ಹೊಸ ವರ್ಷ ಎಂದು ಕಂಠಪೂರ್ತಿ ಕುಡಿದ… ತಂದೆ ಮೇಲೆಯೇ ತಲವಾರ್‌ ಬೀಸಿದ!

Tuesday, January 2nd, 2018
Talwar-case

ಮಂಗಳೂರು: ಹೊಸ ವರ್ಷದ ಸಂಭ್ರಮದಲ್ಲಿ ಕಂಠಪೂರ್ತಿ ಕುಡಿದು ಬಂದ ಮಗ ಮನೆಯಲ್ಲಿ ದಾಂಧಲೆ ನಡೆಸಿ ತಂದೆಯ ಮೇಲೆ ತಲವಾರ್‌ ದಾಳಿ ನಡೆಸಿದ ಘಟನೆ ಬೆಳ್ತಂಗಡಿಯ ಮಟ್ಲದಲ್ಲಿ ನಡೆದಿದೆ. ಮಟ್ಲದ ಜ್ಯೋತಿಷಿ ಮಂಜುನಾಥ್ ಎಂಬವವರ ಮಗ ನವೀನ್ ಈ ಕೃತ್ಯ ಎಸಗಿದವ. ಹೊಸ ವರ್ಷದ ಆಚರಣೆಯ ವೇಳೆ ಕಂಠಪೂರ್ತಿ ಕುಡಿದಿದ್ದ ನವೀನ್, ನಶೆಯಲ್ಲಿ ಮನೆಯಲ್ಲಿದ್ದ ಎಲ್ಲಾ ವಸ್ತುಗಳನ್ನು ಧ್ವಂಸ ಮಾಡಿದ್ದಾನೆ. ಬಳಿಕ ತಂದೆಯ ಮೇಲೆ ತಲವಾರ್‌ನಿಂದ ದಾಳಿ ನಡೆಸಿ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಬೆಳ್ತಂಗಡಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.