ಬಿಗ್ ಬಾಸ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ನಟಿ ಆತ್ಮಹತ್ಯೆಗೆ ಶರಣು

Monday, January 25th, 2021
Jayasree

ಬೆಂಗಳೂರು:   ಮಾಗಡಿ ರಸ್ತೆಯ ಪ್ರಗತಿ ಲೇಔಟ್ ನಲ್ಲಿರುವ ಸಂಧ್ಯಾಕಿರಣ ವೃದ್ದಾಶ್ರಮದಲ್ಲಿ ಬಿಗ್ ಬಾಸ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ನಟಿಯೊಬ್ಬರು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಟಿ ಜಯಶ್ರೀ ರಾಮಯ್ಯ ಆತ್ಮಹತ್ಯೆ  ಮಾಡಿಕೊಂಡವರು. ಕಳೆದ ವರ್ಷ ಜುಲೈ ತಿಂಗಳಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಜಯಶ್ರೀ ರಾಮಯ್ಯ, ತಮ್ಮ ಫೇಸ್ ಬುಕ್ ನಲ್ಲಿ “ಖಿನ್ನತೆ ಮತ್ತು ಈ ಜಗತ್ತಿಗೆ ಗುಡ್ ಬೈ” ಎಂದು ಬರೆದುಕೊಳ್ಳುವ ಮೂಲಕ ಆತಂಕ ಸೃಷ್ಟಿಸಿದ್ದರು. ಅಲ್ಲದೆ ಈ ಪೋಸ್ಟ್ ಹಾಕಿದ ನಂತರ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಜಯಶ್ರೀಯನ್ನು ಕೂಡಲೇ […]

ಕನ್ನಡದ ಹಿರಿಯ ನಟ ಸದಾಶಿವ ಬ್ರಹ್ಮಾವರ್ ನಿಧನ

Thursday, September 20th, 2018
sadashiv

ಬೆಂಗಳೂರು: ಕನ್ನಡದ ಹಿರಿಯ ನಟ ಸದಾಶಿವ ಬ್ರಹ್ಮಾವರ್ ನಿನ್ನೆ ಮಧ್ಯಾಹ್ನ ಕೊನೆಯುಸಿರೆಳೆದಿದ್ದಾರೆ. ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದ ಇವರು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ, ನಿನ್ನೆ ನಿಧನರಾಗಿದ್ದಾರೆ. ಕುಟುಂಬದವರನ್ನು ಹೊರತು ಪಡಿಸಿ ಇನ್ಯಾರಿಗೂ ಸಾವಿನ ವಿಷಯ ತಿಳಿಯಬಾರದು ಎಂದು ಮಕ್ಕಳಿಗೆ ಹೇಳಿದ್ದ ಕಾರಣ, ಅವರ ಇಚ್ಛೆಯಂತೆ ನಿನ್ನೆ ಬನಶಂಕರಿ ಚಿತಾಗಾರದಲ್ಲಿ ಕುಟುಂಬವರ್ಗದವರು ಅಂತ್ಯಕ್ರಿಯೆ ಮುಗಿಸಿದ್ದಾರೆ. ಕೆಲ ವರ್ಷದಿಂದ ಮರೆವಿನ ಖಾಯಿಲೆಯಿಂದ ಬಳಲುತ್ತಿದ್ದ ಇವರು, ಇದೇ ಸಮಸ್ಯೆಯಿಂದ ಕಳೆದ ವರ್ಷ ಕುಮಟಾದಿಂದ ಕಾಣೆಯಾಗಿದ್ದರು. ನಟ ಶಿವರಾಜ್ಕುಮಾರ್, ಸುದೀಪ್ ಕೂಡ […]

