ನಂಬರ್ ಪ್ಲೇಟ್ ಇಲ್ಲದ ಕಾರಿನಲ್ಲಿ ಅನ್ಯಕೋಮಿನ ಜೋಡಿ, ಬಜರಂಗ ದಳ ಕಾರ್ಯಕರ್ತರಿಂದ ಪೊಲೀಸರಿಗೆ ದೂರು

Sunday, October 3rd, 2021
ನಂಬರ್ ಪ್ಲೇಟ್ ಇಲ್ಲದ ಕಾರಿನಲ್ಲಿ ಅನ್ಯಕೋಮಿನ ಜೋಡಿ, ಬಜರಂಗ ದಳ ಕಾರ್ಯಕರ್ತರಿಂದ ಪೊಲೀಸರಿಗೆ ದೂರು

ಮಂಗಳೂರು : ಅನ್ಯಕೋಮಿನ ಯುವಕ-ಯುವತಿಯರ ಜೋಡಿ ಚಿಲಿಂಬಿ ಗುಡ್ಡೆಯಲ್ಲಿ ಸುತ್ತಾಡುತ್ತಿರುವ ಬಗ್ಗೆ ಬಜರಂಗ ದಳ ಕಾರ್ಯಕರ್ತರು ಶಂಕೆ ವ್ಯಕ್ತಪಡಿಸಿ ಪೊಲೀಸರಿಗೆ ಮಾಹಿತಿ ನೀಡಿತ್ತು. ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದಿದ್ದಾರೆ. ನಂಬರ್ ಪ್ಲೇಟ್ ಇಲ್ಲದ ಕಾರಿನಲ್ಲಿ  ಯುವಕ-ಯುವತಿಯರ ತಂಡವೊಂದು ಸುತ್ತಾಡಲು ಚಿಲಿಂಬಿ ಗುಡ್ಡೆಗೆ ಬಂದಿದ್ದರು. ಇದನ್ನು ಗಮನಿಸಿದ ಬಜರಂಗದಳದ ಕಾರ್ಯಕರ್ತರು, ಪೊಲೀಸರಿಗೆ ಈ ಕುರಿತಂತೆ ಮಾಹಿತಿ ನೀಡಿದ್ದರು. ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಪೊಲೀಸರು, ವಿಚಾರಣೆ ನಡೆಸಿದ್ದರು

ಕಾಪು -ಬೆಳ್ಮಣ್ ಪರಿಸರದಲ್ಲಿ ನಕಲಿ ನೋಟ್‌ ಚಲಾವಣೆ ಮಾಡುತ್ತಿದ್ದ ದಾವಣಗೆರೆ ಮೂಲದ ಯುವಕ-ಯುವತಿ ವಶಕ್ಕೆ

Wednesday, September 18th, 2019
Rs-200

ಕಾಪು : ಬೆಂಗಳೂರು ನೋಂದಾವಣೆಯ ಕಾರಿನಲ್ಲಿ ಬಂದು ಕಾಪು ಹಾಗೂ  ಬೆಳ್ಮಣ್ ಪರಿಸರದಲ್ಲಿ  ಇನ್ನೂರು ರೂಪಾಯಿ ಮೌಲ್ಯದ ನಕಲಿ ನೋಟ್‌ನ್ನು ಚಲಾಯಿಸಿದ ದಾವಣಗೆರೆ ಮೂಲದ ಯುವಕ ಮತ್ತು ಯುವತಿಯನ್ನು ಪೊಲೀಸರು ಬುಧವಾರ ಕಾಪುವಿನಲ್ಲಿ ವಶಕ್ಕೆ ಪಡೆದುಕೊಂಡಿದ್ದಾರೆ. ಬೆಂಗಳೂರು ನೋಂದಾವಣೆಯ ಬ್ರೀಜಾ  ಕಾರಿನಲ್ಲಿ ದಾವಣಗೆರೆಯಿಂದ ಮಂಗಳೂರಿಗೆ ತೆರಳುತ್ತಿದ್ದ ಯುವ ಜೋಡಿಯೊಂದು ಲೆಮಿನಾ ಕ್ರಾಸ್‌ನ ಅಂಗಡಿಗೆ ತೆರಳಿ ಝೆರಾಕ್ಸ್ ನೋಟ್‌ನ್ನು ನೀಡಿ ತಿಂಡಿ ಪೊಟ್ಟಣ ಪಡೆದಿದ್ದರು. ಅದೇ ರೀತಿಯಲ್ಲಿ ನಿಟ್ಟೆಯಿಂದ ಬೆಳ್ಮಣ್ ವರೆಗಿನ ಹಲವು ಅಂಗಡಿಗಳಲ್ಲಿ ನೋಟನ್ನು ಚಲಾವಣೆ ಮಾಡಿದ್ದರು. ಕಾರ್ಕಳ ನಿಟ್ಟೆ […]