ವಿವಿ ಕಾಲೇಜು: ಹಿಂದಿಯಲ್ಲಿ ರ‍್ಯಾಂಕ್ ಪಡೆದವರಿಗೆ ನಗದು ಬಹುಮಾನ

Thursday, December 23rd, 2021
Hindi Rank

ಮಂಗಳೂರು: ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಸ್ನಾತಕೋತ್ತರ ಹಿಂದಿ ವಿಭಾಗ ಮತ್ತು ಬ್ಯಾಂಕ್ ಆಫ್ ಬರೋಡಾದ ಮಂಗಳೂರು ಪ್ರಾದೇಶಿಕ ಕಚೇರಿಯ ಸಹಯೋಗದಲ್ಲಿ ಕಾಲೇಜಿನ ಡಾ.ಶಿವರಾಮ ಕಾರಂತ ಸಭಾಭವನದಲ್ಲಿ ಗುರುವಾರ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮತ್ತು ವಿಶೇಷ ಉಪನ್ಯಾಸ ಕಾರ್ಯಕ್ರಮ ಆಯೋಜಿಸಲಾಗಿತ್ತು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಬ್ಯಾಂಕ್ ಆಫ್ ಬರೋಡಾದ ಮಂಗಳೂರು ಪ್ರಾದೇಶಿಕ ಕಚೇರಿ ಉಪಮುಖ್ಯಸ್ಥ ಆರ್. ಗೋಪಾಲ ಕೃಷ್ಣ, ಕರಾವಳಿ ಜನರಿಗೆ ವಿಜಯಾ ಬ್ಯಾಂಕ್ ಜೊತೆಯಿದ್ದ ಬಾಂಧವ್ಯ, ವಿಲೀನದ ಬಳಿಕ ಬ್ಯಾಂಕ್ ಆಫ್ ಬರೋಡಾದ ಮೂಲಕ ಮುಂದುವರಿದಿದೆ, […]

ಉತ್ತಮ ಗುಣಮಟ್ಟ ಹಾಗೂ ಆಕರ್ಷಕ ವಿನ್ಯಾಸದಿಂದ “ಸಿರಿ” ಉತ್ಪನ್ನಗಳಿಗೆ ಹೆಚ್ಚಿನ ಬೇಡಿಕೆ

Tuesday, July 20th, 2021
siri

ಧರ್ಮಸ್ಥಳ : ಮಹಿಳೆಯರು, ಮಹಿಳೆಯರಿಂದ ಹಾಗೂ ಮಹಿಳೆಯರಿಗಾಗಿ ವ್ಯವಹಾರ ನಡೆಸುವ ಧರ್ಮಸ್ಥಳ “ಸಿರಿ” ಗ್ರಾಮೋದ್ಯೋಗ ಸಂಸ್ಥೆ ಲಾಭ ರಹಿತ ಸಂಸ್ಥೆಯಾಗಿದ್ದು ಮಹಿಳೆಯರ ಸ್ವಾವಲಂಬಿ ಜೀವನಕ್ಕೆ ಕಾಯಕಲ್ಪ ನೀಡುತ್ತಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು. ಅವರು ಸೋಮವಾರ ಧರ್ಮಸ್ಥಳದಲ್ಲಿ ಬ್ಯಾಂಕ್ ಆಫ್ ಬರೋಡಾ ವತಿಯಿಂದ ಶ್ರೀ ಧರ್ಮಸ್ಥಳ “ಸಿರಿ” ಗ್ರಾಮೋದ್ಯೋಗ ಸಂಸ್ಥೆಗೆ ಸಿರಿ ಉತ್ಪನ್ನಗಳನ್ನು ಮಾರಾಟ ಮಾಡಲು ಕೊಡುಗೆಯಾಗಿ “ಮಾರುತಿ ಇಕೊ” ವಾಹನ ಹಸ್ತಾಂತರ ಸಮಾರಂಭದಲ್ಲಿ ಮಾತನಾಡಿದರು. ಉತ್ತಮ ಗುಣಮಟ್ಟ ಹಾಗೂ ಆಕರ್ಷಕ ವಿನ್ಯಾಸದ […]

