ಪತಿಯೇ ಪತ್ನಿಯ ಕೊಲೆಗೆ ಎರಡು ಲಕ್ಷ ರೂಪಾಯಿ ಅಡ್ವಾನ್ಸ್ ಕೊಟ್ಟಿದ್ದ

Thursday, July 22nd, 2021
Vishala Ganiga

ಉಡುಪಿ:  ವಿಶಾಲ ಗಾಣಿಗ ಕೊಲೆ ಪ್ರಕರಣವನ್ನು ಪೊಲೀಸರು 10 ದಿನದೊಳಗೆ ಬೇಧಿಸಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪತಿಯೇ ಪತ್ನಿಯ ಕೊಲೆಗೆ ಎರಡು ಲಕ್ಷ ರೂಪಾಯಿ ಅಡ್ವಾನ್ಸ್ ಕೊಟ್ಟಿರುವುದು ಪೊಲೀಸರ ತನಿಖೆಯಿಂದ ಬಯಲಾಗಿದೆ. ನೇಪಾಳ ದೇಶದ ಗಡಿ ಪ್ರದೇಶದಲ್ಲಿ ಸುಪಾರಿ ಹಂತಕ ಶ್ರೀ ಸ್ವಾಮಿನಾಥ ನಿಶಾದ (38) ನನ್ನು ಬಂಧಿಸಲಾಗಿದೆ. ಉಡುಪಿ ಜಿಲ್ಲೆ ಬ್ರಹ್ಮಾವರದ ಮಿಲನ್ ಅಪಾರ್ಟ್ ಮೆಂಟ್ ನಲ್ಲಿ ಜುಲೈ 12 ರಂದು ಸಂಜೆ ವಿಶಾಲ ಗಾಣಿಗ  ಕೊಲೆಯಾಗಿತ್ತು. ಮೈಮೇಲಿದ್ದ ಚಿನ್ನಾಭರಣವನ್ನು ಕದ್ದು ಆರೋಪಿ ಪ್ರಕರಣದ ದಿಕ್ಕು ತಪ್ಪಿಸಿ ಪರಾರಿಯಾಗಿದ್ದ. ಒಂದು […]

ಬ್ರಹ್ಮಾವರ ವಿಶಾಲಾ ಗಾಣಿಗ ಕೊಲೆಯಲ್ಲಿ ಪತಿಯೇ ಪ್ರಮುಖ ಸೂತ್ರದಾರ

Tuesday, July 20th, 2021
Vishala Ganiga

ಉಡುಪಿ : ಬ್ರಹ್ಮಾವರ ಕುಮಾರಗೋಡು ಎಂಬಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ ಪತ್ನಿ ವಿಶಾಲಾ ಗಾಣಿಗ (35) ರನ್ನು ಕೊಲೆ ಮಾಡಲು ಸಂಚು ರೂಪಿಸಿದ್ದಕ್ಕಾಗಿ ಉಡುಪಿ ಪೊಲೀಸರು ಪತಿ ರಾಮಕೃಷ್ಣ ಗಾಣಿಗ (42) ಎಂಬಾತನನ್ನು ಬಂಧಿಸಿದ್ದಾರೆ. ರಾಮಕೃಷ್ಣ ಅವರು ಎನ್‌ಆರ್‌ಐ ಉದ್ಯಮಿಯ ವೈಯಕ್ತಿಕ ಸಹಾಯಕರಾಗಿದ್ದು ದುಬೈನಲ್ಲಿ ನೆಲೆಸಿದ್ದಾರೆ. ಅವರು ತಮ್ಮ ಹೆಂಡತಿಯ ಅಂತಿಮ ವಿಧಿಗಳನ್ನು ನಿರ್ವಹಿಸಲು ದುಬೈನಿಂದ ಬ್ರಹ್ಮಾವರಕ್ಕೆ ಬಂದಿದ್ದರು. ವಿಶಾಲಾ ಗಾಣಿಗ ಕೊಲೆಯಲ್ಲಿ ಪತಿ ರಾಮಕೃಷ್ಣ ಗಾಣಿಗ ಪ್ರಮುಖ ವ್ಯಕ್ತಿ ಎಂದು ತೋರಿಸಿದ ಪುರಾವೆಗಳನ್ನು ನಾವು ಪಡೆದಿದ್ದೇವೆ. ಆದ್ದರಿಂದ ಅವರನ್ನು […]

