ಕೂಲಿ ಕಾರ್ಮಿಕನ ಮೃತ ದೇಹ ತಳಂಗರೆಯ ಬಾವಿಯಲ್ಲಿ ಪತ್ತೆ

Tuesday, December 5th, 2023
ಕೂಲಿ ಕಾರ್ಮಿಕನ ಮೃತ ದೇಹ ತಳಂಗರೆಯ ಬಾವಿಯಲ್ಲಿ ಪತ್ತೆ

ಕಾಸರಗೋಡು : ತಮಿಳುನಾಡು ಮೂಲದ ಕೂಲಿ ಕಾರ್ಮಿಕನ ಮೃತ ದೇಹ ಮಂಗಳವಾರ ನಗರದ ತಳಂಗರೆಯ ಬಾವಿಯೊಂದರಲ್ಲಿ ಪತ್ತೆಯಾಗಿದೆ. ತಮಿಳುನಾಡು ತಿರುವಣ್ಣ ಮಲೈ ನ ಭೂಮಿನಾಥ್ (27) ಮೃತ ಪಟ್ಟ ಕಾರ್ಮಿಕ. ಭೂಮಿನಾಥ್ ಕಾಸರಗೋಡು ಪರಿಸರದಲ್ಲಿ ಕೂಲಿ ಕೆಲಸ ನಿರ್ವ ಹಿಸುತ್ತಿದ್ದರು. ಇವರು ವಾಸವಿದ್ದ ವಸತಿ ಗೃಹ ಸಮೀಪದ ಬಾವಿಯಲ್ಲಿ ಮಂಗಳವಾರ ಬೆಳಿಗ್ಗೆ ಮೃತ ದೇಹ ಪತ್ತೆಯಾಗಿದೆ. ಅಗ್ನಿ ಶಾಮಕ ದಳದ ಸಿಬಂದಿ ಗಳು ಮೃತ ದೇಹವನ್ನು ಮೇಲಕ್ಕೆ ತ್ತಿದ್ದು, ಬಳಿಕ ಮೃತ ದೇಹವನ್ನು ಮಹಜರು ನಡೆಸಿ, ಕಾಸರಗೋಡು […]

ವ್ಯಕ್ತಿಯನ್ನು ಕೊಲೆಗೈದು ಪೊದೆಗೆ ಎಸೆದ ಓರ್ವನ ಬಂಧನ

Wednesday, October 4th, 2023
Habeeb

ಕಾಸರಗೋಡು : ಕೊಲೆ ಪ್ರಕರಣದ ಆರೋಪಿಯೋರ್ವನ ತಲೆಗೆ ಕಲ್ಲು ಎತ್ತಿ ಹಾಕಿ ಕೊಲೆಗೈದು ಮೃತ ದೇಹವನ್ನು ಪೊದೆಗೆ ಎಸೆದ ಘಟನೆಗೆ ಸಂಬಂಧಪಟ್ಟಂತೆ ಓರ್ವನನ್ನು ಕುಂಬಳೆ ಠಾಣಾ ಪೊಲೀಸರು ಬಂಧಿಸಿದ್ದಾರೆ. ಕುಂಬಳೆ ಶಾಂತಿಪಳ್ಳದ ಅಬ್ದುಲ್ ರಶೀದ್ (42) ಎಂಬಾತನನ್ನು ಕೊಲೆ ಮಾಡಿದ ಆರೋಪಿ, ಅಭಿಲಾಷ್ ಯಾನೆ ಹಬೀಬ್ (34 ) ಬಂಧಿತ ಆರೋಪಿ. 2019 ರ ಅಕ್ಟೋಬರ್ 18 ರಂದು ಉಳಿಯತ್ತಡ್ಕದ ಶಾನ್ ವಾಸ್ ನನ್ನು ಕೊಲೆಗೈದು ಬಾವಿಗೆಸದ ಪ್ರಕರಣದ ಆರೋಪಿಯಾಗಿದ್ದ ರಶೀದ್ ನ ಮೃತದೇಹ ಸೋಮವಾರ ಬೆಳಿಗ್ಗೆ […]

