ಎನ್ಎಂಪಿಟಿ ಗುತ್ತಿಗೆ ಬೋಟಿಗೆ ಗೆ ಸಿಲುಕಿದ್ದ ಬಲೆ ತೆಗೆಯುತ್ತಿದ್ದ ವ್ಯಕ್ತಿ ಸಮುದ್ರದಲ್ಲಿ ಮುಳುಗಿ ಸಾವು
Tuesday, August 11th, 2020ಪಣಂಬೂರು: ನವಮಂಗಳೂರು ಬಂದರಿನಲ್ಲಿರುವ ಮಾಲಿನ್ಯ ಸ್ವಚ್ಚಗೊಳಿಸುವ ಗುತ್ತಿಗೆ ಬೋಟೊಂದರ ಪ್ರೊಫೈಲ್ಲರ್ ಗೆ ಸಿಲುಕಿದ್ದ ಬಲೆ ತೆಗೆಯಲು ಹೋದ ವ್ಯಕ್ತಿಯೊಬ್ಬ ಸಮುದ್ರದಲ್ಲಿ ಮುಳುಗಿ ಮೃತಪಟ್ಟ ಘಟನೆ ನವಮಂಗಳೂರು ಬಂದರಿನಲ್ಲಿ ಮಂಗಳವಾರ ನಡೆದಿದೆ. ಬೈಕಂಪಾಡಿ ಸಮೀಪದ ಮೀನಕಳಿಯ ನಿವಾಸಿ ಪ್ರದೀಪ್(42) ಮೃತಪಟ್ಟವರು. ಮಂಗಳವಾರ ಮುಂಜಾನೆ ಬೋಟಿನ ಗುತ್ತಿಗೆದಾರ ಕಂಪನಿಯ ಸಿಬಂದಿ ಪ್ರದೀಪನನ್ನು ಬಲೆ ತೆಗೆಯಲು ಕರೆದುಕೊಂಡು ಹೋಗಿದ್ದರು ಎನ್ನಲಾಗಿದೆ. ಆದರೆ ನೀರಿನಲ್ಲಿ ಮುಳುಗುವಾಗ ಸಂದರ್ಭ ಸೂಕ್ತ ರಕ್ಷಣಾ ವ್ಯವಸ್ಥೆ ನೀಡದೆ ಈ ಘಟನೆ ನಡೆದಿರಬಹುದು ಎಂದು ಪೊಲೀಸರು ಶಂಕಿಸಿದ್ದು ಐಪಿಸಿ […]