ನಾಯಿಯನ್ನು ಬೆನ್ನಟ್ಟಿ ಮನೆಯ ಕೋಣೆಯೊಳಗೆ ನುಗ್ಗಿದ ಚಿರತೆ

Sunday, March 21st, 2021
chita

ಬ್ರಹ್ಮಾವರ : ಚಿರತೆಯೊಂದು ರವಿವಾರ ನಸುಕಿನ ವೇಳೆ ಮನೆಯ ಕೋಣೆ ಯೊಳಗೆ ನುಗ್ಗಿದ್ದು ಅರಣ್ಯ ಇಲಾಖೆಯವರು ಕಾರ್ಯಾಚರಣೆ ಮೂಲಕ ಚಿರತೆಯನ್ನು ರಕ್ಷಿಸಿದ್ದಾರೆ.   ನೈಲಾಡಿ ಸಮೀಪ ಬೇಟೆ ಅರಸಿ ನಾಡಿಗೆ ಬಂದ ಚಿರತೆ ಸಾಕು ನಾಯಿಯನ್ನು ಅಟ್ಟಿಸಿಕೊಂಡು ಬಂದಾಗ, ಹೆದರಿದ ನಾಯಿ ಮನೆಯ ಕೋಣೆಯೊಳಗೆ ನುಗ್ಗಿ ಸೇರಿಕೊಂಡಿತು. ನಾಯಿಯನ್ನು ಅಟ್ಟಿಸಿಕೊಂಡು ಚಿರತೆಯು ಕೋಣೆಯೊಳಗೆ ಸೇರಿಕೊಂಡಿತು. ಕೋಣೆಯೊಳಗೆ ಸದ್ದು ಕೇಳಿ ಮನೆಯವರು ಎಚ್ಚರಗೊಂಡು ಕೋಣೆಯ ಬಾಗಿಲು ಹಾಕಿದರು. ನಂತರ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಶಂಕರನಾರಾಯಣ ವಲಯ ಅರಣ್ಯಾಧಿಕಾರಿ ಚಿದಾನಂದಪ್ಪ ಮಾರ್ಗದರ್ಶನದಲ್ಲಿ […]

ಪಕ್ಕದ ಮನೆಯ ಮಹಿಳೆಯೊಂದಿಗೆ ಲವ್ ಅಪೈರ್. ವ್ಯಕ್ತಿಯ ಕೊಲೆ ಮಾಡಿದ ಆರು ಜನರ ಬಂಧನ

Tuesday, February 16th, 2021
brammavar Murder

ಬ್ರಹ್ಮಾವರ : ಪಕ್ಕದ ಮನೆಯ ಮಹಿಳೆಯೊಂದಿಗೆ ಲವ್ ಅಪೈರ್ ಇಟ್ಟುಕೊಂಡಿದ್ದ ಯುವಕನನ್ನು ಪಶ್ನಿಸಿದಕ್ಕೆ ಗೆಳೆಯರೊಂದಿಗೆ ಸೇರಿ ವ್ಯಕ್ತಿಯನ್ನು ಕೊಲೆ ಮಾಡಿದ ಪ್ರಕರಣಕ್ಕೆ ಸಂಭಂದಿಸಿದಂತೆ  ಅಪರಾಧ ಮಾಡಿದ 24 ಗಂಟೆಯೊಳಗೆ ಆರು ಜನರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಗೌತಮ್ (27), ಮನೋಜ್ ಭಂಡಾರಿ (30), ಧನುಷ್ (27), ಚೇತನ್ ಕುಮಾರ್ (24), ತಿಲಕ್ ರಾಜ್ (36) ಮತ್ತು ಸಿದ್ಧಾರ್ಥ್ ಎಂದು ಗುರುತಿಸಲಾಗಿದೆ. ಸಿದ್ಧಾರ್ಥ್ ಹೊರತುಪಡಿಸಿ ಉಳಿದವರೆಲ್ಲರೂ ಮಲ್ಪೆ ನಿವಾಸಿಗಳಾಗಿದ್ದರೆಂದು ತಿಳಿದು ಬಂದಿದೆ. ಗುಡ್ಡೆಯಂಗಡಿ ಬಳಿಯ ಹೊಸೂರಿನಲ್ಲಿ ನವೀನ್‌‌ ನಾಯ್ಕ್  […]

