ಶ್ರೀ ಕ್ಷೇತ್ರ ತೌಡುಗೋಳಿ ʼಕಣ್ಣ್‌ ನಿಲಿಕೆ ತುವೋಡು ಅಪ್ಪೆ ದುರ್ಗಾ ದೇವಿನ್‌ʼ ಹಾಡು ರಿಲೀಸ್‌

Thursday, October 14th, 2021
Thoudugoli-Song

ಮಂಗಳೂರು : ವಿಜಯ ದಶಮಿಯ ಈ ಶುಭ ಸಂದರ್ಭದಲ್ಲಿ ತೌಡುಗೋಳಿ ಶ್ರೀ ದುರ್ಗಾದೇವಿ ಕ್ಷೇತ್ರದ ಕುರಿತಾದ ಭಕ್ತಿ ಪ್ರಧಾನ ಹಾಡು ಬಿಡುಗಡೆ ಮಾಡುವ ಅವಕಾಶ ಒದಗಿ ಬಂದಿರುವುದು ನನಗೆ ತಾಯಿ ದುರ್ಗಾದೇವಿ ಒದಗಿಸಿದ ಪುಣ್ಯ ಎಂದು ಕರ್ನಾಟಕ ಸರಕಾರದ ಅರೆ ಅಲೆಮಾರಿ ಹಾಗೂ ಅಲೆಮಾರಿ ನಿಗಮದ ಅಧ್ಯಕ್ಷರಾದ ಕೆ ರವೀಂದ್ರ ಶೆಟ್ಟಿ ಉಳಿದೊಟ್ಟು ಹೇಳಿದರು. ಅವರು ಶಿವಪ್ರಸಾದ್ ತೌಡುಗೋಳಿ ಸಾಹಿತ್ಯದಲ್ಲಿ ಮೆಗಾ ಮೀಡಿಯಾ ಎಂಟರ್‌ ಟೈನ್‌ಮೆಂಟ್ಸ್‌ ನಿಮಿಸಿದ ಸಂತೋಷ್‌ ಪುಚ್ಚೇರ್‌ ಹಾಡಿದ ʼಕಣ್ಣ್‌ ನಿಲಿಕೆ ತುವೋಡು ಅಪ್ಪೆ […]

ಜಾದೂಗಾರ ಕುದ್ರೋಳಿ ಗಣೇಶ್ ಗೆ 2020 ರ ವಿದ್ಯಾರತ್ನ ಪ್ರಶಸ್ತಿ

Friday, January 10th, 2020
ratnetsava

ಮಂಗಳೂರು : ನಾಡು ನುಡಿ ವೈಭವದ ರತ್ನೋತ್ಸವದ ಸಮಾಪನ ಕಾರ್ಯಕ್ರಮದಲ್ಲಿ ಅಂತರರಾಷ್ಟ್ರೀಯ ಖ್ಯಾತಿಯ ಜಾದೂಗಾರ ಕುದ್ರೋಳಿ ಗಣೇಶ್ ಗೆ 2020 ರ ವಿದ್ಯಾರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ರತ್ನೋತ್ಸವದ ಪ್ರಶಸ್ತಿಯ ಕಿರೀಟ ಅದು ಸಾಧನೆ ಮಾಡಿದವರನ್ನು ಮಾತ್ರ ಗುರುತಿಸುವ ಕಾರ್ಯಕ್ರಮವಲ್ಲ ಅದು ಸಂಸ್ಥೆಯ ಗೌರವವನ್ನು ಹೆಚ್ಚಿಸುವುದರ ಜೊತೆಗೆ ಇನ್ನಷ್ಟು ಸಾಧನೆಗಳಿಗೆ ಪ್ರೋತ್ಸಾಹ ನೀಡಿದೆ ಎಂದು ಸಮಾಪನ ಭಾಷಣ ಮಾಡಿದ ಮಂಗಳೂರು ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಪಿ.ಎಸ್ ಎಡಪಡಿತ್ತಾಯ ಹೇಳಿದರು. ನೂರು ವರ್ಷ ಬದುಕುವ ನಾವೆಲ್ಲರೂ ಪ್ರೀತಿಯಿಂದ, ಸಹನೆಯಿಂದ, […]