ಕೆಸಿಸಿ ಕಪ್ 2018 ಉದ್ಘಾಟನೆಗೆ ಸಿಎಂಗೆ ಸುದೀಪ್ ಆಹ್ವಾನ

Tuesday, September 4th, 2018
sudeep

ಬೆಂಗಳೂರು: ಕೆಸಿಸಿ ಕಪ್ 2018 ಉದ್ಘಾಟನೆಗೆ ಆಗಮಿಸುವಂತೆ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ನಟ ಕಿಚ್ಚ ಸುದೀಪ್ ಆಹ್ವಾನ ನೀಡಿದ್ದಾರೆ. ಕೆಸಿಸಿ ಎರಡನೇ ಲೀಗ್ ಇದೇ ತಿಂಗಳು 8 ಮತ್ತು 9 ರಂದು ಎರಡು ದಿನಗಳ ಕಾಲ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಮೊದಲ ದಿನ ಮಧ್ಯಾಹ್ನ 12 ಗಂಟೆಗೆ ಪಂದ್ಯಗಳ ಉದ್ಘಾಟನೆ ನಡೆಯಲಿದೆ. ಈ ಸಮಾರಂಭಕ್ಕೆ ಆಗಮಿಸುವಂತೆ ಸಿಎಂಗೆ ಆಹ್ವಾನಿಸಲಾಗಿದೆ. ಇನ್ನು ಮೊನ್ನೆಯಷ್ಟೆ ವಿಧಾನಸೌಧದಲ್ಲಿ ಡಿಸಿಎಂ ಡಾ.ಜಿ.ಪರಮೇಶ್ವರ್ ಅವರನ್ನು ಭೇಟಿಯಾಗಿದ್ದ ಸುದೀಪ್, ಅವರಿಗೂ ಕೂಡ ಕೆಸಿಸಿ […]

ಶ್ರೀರಾಮುಲು ವಿರುದ್ಧ ಪ್ರಚಾರ ಮಾಡ್ತಿಲ್ಲ… ಸುದೀಪ್ ಸ್ಟಷ್ಟನೆ

Saturday, May 5th, 2018
sriramulu

ಬೆಂಗಳೂರು: ಚುನಾವಣೆ ಸಂದರ್ಭದಲ್ಲಿ ಚಿತ್ರನಟ-ನಟಿಯರು ಪ್ರಚಾರ ಕಾರ್ಯದಲ್ಲಿ ಭಾಗವಹಿಸೋದ್ರಲ್ಲಿ ಸಖತ್ ಬ್ಯುಸಿಯಾಗಿರ್ತಾರೆ. ಸುದೀಪ್, ಯಶ್ ಸೇರಿದಂತೆ ಅನೇಕರು ಈಗಾಗಲೇ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ, ಬದಾಮಿಯ ಪ್ರಚಾರದ ಬಗ್ಗೆ ಒಂದಷ್ಟು ಗೊಂದಲಗಳು ಹರಿದಾಡುತ್ತಿದ್ದವು. ಬದಾಮಿಯಲ್ಲಿ ಸುದೀಪ್ ಸಿಎಂ ಸಿದ್ಧರಾಮಯ್ಯ ಪರ ಪ್ರಚಾರಕ್ಕೆ ಬರ್ತಾರೆ ಎನ್ನುವ ಮಾತು ಕೇಳಿ ಬರುತ್ತಿತ್ತು. ಇದಕ್ಕೆ ಸುದೀಪ್ ಸ್ಪಷ್ಟನೆ ನೀಡಿದ್ದಾರೆ. ಶ್ರೀರಾಮುಲು ಬೆಂಬಲಿಗರು ಮತ್ತು ವಾಲ್ಮೀಕಿ ಜನಾಂಗದವರು ಸಿಎಂ ಪರ ಸುದೀಪ್ ಪ್ರಚಾರವನ್ನು ವಿರೋಧಿಸಿದ್ದರು. ಇದಕ್ಕೆ ಸುದೀಪ್ ಪ್ರತಿಕ್ರಿಯೆ ನೀಡಿದ್ದು ತಾನು ಶ್ರೀರಾಮುಲು […]

‘ಕಟಪಾಡಿ ಕಟ್ಟಪ್ಪ’ನ ಆಡಿಯೋ ರಿಲೀಸ್‌ಗೆ ಸುದೀಪ್‌!