ದೊಡ್ಡ ಕೊಂಬಿನ ಜಿಂಕೆ ದಾಳಿ ಗೊಳಗಾಗಿದ್ದ ವ್ಯಕ್ತಿ ಸಾವು

Tuesday, January 12th, 2021
deer

ಕೋಟ :  ಮೋಟಾರುಬೈಕ್‌ನಲ್ಲಿ ಹೋಗುತಿದ್ದಾಗ ರಸ್ತೆಯ ಹಾಡಿಯಿಂದ ದೊಡ್ಡ ಕೊಂಬಿನ ಎರಡು ಜಿಂಕೆಗಳು ಹಠಾತ್ತನೆ  ಮೈಮೇಲೆ ಬಿದ್ದಾಗ, ಮೋಟಾರು ಸೈಕಲ್ ಸಮೇತ ರಸ್ತೆ ಉರುಳಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ರಾಮ (22) ಎಂಬ ಯುವಕ ರವಿವಾರ ಮನೆಯಲ್ಲಿ ಮೃತಪಟ್ಟಿದ್ದಾರೆ. ಕಳೆದ ಡಿ.28ರಂದು ಸಂಜೆ 7:10ರ ಸುಮಾರಿಗೆ ಸಾಬರಕಟ್ಟೆ ಯಿಂದ ಕಾರ್ಜಳ್ಳಿ ಕಡೆಗೆ ರಾಮ ಅವರ ಮೈಮೇಲೆ ಬಿದ್ದ ಜಿಂಕೆಗಳು ಕಾಡಿನಲ್ಲಿ ಮರೆಯಾದರೂ, ರಸ್ತೆ ಬಿದ್ದು ಗಾಯಗೊಂಡಿದ್ದ ಅವರನ್ನು ಕೂಡಲೇ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಚಿಕಿತ್ಸೆಯಲ್ಲಿರುತ್ತಾ ಅವರು […]

ಮೂರು ಮಕ್ಕಳೊಂದಿಗೆ ಮಹಿಳೆ ನಾಪತ್ತೆ

Monday, December 21st, 2020
Rasia

ಬ್ರಹ್ಮಾವರ :  ತನ್ನ ಮೂರು ಮಕ್ಕಳೊಂದಿಗೆ ಮಹಿಳೆಯೊಬ್ಬರು ನಾಪತ್ತೆಯಾಗಿರುವ ಘಟನೆ ಹಾರಾಡಿ ಗ್ರಾಮದ ಹೊನ್ನಾಳ ಎಂಬಲ್ಲಿ ನಡೆದಿದೆ. ನಾಪತ್ತೆಯಾದವರನ್ನು ಹೊನ್ನಾಳ ಬಕ್ಕಪಟ್ಟಣ ನಿವಾಸಿ ಮುಹಮ್ಮದ್ ಖಲೀಲ್ ಎಂಬವರ ಪತ್ನಿ ರಾಸಿಯಾ (32), ಮಕ್ಕಳಾದ ಪಾತಿಮಾ ನಶ್ರಾ (11), ಅಬ್ದುಲ್ ಮುತ್ತಾಹೀರ್ (7), ಆಯಿಷಾ ಝಿಫ್ರಾ (3) ಎಂದು ಗುರುತಿಸಲಾಗಿದೆ. ರಾಸಿಯಾ ಡಿ.18ರಂದು ಬೆಳಗ್ಗೆ ತನ್ನ ಮೂರು ಮಕ್ಕಳೊಂದಿಗೆ ತವರು ಮನೆಯಾದ ಕುಂದಾಪುರದ ಕಂಡ್ಲೂರಿಗೆ ಹೋಗುವುದಾಗಿ ಹೇಳಿ ಹೋದವರು ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಲಾಡ್ ಶೇಖರ್ ಪೂಜಾರಿ ಬ್ರಹ್ಮಾವರ ನಿಧನ

