ಸಾಲಗಾರರ ಕಿರಿಕಿರಿ ತನ್ನ ಸ್ವಂತ ಬೈಕ್ ಗೆ ಶೋ ರೂಂ ಎದುರು ಬೆಂಕಿ ಹಚ್ಚಿದ ಯುವಕ

Tuesday, February 8th, 2022
Bike

ಬಂಟ್ವಾಳ : ವ್ಯಕ್ತಿಯೊಬ್ಬ ತನ್ನ ಸ್ವಂತ ಬೈಕ್ ಗೆ ಬೈಕ್ ಶೋ ರೂಂ ಎದುರೇ ಬೆಂಕಿ ಹಚ್ಚಿ ಸುಟ್ಟು ಹಾಕಿರುವ ಘಟನೆ ಸೋಮವಾರ ಬಿ.ಸಿ.ರೋಡ್ ಕೈಕಂಬ ಸಮೀಪ ನಡೆದಿದೆ. ಫರಂಗಿಪೇಟೆ ನಿವಾಸಿ ಮುಹಮ್ಮದ್ ಹರ್ಷಾದ್ ಬೈಕ್ ಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ವ್ಯಕ್ತಿ ಎನ್ನಲಾಗಿದೆ. ಹರ್ಷಾದ್ ಫೈನಾನ್ಸ್ ನಿಂದ ಸಾಲ ಮಾಡಿ ಬೈಕ್ ಕೊಂಡುಕೊಂಡಿದ್ದು ಸಾಲದ ಕಂತು ಪಾವತಿ ಮಾಡಿಲ್ಲ ಎಂಬ ಕಾರಣಕ್ಕೆ ಫೈನಾನ್ಸ್ ನವರು ಬೈಕ್ ಗೆ ಸಂಬಂಧಿಸಿದ ದಾಖಲೆ ಪತ್ರಗಳನ್ನು ಆತನ ಕೈಯಿಂದ […]

ಅಜ್ಜಿಬೆಟ್ಟುವಿನಲ್ಲಿ ಯುವಕನಿಗೆ ಚೂರಿ ಇರಿದ ಪ್ರಕರಣ, ಇಬ್ಬರ ಬಂಧನ

Saturday, May 1st, 2021
Bantwala Police

ಬಂಟ್ವಾಳ: ಬಿ.ಸಿ.ರೋಡ್ ಬಳಿಯ ಅಜ್ಜಿಬೆಟ್ಟು ಕ್ರಾಸ್ ನಲ್ಲಿ ಯುವಕನೋರ್ವನಿಗೆ ಚೂರಿ ಇರಿದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಬಂಟ್ವಾಳ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಿ.ಸಿ.ರೋಡ್ ಕೈಕಂಬ ಸಮೀಪದ ಪರ್ಲ್ಯ ನಿವಾಸಿಗಳಾದ ಇಮ್ರಾನ್ ಮತ್ತು ಸಫ್ವಾನ್ ಬಂಧಿತ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ. ಬ್ರಹ್ಮರಕೋಟ್ಲು ನಿವಾಸಿ ಮನೋಜ್ ಸಪಲ್ಯ ಎಂಬವರಿಗೆ ಎ. 4ರಂದು ರಾತ್ರಿ ಬಿ.ಸಿ.ರೋಡ್ ಬಳಿಯ ಅಜ್ಜಿಬೆಟ್ಟು ಕ್ರಾಸ್ ನಲ್ಲಿ ಸ್ಕೂಟರ್ ನಲ್ಲಿ ಬಂದ ಇಬ್ಬರು ಚೂರಿಯಿಂದ ಇರಿದು ಪರಾರಿಯಾಗಿದ್ದರು ಎಂದು ದೂರು ದಾಖಲಾಗಿತ್ತು. ಚೂರಿ […]

