಬಿಸಿ ಪಕ್ಕದ ಮನೆಯವರೇ ಹಂತ ಹಂತವಾಗಿ 50 ಲಕ್ಷ ನಗದು ಮತ್ತು 22.75 ಲಕ್ಷ ಮೌಲ್ಯ ದ ಚಿನ್ನಾಭರಣ ವನ್ನು ಲೂಟಿ ಮಾಡಿದ ಘಟನೆ ಮುತ್ತೂರು ಗ್ರಾಮದ ಕುಪ್ಪೆಪದವು ಎಂಬಲ್ಲಿ ನಡೆದಿದೆ. ಪಾಂಡೆಮಿಕ್’ ಕಿರು ಚಿತ್ರ ಆಗಸ್ಟ್ 15 ರಂದು ಮೆಗಾ ಮೀಡಿಯಾ ನ್ಯೂಸ್ ಯೌಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ -ಇಲ್ಲಿ ವೀಕ್ಷಿಸಿ ಬೆನಡಿಕ್ಟ ಲೋಬೊ, ಕುಪ್ಪೆಪದವು ಮುರ ಎಂಬಲ್ಲಿ ವಾಸವಾಗಿದ್ದರು ಅಂಗನವಾಡಿ ಕಾರ್ಯಕರ್ತೆಯಾಗಿದ್ದ ಆಕೆಯ ಪಕ್ಕದ ಮನೆಯಲ್ಲಿ ಫರಿದಾ ಬೇಗಮ್, ಜೋಹರ, ಲತೀಫ್ […]

ಜೂಜಾಟ ಆಡುತ್ತಿದ್ದ 8 ಮಂದಿ ಬಂಧನ ​​: ನಗದು, ಕಾರು, ದ್ವಿಚಕ್ರ ವಾಹನ ವಶ

Friday, September 6th, 2019
joojata

ಮಂಗಳೂರು : ನಗರದ ಬೆಂದೂರ್ ವೆಲ್ಕುಮಾರ್ ಇಂಟರ್ ನ್ಯಾಷನಲ್ ಲಾಡ್ಜ್ನಲ್ಲಿ ಜೂಜಾಟ ಆಡುತ್ತಿದ್ದ ಎಂಟು ಮಂದಿ ಆರೋಪಿಗಳನ್ನು ಮಂಗಳೂರು ಪೂರ್ವ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಮಂಗಳೂರಿನ ಕಲ್ಕರ ಹೌಸ್ ನಿವಾಸಿ ಪ್ರವೀಣ್(41), ಪೆರ್ಮನ್ನೂರು ಗ್ರಾಮದ ನಿವಾಸಿ ನವೀನ್ (35), ತಲಪಾಡಿಯ ಪಂಜರ ಹೌಸ್ ನಿವಾಸಿ ನವೀನ್ ಆಳ್ವ (39), ಸೂಪಿಕಾನದ ಹಳೆಕಳ ಹೌಸ್ ನಿವಾಸಿ ಬಶೀರ್(52), ಕಂಡೇವ್ ಹೌಸ್ ನ ಸತೀಶ(33), ಬಂಟ್ವಾಳ ತಾಲೂಕಿನ ಪುದು ಗ್ರಾಮದ ಸುಜೀರ್ ಹೌಸ್ ನಿವಾಸಿ ವಿಜಯ ಕುಮಾರ್ (38), […]

ಅನಧಿಕೃತವಾಗಿ ಸಾಗಿಸಲಾಗುತಿದ್ದ 15 ಲಕ್ಷ ರೂ. ಮೌಲ್ಯದ ಬೆಳ್ಳಿ ಹಾಗೂ 94 ಸಾವಿರ ರೂ. ನಗದು ಪತ್ತೆ

Saturday, February 6th, 2016
Cash and Silver

ಮಂಜೇಶ್ವರ: ಕರ್ನಾಟಕ ಸಾರಿಗೆ ಬಸ್ಸಿನಲ್ಲಿ ಯಾವುದೇ ದಾಖಲೆ ಪತ್ರಗಳಿಲ್ಲದೆ ಸಾಗಿಸಲಾಗುತಿದ್ದ ಸುಮಾರು 15ಲಕ್ಷ ರೂ. ಮೌಲ್ಯದ ಬೆಳ್ಳಿ ಹಾಗೂ 94 ಸಾವಿರ ರೂ. ನಗದನ್ನು ಮಂಜೆಶ್ವರ ಅಬಕಾರಿ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿ ತಮಿಳ್ನಾಡು ಚೆನ್ನೈ ನಿವಾಸಿ ಮಹಾಲಿಂಗ (50) ಎಂಬಾತನನ್ನು ಸೆರೆ ಹಿಡಿಯಲಾಗಿದೆ. ಶನಿವಾರದಂದು ಬೆಳಿಗ್ಗೆ ಸುಮಾರು ಹನ್ನೊಂದು ಘಂಟೆಗೆ ವಾಹನ ತಪಾಸಣೆಯಲ್ಲಿ ನಿರತರಾಗಿದ್ದ ವಾಮಂಜೂರು ಚೆಕ್ ಪೋಸ್ಟ್ ಅಬಕಾರಿ ಪೊಲೀಸರು ಆ ದಾರಿಯಾಗಿ ಬಂದ ಮಂಗಳೂರಿನಿಂದ ಕಾಸರಗೋಡಿಗೆ ತೆರಳುತಿದ್ದ ಕರ್ನಾಟಕ ಸಾರಿಗೆ ಬಸ್ಸನ್ನು […]

