ಮಂಗಳೂರು ಮಳೆಗೆ ಇಬ್ಬರು ಬಲಿ…ಡಿಸಿಯಿಂದ ಪರಿಹಾರದ ಚೆಕ್ ವಿತರಣೆ
Wednesday, May 30th, 2018ಮಂಗಳೂರು: ನಿನ್ನೆ ಸುರಿದ ಭಾರಿ ಮಳೆಗೆ ಇಬ್ಬರು ಬಲಿಯಾಗಿದ್ದರು. ಸಂತ್ರಸ್ತರ ಕುಟುಂಬಕ್ಕೆ ತಲಾ ಐದು ಲಕ್ಷ ರೂ. ಪರಿಹಾರದ ಚೆಕನ್ನು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ವಿತರಿಸಿದರು. ಮಹಾಮಳೆಗೆ ಉದಯನಗರದ ಮೋಹಿನಿ ಮತ್ತು ಕೊಡಿಯಾಲ್ ಬೈಲ್ನ ಮುಕ್ತಾಬಾಯಿ ಸಾವನ್ನಪ್ಪಿದರು. ಅವರ ಮೃತದೇಹ ಪೋಸ್ಟ್ ಮಾರ್ಟಂಗಾಗಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯ ಶವಗಾರದಲ್ಲಿ ಇರಿಸಲಾಗಿದೆ. ಜಿಲ್ಲಾಧಿಕಾರಿ ವೆನ್ಲಾಕ್ ಆಸ್ಪತ್ರೆ ಗೆ ತೆರಳಿ ಎರಡು ಕುಟುಂಬದವರಿಗೆ ಪರಿಹಾರದ ಚೆಕ್ ವಿತರಿಸಿದ್ದಾರೆ.