Tuesday, June 9th, 2020
Sjekar-poojary

ಮುಂಬಯಿ : ಕಾಂದಿವಲಿ ಪೂರ್ವದ ಠಾಕೂರ್ ಕಾಲೇಜಿನ ಕ್ಯಾಂಟೀನ್ ಮಾಲಕ ಶೇಖರ್ ಪೂಜಾರಿ ಬ್ರಹ್ಮಾವರ (58) ಜೂನ್ 7ರಂದು ರಾತ್ರಿ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ಶೇಖರ್ ಪೂಜಾರಿಯವರು ಮಲಾಡ್ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿಯ ಸ್ಥಾಪಕ ಸದಸ್ಯರು. ಬಿಲ್ಲವರ ಅಸೋಸಿಯೇಷನ್ ಮಲಾಡ್ ಸ್ಥಳೀಯ ಕಚೇರಿಯ ಉಪ ಕಾರ್ಯಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದರು. ಹಲವಾರು ಸಾಮಾಜಿಕ ಧಾರ್ಮಿಕ ಕಾರ್ಯಕ್ರಮಗಳಿಗೆ ದೇಣಿಗೆ ನೀಡುತ್ತಾ, ಸಮಾಜಪರ ಸೇವೆ ಮಾಡುತ್ತಿದ್ದರು.ಯಕ್ಷಗಾನದ ಅಭಿಮಾನಿ ಆಗಿದ್ದ ಇವರು, ವರಮಹಾಲಕ್ಷ್ಮಿ ಪೂಜಾ ಸಮಿತಿಯ ದಶಮಾನೋತ್ಸವ ಕಾರ್ಯಕ್ರಮಕ್ಕೆ ಸಮಿತಿಯ ಸದಸ್ಯರಿಂದಲೇ ಯಕ್ಷಗಾನ ಮಾಡುವಂತೆ […]

ಆಳ್ವಾಸ್ ವಿದ್ಯಾರ್ಥಿಗಳಿಂದ ಕಲಿಯೋಣ ಕಂಪ್ಯೂಟರ್, ಗ್ರಾಮೀಣ ವಿಧ್ಯಾರ್ಥಿಗಳ ಕಂಪ್ಯೂಟರ್ ತರಬೇತಿ

Thursday, October 31st, 2019
Brahmavara

ಬ್ರಹ್ಮಾವರ : ಮಿಜಾರಿನ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜು ಕಂಪ್ಯೂಟರ್ ವಿಭಾಗದ ವಿಧ್ಯಾರ್ಥಿಗಳಿಂದ ‘ಕಲಿಯೋಣ ಕಂಪ್ಯೂಟರ್, ಗ್ರಾಮೀಣ ವಿಧ್ಯಾರ್ಥಿಗಳ ಕಂಪ್ಯೂಟರ್ ತರಬೇತಿ’ ಶಿಬಿರವು ಬ್ರಹ್ಮಾವರದ ಜಾನುವಾರಕಟ್ಟೆ ಸರ್ಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಳ್ಳಲಾಗಿತ್ತು. ಎರಡು ದಿನಗಳ ಶಿಬಿರವನ್ನು ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ.ಪೀಟರ್ ಫೆರ್ನಾಂಡಿಸ್ ಉದ್ಘಾಟಿಸಿದರು. ಆಳ್ವಾಸ್ ಶಿಕ್ಷಣ ಸಂಸ್ಥೆಯು ಸಾಮಾಜಿಕ ಕಳಕಳಿ ಇರುವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು, ಪ್ರತೀ ವರ್ಷ ಎಲ್ಲಾ ವಿಭಾಗದ ವಿದ್ಯಾರ್ಥಿಗಳು ಈ ತರಹದ ಕಾರ್ಯಕ್ರಮದಲ್ಲಿ ಆಯೋಜಿಸುತ್ತಾರೆ. ಕಂಪ್ಯೂಟರ್ ವಿಜ್ಞಾನ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳು ಸತತ 7 […]