ಬಂಟ್ವಾಳಕ್ಕೆ ಆಗಮಿಸಿದ ಶ್ರೀನಿವಾಸ್ ಪೂಜಾರಿ

Thursday, August 22nd, 2019
shreenivas

ಬಂಟ್ವಾಳ : ಸಂಪುಟ ದರ್ಜೆಯ ಸಚಿವರಾಗಿ ಬಂಟ್ವಾಳಕ್ಕೆ ಮೊದಲ ಬಾರಿ ಆಗಮಿಸಿದ ಕೋಟ ಶ್ರೀನಿವಾಸ್ ಪೂಜಾರಿ ಯವರನ್ನು ಬಂಟ್ವಾಳ ಬಿಜೆಪಿ ವತಿಯಿಂದ ಬಿ.ಸಿ ರೋಡ್ ನಲ್ಲಿ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರ ನೇತೃತ್ವದಲ್ಲಿ ಬುಧವಾರ ರಾತ್ರಿ ಸ್ವಾಗತಿಸಲಾಯಿತು. ಈ ಸಂದರ್ಭದಲ್ಲಿ ಬಿಜೆಪಿ ಅಧ್ಯಕ್ಷರಾದ ಬಿ. ದೇವದಾಸ್ ಶೆಟ್ಟಿ, ಎ.ಗೋವಿಂದ ಪ್ರಭು, ಕಾರ್ಯದರ್ಶಿ ರಾಮದಾಸ್ ಬಂಟ್ವಾಳ ಮತ್ತು ಇನ್ನಿತರ ಕಾರ್ಯಕರ್ತರು ಉಪಸ್ಥಿತರಿದ್ದರು.      

ಬಿ.ಸಿ ರೋಡ್ ನಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಆಚರಣೆ

Thursday, March 8th, 2018
womens-day

ಮಂಗಳೂರು: ಕೆನರಾ ಅಭಿವೃದ್ಧಿ ಮತ್ತು ಶಾಂತಿ ಸಂಸ್ಥೆ (ರಿ) (ಸಿ.ಒ.ಡಿ.ಪಿ) ಮಂಗಳೂರು, ದ.ಕ ಸಹಜೀವನ ಜಿಲ್ಲಾ ಒಕ್ಕೂಟ ಮತ್ತು ನಮನ ಮಹಿಳಾ ಒಕ್ಕೂಟ, ಬಂಟ್ವಾಳ ಇವರ ಜಂಟಿ ಆಶ್ರಯದಲ್ಲಿ ದಿನಾಂಕ8-03-2018 ಗುರುವಾರ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಬಿ.ಸಿ.ರೋಡ್‌ನಲ್ಲಿನಡೆಯಿತು. ಈ ಸಂದರ್ಭದಲ್ಲಿ ಬಿ.ಸಿ ರೋಡ್ ಜಂಕ್ಷನ್‌ನಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಜಾಥಾವನ್ನು ಬೆಳಿಗ್ಗೆ 10.00ಕ್ಕೆ ಸರಿಯಾಗಿ ಬಂಟ್ವಾಳ ಪುರಸಭೆಯ ಕೌನ್ಸಿಲರ್ ಶ್ರೀಮತಿ ಯಾಸ್ಮಿನ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಗೆ ಶುಭಕೋರಿ, ಮಹಿಳೆಯರ ಪಾತ್ರವನ್ನು ವಿವರಿಸುತ್ತಾ, […]