Thursday, April 26th, 2018
sudeep

ಮಂಗಳೂರು: ತುಳು ಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ರಾಜೇಶ್‌ ಬ್ರಹ್ಮಾವರ ನಿರ್ಮಾಣದ ‘ಕಟಪಾಡಿ ಕಟ್ಟಪ್ಪ’ ಸಿನೆಮಾ ಈಗ ರಿಲೀಸ್‌ನ ಹೊಸ್ತಿಲಲ್ಲಿದೆ. ಇದರ ಪೂರ್ವಭಾವಿಯಾಗಿ ಚಿತ್ರದ ಆಡಿಯೋ ರಿಲೀಸ್‌ ಎ. 29ರಂದು ಬೆಳಗ್ಗೆ 10 ಗಂಟೆಗೆ ಮಂಗಳೂರು ಪುರಭವನದಲ್ಲಿ ನಡೆಯಲಿದೆ. ವಿಶೇಷವೆಂದರೆ ಅಭಿನಯ ಚಕ್ರವರ್ತಿ ಸುದೀಪ್‌ ಆಡಿಯೋ ರಿಲೀಸ್‌ ಗಾಗಿ ಮಂಗಳೂರಿಗೆ ಆಗಮಿಸಲಿದ್ದಾರೆ. ತುಳು ಸಿನೆಮಾದ ಕಾರ್ಯಕ್ರಮದಲ್ಲಿ ಸುದೀಪ್‌ ಭಾಗವಹಿಸಲು ಒಪ್ಪಿಕೊಂಡಿರುವುದು ಕೋಸ್ಟಲ್‌ವುಡ್‌ನ‌ಲ್ಲಿ ಗರಿ ಮೂಡಿಸಿದಂತಾಗಿದೆ. ಹಲವಾರು ಸಿನೆಮಾ ಹಾಗೂ ರಾಷ್ಟ್ರೀಯ ಗೌರವ ಪಡೆಯುತ್ತಿರುವ ತುಳು ಸಿನೆಮಾ ರಂಗವನ್ನು […]

ಕುತೂಹಲ ಮೂಡಿಸಿದೆ ಸಿಎಂ ಸಿದ್ದರಾಮಯ್ಯ-ನಟ ಸುದೀಪ್ ಭೇಟಿ

Thursday, April 5th, 2018
sudeep

ಬೆಂಗಳೂರು: ಚಿತ್ರನಟ ಸುದೀಪ್ ಇಂದು ಬೆಳಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸಿಎಂ ಅಧಿಕೃತ ನಿವಾಸ ಕಾವೇರಿಯಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದರು. ಈ ಭೇಟಿ ಸಂದರ್ಭ ಯಾವುದೇ ರಾಜಕೀಯ ಚರ್ಚೆ ಅಥವಾ ಪ್ರಚಾರ ಸಂಬಂಧ ಮಾತುಕತೆ ನಡೆದಿಲ್ಲ ಎಂದು ಹೇಳಲಾಗುತ್ತಿದೆ. ಆದರೆ ಪಕ್ಷದ ಪರ ಪ್ರಚಾರ ಸಂಬಂಧ ಸಿಎಂ ಈ ಸಂದರ್ಭ ಪ್ರಸ್ತಾಪಿಸಿದ್ದು, ಸುದೀಪ್ ಅದಕ್ಕೆ ಯಾವ ಪ್ರತಿಕ್ರಿಯೆ ನೀಡಿದ್ದಾರೆ ಎನ್ನುವುದು ತಿಳಿದು ಬಂದಿಲ್ಲ. ಕಳೆದ ವಾರವಷ್ಟೇ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ ಅವರನ್ನು ಅವರ ನಿವಾಸದಲ್ಲಿ ಭೇಟಿಯಾಗಿದ್ದ […]

