ಲಾಕ್ ಡೌನ್ : ವ್ಯವಹಾರ ನಷ್ಟದಿಂದ ದಂಪತಿ ಆತ್ಮಹತ್ಯೆ

Wednesday, June 9th, 2021
Kadri Suicide

ಮಂಗಳೂರು : ವ್ಯವಹಾರ ನಷ್ಟದಿಂದ ದಂಪತಿ ಆತ್ಮಹತ್ಯೆ ಮಾಡಿಕೊಂಡ  ಘಟನೆ ನಗರದ ಕದ್ರಿ ಪಿಂಟೊ ಲೇನ್ ನಲ್ಲಿ  ಬುಧವಾರ ಬೆಳಕಿಗೆ ಬಂದಿದೆ. ಕದ್ರಿ ಪಿಂಟೋ ಲೇನ್ ನಿವಾಸಿಗಳಾದ ಸುರೇಶ್ ಮತ್ತು ವಾಣಿ ಆತ್ಮಹತ್ಯೆ ಮಾಡಿಕೊಂಡ ದಂಪತಿ ಎಂದು ಗುರುತಿಸಲಾಗಿದೆ. ಮಂಗಳವಾರ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಸುರೇಶ್ ಬಾವಿಗೆ ಹಾರಿದರೆ, ವಾಣಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆನ್ನಲಾಗಿದೆ. ವ್ಯವಹಾರ ನಷ್ಟದಿಂದ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಪೊಲೀಸ್ ಆಯುಕ್ತ ಶಶಿಕುಮಾರ್ ಭೇಟಿ ನೀಡಿದ್ದಾರೆ.