ಸಚಿವರ ವಿರುದ್ಧ ಮಾತಾಡಿದ್ರೆ…ಬಿಜೆಪಿಯ ಹರಿಕೃಷ್ಣ ಬಂಟ್ವಾಳಗೆ ಮತ್ತೊಂದು ಬೆದರಿಕೆ ಪತ್ರ

Monday, January 29th, 2018
harikrishna-bantwal

ಮಂಗಳೂರು: ಬಿಜೆಪಿ ವಕ್ತಾರ ಹರಿಕೃಷ್ಣ ಬಂಟ್ವಾಳ ಅವರಿಗೆ ಬರುತ್ತಿರುವ ಬೆದರಿಕೆ ಪತ್ರಗಳ ಸಂಖ್ಯೆ ಹೆಚ್ಚಾಗಿದೆ. ಉಸ್ತುವಾರಿ ಸಚಿವರ ವಿರುದ್ಧ ಮಾಧ್ಯಮಗಳಲ್ಲಿ ಮಾತನಾಡಬಾರದು. ಇದರಿಂದ ಪರಿಣಾಮ ನೆಟ್ಟಗಿರುವುದಿಲ್ಲ ಎಂಬ ಎಚ್ಚರಿಕೆಗಳು ಪ್ರತಿ ಪತ್ರಗಳಲ್ಲೂ ಇವೆ. ಒಂದು ಪತ್ರ ಮುಂಬೈನಿಂದ ಬಂದಿದ್ದರೆ, ಉಳಿದ ಐದು ಪತ್ರಗಳು ಬಿ.ಸಿ.ರೋಡ್‌‌ನಿಂದಲೇ ಪೋಸ್ಟ್ ಆಗಿವೆ ಎನ್ನುತ್ತಾರೆ ಹರಿಕೃಷ್ಣ ಬಂಟ್ವಾಳ. ‘ಉಸ್ತುವಾರಿ ಸಚಿವರ ವಿರುದ್ಧ ಮಾತನಾಡುವುದು ಬಿಟ್ಟು ನಾಯಿಯಂತೆ ಕೂತಿರು’ ಎಂಬ ಬೆದರಿಕೆಯನ್ನು ಪತ್ರದಲ್ಲಿ ಹಾಕಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಹರಿಕೃಷ್ಣ ಬಂಟ್ವಾಳ್‌, ‘ಕೇವಲ ನನಗಷ್ಟೇ […]

ಭಜರಂಗದಳ ಕಾರ್ಯಕರ್ತ ರೌಡಿ ಶೀಟರ್‌ ಶರಣ್‌ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರ ವಶ

Saturday, August 20th, 2016
Sharan

ಮಂಗಳೂರು: ಭಜರಂಗದಳ ಕಾರ್ಯಕರ್ತ ಹಾಗೂ ರೌಡಿ ಶೀಟರ್‌ ಶರಣ್‌ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೊಲೆರೋ ಕಾರಿನ ಸಮೇತ ಐವರನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿದು ಬಂದಿದೆ. ಶರಣ್ ಹಂತಕರು ಬೊಲೆರೋ ಕಾರಿನಲ್ಲಿ ಬಂದು ಈ ಕೃತ್ಯ ಎಸಗಿದ್ದರು ಎಂಬ ಬಗ್ಗೆ ಪೊಲೀಸರಿಗೆ ಖಚಿತ ಮಾಹಿತಿಯೊಂದು ದೊರೆತಿತ್ತು. ಕೊಲೆ ನಡೆದ ಕೆಲವೇ ಕ್ಷಣದಲ್ಲಿ ಕಾರ್ಯಪ್ರವೃತರಾದ ಪೊಲೀಸ್ ತಂಡ ಹಂತಕರಿಗಾಗಿ ಜಿಲ್ಲೆಯಾದ್ಯಂತ ವ್ಯಾಪಕ ಬಲೆ ಬೀಸಿದ್ದರು. ಈ ನಡುವೆ ಕೊಲೆ ನಡೆದ ಕೆಲವೇ ಸಮಯದಲ್ಲಿ ಹಂತಕರು ಪರಾರಿಯಾಗಲು ಯತ್ನಿಸುತ್ತಿದ್ದ ಬೊಲೆರೋ […]