2ನೇ ಬಾರಿ ಹೆಚ್‌ಡಿಕೆ- ಸುದೀಪ್‌ ಭೇಟಿ… ಗರಿಗೆದರಿದ ಕುತೂಹಲ

Monday, April 2nd, 2018
kiccha-sudeep

ಬೆಂಗಳೂರು: ರಾಜ್ಯದಲ್ಲಿ ವಿಧಾನಸಭಾ ಚುನಾವಣಾ ಕಾವು ಏರುತ್ತಿರುವ ಬೆನ್ನಲ್ಲೇ ಕನ್ನಡ ಚಿತ್ರರಂಗದ ಬಹುಮುಖ ತಾರೆ ಕಿಚ್ಚ ಸುದೀಪ್ ಅವರು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ ಕುಮಾರಸ್ವಾಮಿ ಅವರನ್ನ 2ನೇ ಬಾರಿ ಭೇಟಿ ಮಾಡಿರುವುದು ತೀವ್ರ ಕುತೂಹಲ ಮೂಡಿಸಿದೆ. ಹೌದು,ಇಂದು ನಟ ಸುದೀಪ್, ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಮನೆಗೆ ಭೇಟಿ ನೀಡಿದರು. ಉಭಯ ಕುಶಲೋಪರಿ ವಿಚಾರಿಸಿದರು, ಕುಮಾರಸ್ವಾಮಿ, ಅನಿತಾ ಕುಮಾರಸ್ವಾಮಿ ಹಾಗು ನಟ ನಿಖಲ್ ಜೊತೆ ಉಪಹಾರ ಸೇಚಿಸಿದರು. ನಂತರ ಪ್ರಸ್ತುತ ರಾಜಕೀಯ ವಿದ್ಯಮಾನಗಳ ಬಗ್ಗೆ ಹೆಚ್‌ಡಿಕೆ ಕುಟುಂಬದ […]

ಬಿಗ್‌ಬಾಸ್‌ ಟ್ರೋಫಿಗೆ ಮುತ್ತಿಕ್ಕಿದ ಚಂದನ್‌ ಶೆಟ್ಟಿ… ದಿವಾಕರ್‌ ರನ್ನರ್‌ ಅಪ್‌!

Monday, January 29th, 2018
chandan-shetty

ಬೆಂಗಳೂರು: ಕನ್ನಡದ ಬಿಗ್‌ಬಾಸ್ ಸೀಸನ್‌ 5 ಕ್ಕೆ ಅದ್ದೂರಿಯಾಗಿ ತೆರೆ ಎಳೆಯಲಾಯಿತು. ಸ್ಪರ್ಧಿ ಚಂದನ್‌ ಶೆಟ್ಟಿ ಬಿಗ್‌ಬಾಸ್ ವಿನ್ನರ್ ಪಟ್ಟದೊಂದಿಗೆ ಹೊರ ಬಂದಿದ್ದಾರೆ. ಹೌದು, ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್‌ಬಾಸ್‌ 5 ನೇ ಸೀಸನ್ ಮುಕ್ತಾಯವಾಗಿದೆ. ಈ ಬಾರಿಯ ಬಿಗ್‌ಬಾಸ್ ವಿನ್ನರ್‌ ಯಾರಾಗಲಿದ್ದಾರೆ ಎಂದು ಇಡೀ ಕರ್ನಾಟಕದ ಜನತೆ ಕಾತುರದಿಂದ ಕಾಯುತ್ತಿದ್ದರು. ಸದ್ಯ ಇದು ರಿವೀಲ್ ಆಗಿದ್ದು, ಸ್ಪರ್ಧಿ ಚಂದನ್‌ ಶೆಟ್ಟಿ ಬಿಗ್‌ಬಾಸ್‌ ವಿನ್ನರ್ ಆಗುವುದರ ಜತೆಗೆ ಬಿಗ್‌ಬಾಸ್‌ ಟ್ರೋಫಿಗೆ ಮುತ್ತಿಕ್ಕಿದ್ದಾರೆ. ಈ ಬಾರಿಯ […]