ವಿಜಯ ಬ್ಯಾಂಕ್ ಸ್ಥಾಪಕರ ಮತ್ತು ನಿರ್ದೇಶಕರ ಫೋಟೊಗಳನ್ನು ಕಿತ್ತುಹಾಕಿದ ಬ್ಯಾಂಕ್ ಆಫ್ ಬರೋಡಾ

Sunday, July 21st, 2019
Vijayabank

ಮಂಗಳೂರು : ತುಳುನಾಡಿನಲ್ಲಿ ಸ್ಥಾಪನೆಯಾದ  ವಿಜಯ ಬ್ಯಾಂಕ್ ಕೇವಲ ನೆನಪಿಗೆ ಮಾತ್ರ ಸೀಮಿತಗೊಳ್ಳು ತ್ತಿರುವಂತೆಯೇ ಇದೀಗ ಬ್ಯಾಂಕ್‌ನ ಪ್ರಾದೇಶಿಕ ಕಚೇರಿಯ (ಸಂಸ್ಥಾಪನಾ ಶಾಖೆ) ಪ್ರವೇಶ ದ್ವಾರದ ಮೇಲಿದ್ದ ಸಂಸ್ಥಾಪನಾ ನಿರ್ದೇಶಕರ ಫೋಟೊಗಳನ್ನು ಬ್ಯಾಂಕ್ ಆಫ್ ಬರೋಡಾ ತೆರವುಗೊಳಿಸಲಾಗಿದೆ. ನಗರದ ಅಂಬೇಡ್ಕರ್ ವೃತ್ತ(ಜ್ಯೋತಿ)ದ ಬಳಿಯ ವಿಜಯ ಬ್ಯಾಂಕ್‌ನ ಪ್ರಾದೇಶಿಕ ಕಚೇರಿಯಲ್ಲಿ ಇದೀಗ ಬ್ಯಾಂಕ್‌ನ ಸಂಸ್ಥಾಪಕ ನಿರ್ದೇಶಕರ ಫೋಟೊಗಳನ್ನು ತೆಗೆದು ಆ ಜಾಗ ಖಾಲಿಯಾಗಿದೆ. ಫೋಟೋಗಳನ್ನು ಬೆಂಗಳೂರಿನ ಮ್ಯೂಸಿಯಂನಲ್ಲಿ ಇಡಲಾಗುವುದು ಎಂಬ ಮಾಹಿತಿ ದೊರಕಿದೆ. ಸದ್ಯ ಬ್ಯಾಂಕ್‌ನ ಒಳ ಸಭಾಂಗಣದಲ್ಲಿ […]

ನಟಿ ಸಿಂಧು ಮೆನನ್ ಹಾಗೂ ಸಹೋದರನ ವಿರುದ್ದ ಬ್ಯಾಂಕ್‌ಗೆ ವಂಚನೆಗೈದ ಆರೋಪ

Saturday, March 10th, 2018
sindhu-menon

ಬೆಂಗಳೂರು: ಬ್ಯಾಂಕ್‌ಗೆ ವಂಚನೆಗೈದ ಆರೋಪದಲ್ಲಿ ಬಹುಭಾಷಾ ನಟಿ ಸಿಂಧು ಮೆನನ್ ಹಾಗೂ ಆತನ ಸಹೋದರನ ವಿರುದ್ಧ ಆರ್‌ಎಂಸಿ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ ಎಂದು ವರದಿಯಾಗಿದೆ. ಆಡಿ ಕಾರು ಖರೀದಿಸುವ ನೆಪದಲ್ಲಿ ಸುಳ್ಳು ದಾಖಲೆ ನೀಡಿ ಬ್ಯಾಂಕ್ ಆಫ್ ಬರೋಡಾದಿಂದ 36.78 ಲಕ್ಷ ರೂ. ಸಾಲ ಪಡೆದ ಆರೋಪ ದಲ್ಲಿ ಸಿಂಧು ಮೆನನ್ ಸಹೋದರನೆಂದು ಪರಿಚಯಿಸಿಕೊಂಡಿರುವ ಕಾರ್ತಿಕೇಯನ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಈತನನ್ನು ನಂ.1 ಆರೋಪಿಯಾಗಿ ಪರಿಗಣಿಸಲಾಗಿದೆ ಎಂದು ತಿಳಿದುಬಂದಿದೆ. ಆರೋಪಿ ಕಾರ್ತಿಕೇಯನ್ ಬ್ಯಾಂಕ್‌ನಿಂದ ಸಾಲ […]