ಮಲ್ಪೆ ಬೀಚ್‌ನಲ್ಲಿ ನಾಪತ್ತೆಯಾಗಿದ್ದ ಯುವತಿಯ ಮೃತ ದೇಹ ಪತ್ತೆ

Monday, August 2nd, 2021
Dejamma

ಮಲ್ಪೆ : ಮೈಸೂರಿನಿಂದ ಪ್ರವಾಸ ಬಂದಿದ್ದ ತಂಡದಲ್ಲಿ ಮಲ್ಪೆ ಬೀಚ್‌ನಲ್ಲಿ ರವಿವಾರ ನಾಪತ್ತೆಯಾಗಿದ್ದ ಯುವತಿಯ ಮೃತ ದೇಹ ಪತ್ತೆಯಾಗಿದೆ. ಕೊಡಗು ಮೂಲದ ಮೈಸೂರು ನಿವಾಸಿ ದೇಚಮ್ಮ ಯು.ಜೆ.(20) ರವಿವಾರ ನಾಪತ್ತೆಯಾಗಿದ್ದರು. ಈಕೆಯ ಜೊತೆ ಇದ್ದ ಸ್ನೆಹಿತರಾದ ಮೈಸೂರು ವಿಜಯಪುರದ ಎಂ.ಯು.ಶೈನಿ(20), ನವ್ಯ ಮಂದಣ್ಣ (20), ನಿಖಿಲ್ ಗೌಡ (20) ಎಂಬವರನ್ನು ಸ್ಥಳೀಯರು ರಕ್ಷಿಸಿದ್ದರು. ಇವರಲ್ಲಿ ತೀವ್ರ ಅಸ್ವಸ್ಥಗೊಂಡ ನಿಖಿಲ್ ಗೌಡ ಉಡುಪಿ ಖಾಸಗಿ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದಲ್ಲಿ ದಾಖಲಾಗಿದ್ದಾರೆ. ಇವರು  ಮಂಗಳೂರಿಗೆ ಬಂದಿದ್ದು ಮಂಗಳೂರಿನಿಂದ ಜು.31ರಂದು ಮಧ್ಯಾಹ್ನ ಮಲ್ಪೆ […]

ಕೊರೊನಾ ಸೋಂಕಿತನ ಮೃತ ದೇಹವನ್ನು ತಾನೇ ಆಂಬುಲೆನ್ಸ್ ಚಲಾಯಿಸಿ ಸ್ಮಶಾನ ತಲುಪಿಸಿದ ಶಾಸಕ ರೇಣುಕಾಚಾರ್ಯ

Tuesday, June 1st, 2021
renukacharya

ದಾವಣಗೆರೆ:   ಕೊರೊನಾ ಸೋಂಕಿತನ ಮೃತ ದೇಹ ವನ್ನು ಸ್ವತಃ ಆಂಬುಲೆನ್ಸ್ ಚಲಾಯಿಸಿಕೊಂಡು ಸ್ಮಶಾನಕ್ಕೆ ಕೊಂಡೊಯ್ದು ಶಾಸಕ ರೇಣುಕಾಚಾರ್ಯ ಸಂಸ್ಕಾರ ನಡೆಸಿದ ಘಟನೆ ಹೊನ್ನಾಳಿಯಲ್ಲಿ ನಡೆದಿದೆ. ಕರೊನಾದಿಂದ ಮೃತಪಟ್ಟ ಯುವಕನ ದೇಹವನ್ನು ತರದಂತೆ ಗ್ರಾಮಸ್ಥರು ವಿರೋಧಿಸಿದ್ದರು. ಈ ವಿಷಯವನ್ನು ತಿಳಿದ ಶಾಸಕ ರೇಣುಕಾಚಾರ್ಯ ಅವರು ಕೊನೆಗೆ ತಾವೇ ಆಂಬುಲೆನ್ಸ್ ಚಲಾಯಿಸಿಕೊಂಡು ಹೊನ್ನಾಳಿಯ ಸ್ಮಶಾನಕ್ಕೆ ಶವವನ್ನು ಕೊಂಡೊಯ್ದು ಅಲ್ಲಿ ಕುಟುಂಬಸ್ಥರ ಸಮ್ಮುಖ ಶವಸಂಸ್ಕಾರ ಮಾಡಿಸಿದ್ದಾರೆ. ಹೊನ್ನಾಳಿಯಲ್ಲಿ ನೆಲೆಸಿದ ಆಂಧ್ರಪ್ರದೇಶ ಮೂಲದ ಕುಟುಂಬವೊಂದಕ್ಕೆ  ಸೇರಿದ 31 ವರ್ಷದ ವ್ಯಕ್ತಿ ಕರೊನಾ ಸೋಂಕಿತನಾಗಿ ಚಿಕಿತ್ಸೆ ಪಡೆಯುತ್ತಿದ್ದು  ಚಿಕಿತ್ಸೆ […]