ವನದುರ್ಗ ಜಲಂತರ್ಗತ ನಾಗ ಸಾನಿಧ್ಯಕ್ಕೆ ನಟ ಕಿಚ್ಚ ಸುದೀಪ್, ರವಿಶಂಕರ್ ಭೇಟಿ

Saturday, November 5th, 2016
Sudeep

ಮಂಗಳೂರು: ಬಂಟ್ವಾಳ ತಾಲೂಕಿನ ಮೊಡಂಕಾಪುವಿನಲ್ಲಿರುವ ಶ್ರೀ ವನದುರ್ಗ ಜಲಂತರ್ಗತ ನಾಗ ಸಾನಿಧ್ಯ ಇತ್ತೀಚೆಗೆ ಸ್ಯಾಂಡಲ್‌ವುಡ್ ನಟರ ಭೇಟಿಯಿಂದ ಸುದ್ದಿಯಾಗುತ್ತಿದೆ. ಇದೀಗ ಅಭಿನಯ ಚಕ್ರವರ್ತಿ, ಬಿಗ್‌ಬಾಸ್ ನಿರೂಪಕ ಕಿಚ್ಚ ಸುದೀಪ್, ಜನಪ್ರಿಯ ಖಳನಟ ರವಿಶಂಕರ್, ರವೀಶ್ ಅವರ ಸರದಿ. ಇಂದು ಮೊಡಂಕಾಪುವಿನಲ್ಲಿ ನಾಗದೇವರ ದರ್ಶನ ಪಡೆದ ನಟರು, ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ದೇವಾಲಯದ ಮುಖ್ಯಸ್ಥ ಗುರುದತ್ ಶೆಣೈ, ಪಾಂಡುರಂಗ ಶೆಣೈ, ಭೂಮಿಕ ಶೆಣೈ, ರಾಜೇಶ್ ಭಟ್ ಮತ್ತು ಪುಷ್ಪರಾಜ್ ಅವರು ನಟರನ್ನು ಸ್ವಾಗತಿಸಿದರು.

‘ವರದನಾಯಕ’ನಿಗೆ ದೊಡ್ಡ ಶಕ್ತಿ ಕಿಚ್ಚ ಸುದೀಪ್

Tuesday, November 13th, 2012
Varadanayaka

ಬೆಂಗಳೂರು :’ವರದನಾಯಕ’ ಚಿತ್ರವು ಸುದೀಪ್ ನಾಯಕತ್ವದ ಚಿತ್ರವೇ ಇರಬೇಕು ಎಂದುಕೊಳ್ಳುವಷ್ಟರ ಮಟ್ಟಿಗೆ ‘ವರದನಾಯಕ’ ಚಿತ್ರದ ಪೋಸ್ಟರುಗಳಲ್ಲಿ ಕಿಚ್ಹ ಸುದೀಪ್ ರವರೆ ರಾರಾಜಿಸುತ್ತಿದ್ದಾರೆ. ಆದರೆ ವಾಸ್ತವದಲ್ಲಿ ಈ ‘ವರದನಾಯಕ’ ಚಿತ್ರದ ನಾಯಕ ಸುದೀಪ್ ಅವರಲ್ಲ, ಚಿರಂಜೀವಿ ಸರ್ಜಾ. ಚಿತ್ರದಲ್ಲಿ ಸುದೀಪ್ ನಾಯಕ ಚಿರಂಜೀವಿ ಸರ್ಜಾ ಅಣ್ಣನ ಪಾತ್ರದಲ್ಲಿ ನಟಿಸಿದ್ದಾರೆ. ಇದೇ ಹಿನ್ನೆಲೆಯಲ್ಲಿ ಕೋಟಿ ಕೋಟಿ ರೂಪಾಯಿಗಳನ್ನು ಬಿಡುಗಡೆಗೆ ಮೊದಲೇ ಚಿತ್ರ ಬಾಚಿಕೊಂಡಿದೆ. ಇಲ್ಲಿ ಚಿತ್ರದ ನಾಯಕ ಚಿರಂಜೀವಿ ಸರ್ಜಾ ಆದರೂ ಕಿಚ್ಹ ಸುದೀಪ್ ರವರೆ ಪೋಸ್ಟರ್ ಗಳಲ್ಲಿ ಮಿಂಚುತ್ತಿದ್ದಾರೆ. […]