ಕೂಳೂರು ಬಳಿ ನಾಗನ ಕಟ್ಟೆಯನ್ನು ಒಡೆದ ಕಿಡಿಗೇಡಿಗಳು

Saturday, October 23rd, 2021
Kulooru Nangana Katte

ಮಂಗಳೂರು: ಬಂಟ್ವಾಳ ಮುಂಡಾಡಿಯಲ್ಲಿ ವಿಶ್ವ ಹಿಂದೂ ಪರಿಷತ್ ಕಟ್ಟೆ ಒಡೆದ ಮಾದರಿಯಲ್ಲೇ  ಕೂಳೂರು ವಿ ಆರ್ ಎಲ್ ಬಳಿಯ ನಾಗನ ಕಟ್ಟೆಯನ್ನು ಯಾರೋ ಕಿಡಿಗೇಡಿಗಳು ಒಡೆದು ಹಾನಿ ಮಾಡಿರುವುದು ಶನಿವಾರ ಬೆಳಗ್ಗೆ ಬೆಳಕಿಗೆ ಬಂದಿದೆ. ಸ್ಥಳಕ್ಕೆ ಪಣಂಬೂರು ಪೊಲೀಸರು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಅನೇಕ ಸಮಯದಿಂದ ಇಂತಹ ದುಷ್ಕೃತ್ಯ ದಕ್ಷಿಣ ಕನ್ನಡದಲ್ಲಿ ನಡೆಯುತ್ತಿದ್ದು ಈ ಕೃತ್ಯದ ಹಿಂದಿನ ಕಿಡಿಗೇಡಿಗಳನ್ನು ಪತ್ತೆಹಚ್ಚಿ ಬಂಧಿಸಲು ಹಿಂದೂ ಸಂಘಟನೆಗಳು ಆಗ್ರಹಿಸಿವೆ.

ಪನೋಲಿಬೈಲು ಕಲ್ಲುರ್ಟಿ ದೈವಸ್ಥಾನದಲ್ಲಿ ಗುತ್ತಿಗೆಯನ್ನು ಹಿಂದೂಗಳ ಹೊರತು ಅನ್ಯ ಮತೀಯರಿಗೆ ನೀಡಬಾರದು: ಆಡಳಿತಾಧಿಕಾರಿಯವರಿಗೆ ಮನವಿ

Friday, October 21st, 2016
Panolibailu

ಬಂಟ್ವಾಳ: ಇತಿಹಾಸ ಪ್ರಸಿದ್ದ ಬಂಟ್ವಾಳ ತಾಲೂಕಿನ ಕಲ್ಲುರ್ಟಿ ದೈವಸ್ಥಾನದಲ್ಲಿ ವಾರ್ಷಿಕ ಉತ್ಸವಾದಿಗಳು ನಡೆಯುವ ಸಂದರ್ಭ ದೈವಸ್ಥಾನದ ವಿದ್ಯುತ್ ಅಲಂಕಾರ, ದೈವಸ್ಥಾನಕ್ಕೆ ಬಣ್ಣ ಬಳಿಯುವುದು, ಪುಪ್ಪಾಲಂಕಾರ ಮಾಡುವ ಗುತ್ತಿಗೆಯನ್ನು ಹಿಂದೂಗಳ ಹೊರತು ಅನ್ಯ ಮತೀಯರಿಗೆ ನೀಡಬಾರದು ಎಂದು ಆಗ್ರಹಿಸಿ ಬಂಟ್ವಾಳ ತಾ. ಹಿಂದೂ ಪರಿಷತ್ ಹಾಗೂ ಭಜರಂಗದಳ ಸಜೀಪ ವಲಯದ ವತಿಯಿಂದ ಆಡಳಿತಾಧಿಕಾರಿಯವರಿಗೆ ಮನವಿ ನೀಡಲಾಯಿತು. ಕಳೆದ ವಾರ್ಷಿಕ ಉತ್ಸವ ಸಂದರ್ಭ ಅನ್ಯಮತೀಯರಿಗೆ ಗುತ್ತಿಗೆಯನ್ನು ನೀಡಿದ ಕಾರಣ ಪುಷ್ಪಾಲಂಕಾರ ಮಾಡುವಾಗ ನಾಗನ ಕಟ್ಟೆಗೆ ತುಳಿಯುವುದು, ಹಿಂದೂ ಹುಡುಗಿಯರನ್ನು ಚುಡಾಯಿಸುವುದು, […]