ಕೋವಿಡ್ ಸೋಂಕಿತ ವ್ಯಕ್ತಿಯ ಮೃತ ದೇಹ ಅದಲು ಬದಲು, ಮೃತ ವ್ಯಕ್ತಿಯ ಸಂಬಂಧಿಕರ ಆಕ್ರೋಶ

Monday, May 17th, 2021
Dead body

ಕಾರ್ಕಳ: ಆಸ್ಪತ್ರೆ ಸಿಬಂದಿಯ ಎಡವಟ್ಟಿನಿಂದ ಕೋವಿಡ್ ಸೋಂಕಿನಿಂದ ಮೃತ ಪಟ್ಟ ವ್ಯಕ್ತಿಯ ಶವ ಬದಲಾಗಿರುವುದು ಸಂಬಂಧಿಕರಿಗೆ ತಿಳಿದು ಶವವನ್ನು ವಾಪಸ್ ಕಳಿಸಿದ ಘಟನೆ ಸೋಮವಾರ ನಡೆದಿದೆ. ಅಂತ್ಯ ಸಂಸ್ಕಾರಕ್ಕೆಂದು ಕಾರ್ಕಳದ ಕರಿಯಕಲ್ಲು ಸ್ಮಶಾನಕ್ಕೆ ಮೃತ ದೇಹ ತಂದಿದ್ದ ವೇಳೆ  ಈ ಘಟನೆ ನಡೆದಿದೆ. ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದ ಶೃಂಗೇರಿ ಮೂಲದ 44 ರ ವಯಸ್ಸಿನ ವ್ಯಕ್ತಿ ಕಾರ್ಕಳದ ತನ್ನ ಪತ್ನಿ ಮನೆಗೆ ಬಂದಿದ್ದ ಅವರಿಗೆ ಸೋಂಕು ದೃಢ ಪಟ್ಟಿತ್ತು. ಮಂಗಳೂರು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು.ಚಿಕಿತ್ಸೆ […]

ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟದಲ್ಲಿಇಬ್ಬರು ಮಹಿಳೆಯರ ಮೃತ ದೇಹ ಪತ್ತೆ

Friday, February 5th, 2021
Dead Body

ಉಜಿರೆ  : ಇಬ್ಬರು ಅಪರಿಚಿತ ಮಹಿಳೆಯರ ಮೃತದೇಹ ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟದ ಕಿಂಡಿ ಅಣೆಕಟ್ಟಿನ ಬಳಿ ಗುರುವಾರ ಪತ್ತೆಯಾಗಿವೆ. ಸ್ನಾನ ಘಟ್ಟದ ಸಿಬ್ಬಂದಿ  ಅವರು ಬೆಳಗ್ಗೆ ಕರ್ತವ್ಯಕ್ಕೆ ಹಾಜರಾಗಿದ್ದ ವೇಳೆ ಯಾತ್ರಾರ್ಥಿಗಳು ಬಂದು, ಅವರ ಬಳಿ ಮೃತದೇಹ ಇರುವುದಾಗಿ ತಿಳಿಸಿದ್ದಾರೆ. ಅಂದಾಜು 40 ರಿಂದ 45 ವರ್ಷ ಮತ್ತು 20 ರಿಂದ 25 ವರ್ಷ ಪ್ರಾಯದ ಅಪರಿಚಿತ ಮಹಿಳೆಯರ ಮೃತದೇಹ ಕವುಚಿ ಮಲಗಿದ ಸ್ಥಿತಿಯಲ್ಲಿ ನೀರಿನಲ್ಲಿ ಕಂಡುಬಂದಿತ್ತು.‌ ಈ ಇಬ್ಬರು ಅಪರಿಚಿತ ಮಹಿಳೆಯರು ಯಾವುದೋ ಕಾರಣಕ್ಕೆ ನೀರಿಗೆ ಹಾರಿ ಅಥವಾ ಕಾಲು […]

ಕಾಲು ಜಾರಿ ನೀರು ಪಾಲಾಗಿದ್ದ ಯುವಕನ ಮೃತ ದೇಹ ಪತ್ತೆ

Monday, October 28th, 2019
sachin

ಉಡುಪಿ : ಹೆಬ್ರಿ ಸಂತೆಕಟ್ಟೆಯ ಜೋಮ್ಲು ತೀರ್ಥ ಜಲಪಾತಕ್ಕೆ ತೆರಳಿ ನೀರು ಪಾಲಾಗಿದ್ದ ಬ್ರಹ್ಮಾವರ ಸಮೀಪದ ಕೊಕ್ಕರ್ಣೆಯ ಕಾಡೂರು ಗಣಪೆ ನಿವಾಸಿ ಶೇಖರ್ ಶೆಟ್ಟಿ ಎಂಬುವರ ಪುತ್ರ ಸಚಿನ್ ಕುಮಾರ್ ಶೆಟ್ಟಿ (24) ಅವರ ಮೃತದೇಹ ಇಂದು ಪತ್ತೆಯಾಗಿದೆ. ಸಚಿನ್ ಬೆಂಗಳೂರಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ದೀಪಾವಳಿಯ ರಜೆಗೆ ಊರಿಗೆ ಬಂದಿದ್ದರು. ಭಾನುವಾರದಂದು ಸಚಿನ್ ಸೇರಿದಂತೆ ಏಳು ಮಂದಿ ಜೋಮ್ಲು ತೀರ್ಥಕ್ಕೆ ತೆರಳಿದ್ದು, ಈ ವೇಳೆ ಸಚಿನ್ ಕಾಲು ಜಾರಿ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾನೆ. ನಂತರ ಈತ […]