ಜೋಮ್ಲು ತೀರ್ಥ ಜಲಪಾತಕ್ಕೆ ತೆರಳಿದ್ದ ಯುವಕ ಕಾಲುಜಾರಿ ನೀರುಪಾಲು

Monday, October 28th, 2019
Sachin-Kumar

ಉಡುಪಿ : ಹೆಬ್ರಿ ಸಮೀಪದ ಸಂತೆಕಟ್ಟೆಯ ಜೋಮ್ಲು ತೀರ್ಥ ಜಲಪಾತಕ್ಕೆ ತೆರಳಿದ್ದ ಯುವಕನೋರ್ವ ನೀರುಪಾಲಾಗಿರುವ ಘಟನೆ ರವಿವಾರ ಸಂಜೆ ವೇಳೆ ನಡೆದಿದೆ. ನಾಪತ್ತೆಯಾದ ಯುವಕನನ್ನು ಬ್ರಹ್ಮಾವರ ಸಮೀಪದ ಕಡೂರು ಗಣಪೆ ನಿವಾಸಿ ಶೇಖರ್ ಶೆಟ್ಟಿ ಎಂಬವರ ಪುತ್ರ ಸಚಿನ್ ಕುಮಾರ್ ಶೆಟ್ಟಿ (24) ಎಂದು ಗುರುತಿಸಲಾಗಿದೆ. ಸಚಿನ್ ಸೇರಿದಂತೆ ಏಳು ಮಂದಿ ಜೋಮ್ಲು ತೀರ್ಥಕ್ಕೆ ತೆರಳಿದ್ದಾರೆ ಎನ್ನಲಾಗಿದ್ದು, ಈ ವೇಳೆ ಸಚಿನ್ ಕಾಲುಜಾರಿ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದು ನಂತರ ಈತ ಸುಮಾರು ದೂರ ಈಜಿಕೊಂಡು ಹೋಗಿರುವುದು ಇತರರು ನೋಡಿದ್ದಾರೆ […]

ಬ್ರಹ್ಮಾವರ : 10ನೇ ವರ್ಷದ ಕಿಶೋರ ಯಕ್ಷಗಾನಕ್ಕೆ ವಿದ್ಯುಕ್ತ ತೆರೆ

Tuesday, December 26th, 2017
yakshagana

ಬ್ರಹ್ಮಾವರ:ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಯಕ್ಷಗಾನ ಅತ್ಯುತ್ತಮ ಮಾಧ್ಯಮ. ಈ ಹಿನ್ನಲೆಯಲ್ಲಿ ಉಡುಪಿ ವಿಧಾನಸಭಾ ವ್ಯಾಪ್ತಿಯಲ್ಲಿ 11 ವರ್ಷಗಳ ಹಿಂದೆ ಪ್ರಾರಂಭಿಸಲಾದ ಹೈಸ್ಕೂಲ್ ವಿದ್ಯಾರ್ಥಿಗಳಿಗೆ ಯಕ್ಷಶಿಕ್ಷಣ ಕಾರ್ಯಕ್ರಮದ ಹತ್ತನೇ ವರ್ಷದ ಕಿಶೋರ ಯಕ್ಷಗಾನ ರವಿವಾರ ಇಲ್ಲಿ ವಿದ್ಯುಕ್ತವಾಗಿ ಮುಕ್ತಾಯಗೊಂಡಿತು. ಕಿಶೋರ ಯಕ್ಷಗಾನ ದಶಮಾನೋತ್ಸವ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಮಾಜಿ ಶಾಸಕ ಹಾಗೂ ಯಕ್ಷಶಿಕ್ಷಣದ ಸ್ಥಾಪಕ ಕೆ.ರಘುಪತಿ ಭಟ್ ಮಾತನಾಡಿ, ತಾನು ಶಾಸಕನಾಗಿ ಆರಂಭಿಸಿದ ಈ ಯೋಜನೆ ಪ್ರಕೃತ ಶಾಸಕರಾದ ಪ್ರಮೋದ್ ಮಧ್ವರಾಜ್‌ರ ನೇತೃತ್ವದಲ್ಲಿ ಯಶಸ್ವಿಯಾಗಿ ಮುಂದುವರಿದಿರುವುದು ಸಂತೋಷದ ವಿಷಯ […]