ಅನರ್ಹ ಶಾಸಕ ಹೆಚ್. ವಿಶ್ವನಾಥ್ ಬ್ಲೂ ಫಿಲಂ ಹೀರೋ : ಸಾ.ರಾ. ಮಹೇಶ್

Monday, September 23rd, 2019
blue-film

ಮೈಸೂರು : ಹೆಚ್. ವಿಶ್ವನಾಥ್ ಒಬ್ಬ ಬ್ಲೂ ಬಾಯ್. ಬ್ಲೂ ಫಿಲಂ ಹೀರೋ ಹೆಚ್. ವಿಶ್ವನಾಥ್. ಅದರ ಹೀರೋಯಿನ್ ಯಾರೆಂದು ಕೂಡ ನಮಗೆ ಗೊತ್ತು. ಅವರ ಬುದ್ದಿ ಎಲ್ಲರಿಗೂ ಗೊತ್ತು. ಇದೆಲ್ಲ ಸುಳ್ಳು ಎಂದಾದರೆ ಚಾಮುಂಡಿ ಬೆಟ್ಟದಲ್ಲಿ ಪ್ರಮಾಣ ಮಾಡಲಿ ಎಂದು ಸಾ.ರಾ. ಮಹೇಶ್, ಹೆಚ್. ವಿಶ್ವನಾಥ್ ಗೆ ಸವಾಲು ಹಾಕಿದ್ದಾರೆ. ಇಂದು ಸುದ್ದಿಗಾರರಲ್ಲಿ ಮಾತನಾಡಿದ ಅವರು, ಹೆಚ್. ವಿಶ್ವನಾಥ್ ಒಬ್ಬ ಬ್ಲೂ ಬಾಯ್, ಬ್ಲೂ ಫಿಲಂ ಹೀರೋ ಹೆಚ್. ವಿಶ್ವನಾಥ್. ಅದರ ಹೀರೋಯಿನ್ ಯಾರೆಂದು ಕೂಡ […]

ಸಮ್ಮಿಶ್ರ ಸರಕಾರದ ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಯು.ಟಿ.ಖಾದರ್

Wednesday, June 6th, 2018
u-t-kader-minister

ಮಂಗಳೂರು: ಸಮ್ಮಿಶ್ರ ಸರಕಾರದ ನೂತನ ಸಚಿವರಾಗಿ ಯು.ಟಿ.ಖಾದರ್ ಬೆಂಗಳೂರಿನ ರಾಜಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯಪಾಲ ವಜುಬಾಯಿ ವಾಲಾ ಪ್ರಮಾಣವಚನ ಬೋಧಿಸಿದರು. ಎಚ್.ಡಿ.ರೇವಣ್ಣ, ಆರ್.ವಿ.ದೇಶಪಾಂಡೆ, ಬಂಡೆಪ್ಪ ಕಾಶೆಂಪೂರ್, ಡಿ.ಕೆ.ಶಿವಕುಮಾರ್, ಜಿ.ಟಿ.ದೇವೇಗೌಡ, ಕೆ.ಜೆ.ಜಾರ್ಜ್ , ಡಿ.ಸಿ.ತಮ್ಮಣ್ಣ, ಕೃಷ್ಣ ಭೈರೇಗೌಡ, ಎಂ.ಸಿ. ಮನಗುಳಿ, ಎನ್.ಎಚ್.ಶಿವಶಂಕರ ರೆಡ್ಡಿ, ಎಸ್.ಆರ್.ಶ್ರೀನಿವಾಸ್, ರಮೇಶ್ ಜಾರಕಿಹೊಳಿ, ವೆಂಕಟರಾವ್ ನಾಡಗೌಡ, ಪ್ರಿಯಾಂಕ್ ಖರ್ಗೆ, ಸಾ.ರಾ.ಮಹೇಶ್, ಝಮೀರ್ ಅಹ್ಮದ್ ಖಾನ್ ಹಾಗು ಎನ್. ಮಹೇಶ್ ಈಗಾಗಲೇ ಪ್ರಮಾಣವಚನ ಸ್ವೀಕರಿಸಿದ್ದಾರೆ.

ಜೆಡಿಎಸ್ ಅಭ್ಯಥಿ೯ ಸಾ. ರಾ. ಮಹೇಶ್ ಪರವಾಗಿ ನಟ ಯಶ್ ಪ್ರಚಾರ

Wednesday, May 2nd, 2018
yash

ಮೈಸೂರು: ಚುನಾವಣಾ ಪ್ರಚಾರ ಅಖಾಡಕ್ಕೆ ಸ್ಯಾಂಡಲ್‌‌ವುಡ್‌ ರಾಂಕಿಂಗ್‌ ಸ್ಟಾರ್‌ ಯಶ್‌‌‌‌‌ ಎಂಟ್ರಿ ಕೊಟ್ಟಿದ್ದಾರೆ. ಕೆ.ಆರ್. ನಗರ ಕ್ಷೇತ್ರದ ಶಾಸಕ ಹಾಗೂ ಜೆಡಿಎಸ್ ಅಭ್ಯಥಿ೯ ಸಾ. ರಾ. ಮಹೇಶ್ ಪರವಾಗಿ ನಟ ಯಶ್ ಪ್ರಚಾರಕ್ಕಿಳಿದ್ದಿದ್ದಾರೆ. ಕೆ.ಆರ್. ನಗರದಲ್ಲಿರುವ ಸಾ. ರಾ. ಮಹೇಶ್ ನಿವಾಸಕ್ಕೆ ಯಶ್‌ ಭೇಟಿ ನೀಡಿ ಮಾತುಕತೆ ನಡೆಸಿದರು. ನಂತರ ಅಬ್ಬರ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಯಶ್ ಪ್ರಚಾರಕ್ಕಿಳಿಯುತ್ತಿದ್ದಂತೆ ಕಾಯ೯ಕತ೯ರು ಹಾಗೂ ಅಭಿಮಾನಿಗಳು ಸೆಲ್ಫಿ ತೆಗೆದುಕೊಳ್ಳಲು ಮುಗ್ಗಿಬಿದ್ದರು. ಅಭಿಮಾನಿಗಳನ್ನು ನಿಯಂತ್ರಿಸಿದ ಪೊಲೀಸರು ಪ್ರಚಾರದ ವಾಹನ ತೆರಳಲು ಅನುಕೂಲ ಮಾಡಿಕೊಟ್ಟರು. […]