ಸಾಂಸ್ಕೃತಿಕ ದಿಬ್ಬಣದ ಭವ್ಯ ಸ್ವಾಗತದೊಂದಿಗೆ ರತ್ನೋತ್ಸವ ಉದ್ಘಾಟನೆ

Thursday, January 9th, 2020
rathnotsava

ಮಂಗಳೂರು : ದೇರಳಕಟ್ಟೆ ಬೆಳ್ಮ ಗ್ರಾಮ ಪಂಚಾಯತ್ ವಠಾರದಿಂದ ಪೂರ್ಣಕುಂಭ, ಮಂಗಳವಾದ್ಯ, ಚೆಂಡೆವಾದನ, ಕಂಸಾಳೆ, ಕಥಕ್ಕಳಿ, ಹಾಲಕ್ಕಿ, ವೀರಗಾಸೆ, ಕೀಲುಕುದುರೆ, ಹುಲಿವೇಷ, ಕರಗ ನೃತ್ಯ, ಗೊಂಬೆ ಕುಣಿತ, ಪೂಜಾ ಕುಣಿತ, ಬಣ್ಣದ ಕೊಡೆಗಳ ಜತೆಗೆ ಸಮ್ಮೇಳನಾಧ್ಯಕ್ಷ , ಹಿರಿಯ ಸಾಹಿತಿ ಪ್ರೊ.ಭುವನೇಶ್ವರಿ ಹೆಗಡೆ ಅವರನ್ನು ಕರೆತಂದು ವಿದ್ವಾನ್ ರಾಮಚಂದ್ರ ಉಚ್ಚಿಲ ವೇದಿಕೆಯಲ್ಲಿ ರತ್ನೋತ್ಸವ-2019-2020  ಉದ್ಘಾಟನೆ ಗೊಂಡಿತು. ಸಾಂಸ್ಕೃತಿಕ ದಿಬ್ಬಣ ಮೆರವಣಿಗೆಗೆ ಬೆಳ್ಮ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಿಜಯಾ ಕೃಷ್ಣಪ್ಪ ಪೂಜಾರಿ ಚಾಲನೆ ನೀಡಿದರು.  ದೇರಳಕಟ್ಟೆ ರತ್ನ ಎಜ್ಯುಕೇಷನ್‌ ಟ್ರಸ್ಟ್‌ […]

ದೇರಳಕಟ್ಟೆಯಲ್ಲಿ ಡಿ.15ರಂದು ನಾಡು ನುಡಿ ವೈಭವದ ‘ರತ್ನೋತ್ಸವ’

Thursday, December 13th, 2018
Ratnotsava 2018

ಮಂಗಳೂರು  : ವಿದ್ಯಾರತ್ನ ಆಂಗ್ಲ ಮಾಧ್ಯಮ ಶಾಲೆಯ ವತಿಯಿಂದ ದೇರಳಕಟ್ಟೆಯ ಗ್ರೀನ್ ಗ್ರೌಂಡ್  ನಲ್ಲಿ ಕರಾವಳಿ ಕರ್ನಾಟಕದ ಸಾಹಿತ್ಯ -ಸಾಂಸ್ಕೃತಿಕ ಸಮ್ಮೇಳನ ನಾಡು ನುಡಿ ವೈಭವದ ರತ್ನೋತ್ಸವವು ಡಿಸೆಂಬರ್ 15ರಂದು ನಡೆಯಲಿದೆ ಎಂದು ಸಂಸ್ಥೆಯ ಅಧ್ಯಕ್ಷ  ರವೀಂದ್ರ ಶೆಟ್ಟಿ ಉಳಿದೊಟ್ಟು ತಿಳಿಸಿದರು. ಮಂಗಳೂರಿನ ಪ್ರತಿಕಾ ಭವನದಲ್ಲಿ  ಸುದ್ದಿಗೋಷ್ಠಿಯಲ್ಲಿ ಮಾತನಾಡಿದ  ಅವರು ಡಿಸೆಂಬರ್ 15ರಂದು ಬೆಳಗ್ಗೆ 9ಕ್ಕೆ  ದೇರಳಕಟ್ಟೆ ಬೆಳ್ಮ ಪಂಚಾಯತ್ ವಠಾರದಿಂದ ಸಮ್ಮೇಳನಾಧ್ಯಕ್ಷರನ್ನು ಪೂರ್ಣ ಕುಂಭ ಸ್ವಾಗತದೊಂದಿಗೆ ಸಾಂಸ್ಕೃತಿಕ ದಿಬ್ಬಣದಲ್ಲಿ ವೇದಿಕೆಗೆ ಕರೆ ತರಲಾಗುವುದು. ವಿಜಯ ಕೃಷ್ಣಪ್ಪ ಪೂಜಾರಿ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. […]