ಬಾವಿಯಲ್ಲಿ ಇಬ್ಬರು ಸಹೋದರರ ಮೃತ ದೇಹಗಳು ಪತ್ತೆ

Saturday, October 8th, 2016
kasargod

ಕಾಸರಗೋಡು: ಕಳೆದ ಒಂದು ದಿನದಿಂದ ನಾಪತ್ತೆಯಾಗಿದ್ದ ಚೆರ್ವತ್ತೂರು ಚೀಮೇನಿ ಚೆಲುವಕ್ಕೋಡ್ ನ ಸತೀಶ್ (40) ಮತ್ತು ಸಹೋದರ ಸಜಿತ್ (36) ಮೃತದೇಹಗಳು ಗುರುವಾರ ರಾತ್ರಿ ಬಾವಿಯಲ್ಲಿ ಪತ್ತೆಯಾಗಿವೆ. ಚೆರ್ವತ್ತೂರು ಚೀಮೇನಿ ಚೆಲುವಕ್ಕೋಡ್ ಮೂಲದ ಸತೀಶ್ ಬಸ್ ಚಾಲನೆ ಮಾಡುತ್ತಿದ್ದು. ಸಜಿತ್ ಲಾರಿ ಚಾಲಕನಾಗಿದ್ದ. ಇವರಿಬ್ಬರು ಕಳೆದು ಒಂದು ದಿನದಿಂದ ಕಾಣೆಯಾಗಿದ್ದರು. ಮನೆಯವರ ಹುಡುಕಾಟದಲ್ಲಿ ದಾರಿ ಮಧ್ಯೆ ಇರುವ ಬಾವಿಯಲ್ಲಿ ಇಬ್ಬರ ಮೃತ ದೇಹಗಳು ಪತ್ತೆಯಾಗಿದ್ದು. ಇವರ ಸಾವಿಗೆ ನಿಖರವಾದ ಕಾರಣಗಳು ತಿಳಿದು ಬಂದಿಲ್ಲ. ಸುದ್ದಿ ತಿಳಿದು ಸ್ಥಳಕ್ಕೆ […]

ನಾಪತ್ತೆಯಾಗಿದ್ದ ಅಕ್ಷತಾಳ ಪ್ರಿಯಕರ ಮದನ್ ಮೃತ ದೇಹ ಹುಡುಕಾಟ

Tuesday, October 8th, 2013
akshata-an-madan

ಮಂಗಳೂರು: ರಥಬೀದಿ ಸರ್ಕಾರಿ ಪದವಿ ಕಾಲೇಜು ವಿದ್ಯಾರ್ಥಿನಿ ಅಕ್ಷತಾ ನಿಗೂಢ ಸಾವು ಪ್ರಕರಣಕ್ಕೆ ಸಂಬಂಧಿಸಿ ನಾಪತ್ತೆಯಾಗಿದ್ದ ಪ್ರಿಯಕರ ಮದನ್ ಮೃತ ದೇಹ ಮುಳಿಹಿತ್ಲು ಐಸ್ ಪ್ಲಾಂಟ್ ಸಮೀಪ ಇದೆ ಎಂಬ ಜ್ಯೋತಿಷಿಯೊಬ್ಬರ ಮಾಹಿತಿಯಂತೆ ಮನೆಯವರು ನಿನ್ನೆ ಹುಡುಕಾಟಕ್ಕೆ ಇಳಿ  ಅಕ್ಷತಾಳ ಪ್ರಿಯಕರ ಮದನ್ ಕಳೆದ ಕೆಲ ವಾರಗಳಿಂದ ನಾಪತ್ತೆಯಾಗಿದ್ದು, ಈ ಬಗ್ಗೆ ಆತನ ಮನೆಯವರು ಜ್ಯೋತಿಷಿಗಳ ಮೊರೆ ಹೋಗಿದ್ದರು. ಈ ವೇಳೆ ಕನ್ಯಾನದ ಜ್ಯೋತಿಷಿಯೊಬ್ಬರು ಮದನ್ ಬದುಕುಳಿದಿಲ್ಲ, ಆತ ಕೂಡ ಸಾವನ್ನಪ್ಪಿದ್ದಾನೆ. ಅವನ ಮೃತದೇಹ ಅಕ್ಷತಾಳ ಶವ […]