ಬಿ.ಸಿ. ರೋಡ್ ನಲ್ಲಿ ರೈಲ್ವೇ ಮೇಲ್ಸೇತುವೆ ಫ‌ುಟ್‌ಪಾತ್‌ ಕುಸಿತ, ರಸ್ತೆ ಸಂಚಾರ ಅಸ್ತವ್ಯಸ್ತ

Friday, April 5th, 2013
Bantwal Railway overbridge

ಬಂಟ್ವಾಳ : ರಾಷ್ಟ್ರೀಯ ಹೆದ್ದಾರಿ ಬಿ.ಸಿ. ರೋಡ್ ನಲ್ಲಿ ರೈಲ್ವೇ ಮೇಲ್ಸೇತುವೆಯ ಫ‌ುಟ್‌ಪಾತ್‌ನ ಬದಿಯ ಬಿರುಕು ಬಿಟ್ಟ ಜಾಗದಲ್ಲಿ ಗುರುವಾರ ಲಾರಿಯೊಂದು ಚಲಿಸಿ, ಫ‌ುಟ್‌ಪಾತ್‌ ಇನ್ನಷ್ಟು ಕುಸಿದು ಲಾರಿಯ ಚಕ್ರಗಳು ಬಿರುಕು ಬಿಟ್ಟ ಜಾಗದಲ್ಲಿ ಸಿಲುಕಿಕೊಂಡ ಪರಿಣಾಮ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿತು. ಇದರಿಂದಾಗಿ ಬಿ.ಸಿ. ರೋಡಿನಲ್ಲಿ ಸುದೀರ್ಘ ಹೊತ್ತು ರಸ್ತೆ ಸಂಚಾರಕ್ಕೆ ತಡೆ ಉಂಟಾಗಿ ಪ್ರಯಾಣಿಕರು ಪರದಾಡುವಂತಾಯಿತು.  ಬಳಿಕ ಕ್ರೇನ್ ಮೂಲಕ ಲಾರಿಯನ್ನು ಮೇಲಕ್ಕೆತ್ತಿ ರಸ್ತೆ ಸಂಚಾರಕ್ಕೆ ಅವಕಾಶ ಕಲ್ಪಿಸಲಾಯಿತು. ಬಿ.ಸಿ.ರೋಡಿನ ರೈಲ್ವೇ ಮೇಲ್ಸೆತುವೆಯ ಫ‌ುಟ್‌ಪಾತ್‌ ಆಗಾಗ […]

ಕಟ್ಟಡ ನಿರ್ಮಾಣದ ವೇಳೆ ಮಣ್ಣು ಕುಸಿದು ಕಾರ್ಮಿಕನ ಸಾವು

Tuesday, January 29th, 2013
Labourer dies in landslip

ಮಂಗಳೂರು : ಬಿ.ಸಿ.ರೋಡಿನ ಶ್ರೀ ಚಂಡಿಕಾಪರಮೇಶ್ವರೀ ದೇವಸ್ಥಾನದ ಸಭಾಭವನದ ನಿರ್ಮಾಣ ಕಾರ್ಯ ನಡೆಯುತ್ತಿದ್ದ ವೇಳೆ ಕಾರ್ಮಿಕನೊಬ್ಬನ ಮೇಲೆ ಮಣ್ಣು ಕುಸಿದು ಮೃತಪಟ್ಟ ಘಟನೆ ಜನವರಿ 28 ಸೋಮವಾರ ಸಂಭವಿಸಿದೆ. ಉಳಿ ಗ್ರಾಮ ಮಿತ್ತರಿಪಾದೆ ನಿವಾಸಿ ರಾಮಣ್ಣ ಪೂಜಾರಿಯವರ ಪುತ್ರ ಶರತ್‌ ಪೂಜಾರಿ(23) ಮೃತ ವ್ಯಕ್ತಿ. ಶ್ರೀ ಚಂಡಿಕಾಪರಮೇಶ್ವರೀ ದೇವಸ್ಥಾನ ಮುಂಭಾಗ ನಿರ್ಮಾಣ ಹಂತದಲ್ಲಿರುವ ಸಭಾಭವನದ ಪಿಲ್ಲರ್‌ ಗುಂಡಿಯಲ್ಲಿ ಸ್ಟೀಲ್‌ ರಾಡನ್ನು ಬಿಗಿದು ನೇರ ಮಾಡುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಪಿಲ್ಲರ್‌ ನಿರ್ಮಾಣ ಗುಂಡಿಗಳನ್ನು ಜೆಸಿಬಿ ಬಳಸಿ […]