ಮದುವೆಯ ಸಹಾಯರ್ಥವಾಗಿ ಕಾಮಾಜೆ ಯುವಕ ಸಂಘದ ವತಿಯಿಂದ ರೂ 5 ಸಾವಿರ ನಗದು

Wednesday, June 11th, 2014
Kammaje yuvaka Mandala

ಬಂಟ್ವಾಳ: ಕಾಮಾಜೆಯ ಶಾಂತ ಅವರ ಮಗಳು ಶುಭಾ ಅವರ ಮಗಳ ಮದುವೆಯ ಸಹಾಯರ್ಥವಾಗಿ ಕಾಮಾಜೆ ಯುವಕ ಸಂಘದ ವತಿಯಿಂದ ರೂ 5 ಸಾವಿರ ನಗದು ನೀಡಲಾಯಿತು. ಸಂಘದ ಅಧ್ಯಕ್ಷ ಬಾಸ್ಕರ್ ಟೈಲರ್, ಉಪಾಧ್ಯಕ್ಷ ವಿನೋದ್ ಕಾಮಾಜೆ , ಕಾರ್ಯದರ್ಶಿ ಉಮೇಶ್ ಕುಲಾಲ್ ಮತ್ತು ಸಂಘದ ಪದಾಧಿಕಾರಿಗಳು ಹಾಜರಿದ್ದರು. ನವೂದಯ ಯುವಕ ಸಂಘದ 2014-15ನೇ ಸಾಲಿನ ಅಧ್ಯಕ್ಷರಾಗಿ ಬಾಸ್ಕರ್ ಟೈಲರ್ ಕಾಮಾಜೆ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ವಿನೋದ್ ಕಾಮಾಜೆ, ಕಾರ್ಯದರ್ಶಿಯಾಗಿ ಉಮೇಶ್ ಕುಲಾಲ್ ಮೈರಾನ್ಪಾದೆ, ಜತೆ ಕಾರ್ಯದರ್ಶಿಗಳಾಗಿ ರತೀಶ್ ಭಂಡಾರಿ […]

ಪಿಸಿ ಮಲ್ಲಪ್ಪ ಆ್ಯಂಡ್ ಕಂಪನಿಗೆ ನುಗ್ಗಿದ ಕಳ್ಳರು, ನಗದು ಮತ್ತು ಸ್ಯಾನಿಟರಿ ವಸ್ತುಗಳ ಲೂಟಿ

Saturday, July 20th, 2013
PC Mallappa &Co

ಮಂಗಳೂರು: ಪಳ್ನೀರ್ ನ ಹೈಲ್ಯಾಂಡ್ ಆಸ್ಪತ್ರೆ ಸಮೀಪವಿರುವ ಪಿಸಿ ಮಲ್ಲಪ್ಪ ಆ್ಯಂಡ್ ಕಂಪನಿ ಯಲ್ಲಿ ಗುರುವಾರ ರಾತ್ರಿ ಕಳ್ಳತನ ನಡೆದಿದ್ದು. ಸುಮಾರು  50 ಸಾವಿರ ರೂ. ನಗದು ಮತ್ತು ಸ್ಯಾನಿಟರಿವೇರ್ ನ ಹಲವಾರು ಬೆಲೆಬಾಳುವ ವಸ್ತುಗಳನ್ನು ದೋಚಿದ್ದಾರೆ. ಶೋರೂಮ್ ನ ಮುಂದಿನ ಶಟರ್ ನ್ನು ಮುರಿದು ಕಳ್ಳರು ಒಳಪ್ರವೇಶಿಸಿದ್ದಾರೆ. ಬೆಲೆಬಾಳುವ ಜಾಕ್ವರ್ ವಾಲ್ ಮಿಕ್ಸರ್ ತ್ರೀ ಇನ್ ವನ್ ನ  ಬಾಕ್ಸ್ ಗಳು ಹಾಗೂ 50 ಸಾವಿರ ರೂ. ನಗದನ್ನು ಕಳ್ಳತನ ಮಾಡಲಾಗಿದೆ. ಜಾಕ್ವರ್ ವಾಲ್ ಮಿಕ್ಸರ್ ನ […]